ಬೆಂಗಳೂರು : ಸೋಸಲೆ ಶ್ರೀ ವ್ಯಾಸರಾಜ ಮಠಾಧೀಶರಾದ ಶ್ರೀ ಶ್ರೀ 1008 ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ಆದೇಶದಂತೆ ಸುಬ್ರಹ್ಮಣ್ಯನಗರದ ಸೋಸಲೆ ಶ್ರೀ ವ್ಯಾಸರಾಜ ಮಠದದಲ್ಲಿ ಜೂನ್ 10 ರಂದು ‘ಹರಿದಾಸ ಸಾಹಿತ್ಯ ಪ್ರವರ್ತಕ’ರಾದ ಶ್ರೀ ಶ್ರೀಪಾದರಾಜರ ಆರಾಧನೆಯ ಪ್ರಯುಕ್ತ ಅಂದು ಬೆಳಿಗ್ಗೆ ಫಲ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ,
ಜಕ್ಕೂರಿನ ಶ್ರೀ ವಿಜಯ ವಿಠಲ ಭಜನಾ ಮಂಡಳಿ ಹಾಗೂ ಇನ್ನಿತರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ರಥೋತ್ಸವ, ಶ್ರೀ ರಾಘವೇಂದ್ರ ಆಚಾರ್ಯರಿಂದ ಶ್ರೀ “ಶ್ರೀಪಾದರಾಜರ ಮಹಿಮೆ” ವಿಷಯವಾಗಿ ಪ್ರವಚನ, ಮಹಾಮಂಗಳಾರತಿ, ಅಲಂಕಾರ ಪಂಕ್ತಿ ಸೇವಾ ಕಾರ್ಯಗಳು ಜರುಗಿದವು ಎಂದು ಶ್ರೀ ಸೋಸಲೆ ಪ್ರಕಾಶ್ ತಿಳಿಸಿದರು.