Live Stream

[ytplayer id=’22727′]

| Latest Version 8.0.1 |

Bengaluru UrbanState News

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ

Bengaluru : ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ನಟಸಾರ್ವಭೌಮ ಡಾ.ರಾಜ್ ಕುಮಾರ್ (Dr. Rajkumar Birthday) ರವರ 97 ನೇ ಜನ್ಮದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು ಮಾನ್ಯ ಇಂಧನ ಸಚಿವರಾದ ಶ್ರೀ ಕೆ.ಜೆ.ಜಾರ್ಜ್ (K.J. Geroge) ರವರು ಕಲ್ಯಾಣನಗರದಲ್ಲಿ ಸುಸಜ್ಜಿತವಾಗಿ ಸುಂದರವಾಗಿ, ಬಯಲು ರಂಗಮಂದಿರ ಸಹಿತ ನವೀಕರಣಕೊಂಡಿರುವ ಡಾ.ರಾಜ್ ಕುಮಾರ್ ಉದ್ಯಾನವನವನ್ನು ಸಾರ್ವಜನಿಕರ ಸೇವೆಗಾಗಿ ಜನಾರ್ಪಣೆಗೊಳಿಸಿದರು .ಇದೇ ಸಂಧರ್ಭದಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜನಪ್ರತಿನಿಧಿಯೊಬ್ಬರು ಡಾ.ರಾಜ್ ಕುಮಾರ್ ರವರ ಜೀವನ ಸಾಧನೆಯನ್ನು ಕುರಿತಾದ ಪುಸ್ತಕಗಳನ್ನು ಖರೀದಿಸಿ ಮನೆ- ಮನೆಗೂ ಡಾ.ರಾಜ್ ಕುಮಾರ್ ಎಂಬ ಶೀರ್ಷಿಕೆಯಡಿಯಲ್ಲಿ ನೂರಾರು ಪುಸ್ತಕಗಳನ್ನು ಜನರಿಗೆ ಉಚಿತವಾಗಿ ವಿತರಿಸುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಧರ್ಮದರ್ಶಿ ಶ್ರೀ ಪಿ.ಬಾಬು , ಬಿ.ಡಿ.ಎ ಸದಸ್ಯರಾದ ಬಿ.ಎನ್.ಆರ್.ಅಮರ್ ನಾಥ್, ಸರ್ವಜ್ಞ ನಗರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಪಾ.ಮುರುಳೀಧರ್ ವಾರ್ಡ್ ಅಧ್ಯಕ್ಷರುಗಳಾದ ಪ್ರೇಮಾವತಿ.ಬಿ  ರಾಜಾ, ಕಸಾಪ ಮಹಿಳಾ ಸದಸ್ಯರಾದ ಕವಿತಾ ರವೀಂದ್ರ, ರತ್ನಗೋಪಾಲ್ ಕವಿ ಸರ್ವಜ್ಞ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕಮಲೇಶ್ ಓಂ ಶಕ್ತಿ ರಾಜು ಪತ್ರಕರ್ತರಾದ ರಮೇಶ್ ಮುಂತಾದ  ಸ್ಥಳೀಯ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ವರ್ಧಮಾನ ಕಳಸೂರು ರವರು ಉಪಸ್ಥಿತರಿದ್ದರು.
ಉದ್ಘಾಟನೆ ಮಾಡುತ್ತಾ ಸಚಿವರಾದ ಜಾರ್ಜ್ ರವರು ನಿಮ್ಮದೇ ಉದ್ಯಾನವನ ಇದನ್ನು ನೀವೆಲ್ಲ ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು. ಸಚಿವರು ವಿಶೇಷ ಚೇತನರಿಗೆ ವೀಲ್ ಚೇರ್ ವಿತರಣೆ ಮಾಡಿದರು.
ಧರ್ಮದರ್ಶಿಗಳಾದ ಬಾಬು ಮತ್ತು ಪ್ರೇಮಾವತಿ ರವರು ತಮ್ಮ ಸಂಸ್ಥೆಯ ಪರವಾಗಿ ವಿದ್ಯಾರ್ಥಿಗಳಿಗೆ ಆಟೋಪಕರಣಗಳನ್ನು ವಿತರಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಪಾ. ಮುರಳಿಧರ್ ಅವರು ಸರ್ವರನ್ನು ಸ್ವಾಗತಿಸಿದರು ಓಂ ಶಕ್ತಿ ರಾಜರವರು ಕೊನೆಯಲ್ಲಿ ವಂದನಾರ್ಪಣೆಗಳನ್ನು ಸಲ್ಲಿಸಿದರು.

ವೀ ಕೇ ನ್ಯೂಸ್
";