Live Stream

[ytplayer id=’22727′]

| Latest Version 8.0.1 |

Crime News

ಬೆಂಗಳೂರು-ಚೆನ್ನೆಎಕ್ಸ್ಪ್ರೆಸ್ ಹೈವೇ ಅಪಘಾತವಲ್ಲ, ಬೆಮೆಲ್ ಸಮೀಪದ್ದು : ಎಸ್‌ಪಿ ಸ್ಪಷ್ಟನೆ

ಬೆಂಗಳೂರು-ಚೆನ್ನೆಎಕ್ಸ್ಪ್ರೆಸ್ ಹೈವೇ ಅಪಘಾತವಲ್ಲ, ಬೆಮೆಲ್ ಸಮೀಪದ್ದು : ಎಸ್‌ಪಿ ಸ್ಪಷ್ಟನೆ

ಕೆಜಿಎಫ್., ಜೂ. 10 : ಸೋಮವಾರ (9-6-2025) ದಂದು ಬೆಮೆಲ್‌ನಗರ ಸಮೀಪದ ಹ್ಯಾಪಿಹೋಂ ಬಳಿ ಸಂಭವಿಸಿದ ರಸ್ತೆ ಅಪಘಾತವನ್ನು ಬೆಂಗಳೂರು-ಚೆನ್ನೆ ಎಕ್ಸ್ಪ್ರೆಸ್ ಹೈವೇ ನಲ್ಲಿ ಸಂಭವಿಸಿರುವುದೆ0ದು ಕೆಲವೊಂದು ಮಾಧ್ಯಮಗಳಲ್ಲಿ ವರದಿಯಾಗಿರುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾ0ತರಾಜು ಅವರು ಸ್ಪಷ್ಟನೆ ನೀಡಿದ್ದಾರೆ.

ಬೆಮೆಲ್‌ನಗರ ಪೊಲೀಸ್ ಠಾಣೆ ಸರಹದ್ದು, ಆಲದಮರ ದಿಂದ ಕೃಷ್ಣಾವರಂ ಕಡೆಗೆ ಹೋಗುವ ರಾಜ್ಯ ಹೆದ್ದಾರಿ 95 ರಸ್ತೆಯಲ್ಲಿ ಹ್ಯಾಪಿಹೋಂ ಸಮೀಪ ಕಾರೊಂದು ಸ್ವತಃ ರಸ್ತೆ ಅಪಘಾತಕ್ಕಿಡಾಗಿ ಮೂವರು ಮರಣ ಹೊಂದಿರುವ ವಿಷಯಕ್ಕೆ ಸಂಬ0ಧಿಸಿದ0ತೆ ಮಾದ್ಯಮಗಳಲ್ಲಿ ಬೆಂಗಳೂರು-ಚೆನ್ನೆ ಎಕ್ಸ್ಪ್ರೆಸ್ ಹೈವೇ ನಲ್ಲಿ ನಡೆದ ಅಪಘಾತ ಎಂದು ಪ್ರಸಾರವಾಗಿರುತ್ತದೆ.
ಆಲದಮರದ ಕಡೆಯಿಂದ ಕೃಷ್ಣಾವರಂ ಕಡೆಗೆ ಹೋಗುತ್ತಿದ್ದ ಏಂ-51-ಒಖಿ-5312 ಕಾರು ಹ್ಯಾಪಿಹೋಂ ಸಮೀಪ ಡಿವೈಡರ್‌ಗೆ ಡಿಕ್ಕಿ ಪಡಿಸಿ ನಂತರ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಪಡಿಸಿದಾಗ ಕಾರಿನಲ್ಲಿದ್ದ ಜಾನ್‌ಬೇಕನ್, ನಾಗರಾಜ್ ಮತ್ತು ಆಕಾಶ್ ಮೃತಪಟ್ಟಿದ್ದು, ಉಳಿದ ತಮಿಳರಸನ್, ರಾಜ್‌ಕುಮಾರ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುತ್ತಾರೆ.
ಈ ಅಪಘಾತವು ಆಲದಮರದಿಂದ ಕೃಷ್ಣಾವರಂಗೆ ಹೋಗುವ ಮಾರ್ಗಮಧ್ಯೆ ಸಂಭವಿಸಿರುತ್ತದೆ. ಇದು ಬೆಂಗಳೂರು-ಚೆನ್ನೆ ಎಕ್ಸ್ಪ್ರೆಸ್ ಹೈವೇ ನಲ್ಲಿ ಸಂಭವಿಸಿರುವುದಿಲ್ಲವೆ0ದು ಎಸ್‌ಪಿ ಶಾಂತರಾಜು ಅವರು ವಿವರಿಸಿದ್ದಾರೆ.
ಎಕ್ಸ್ಪ್ರೆಸ್ ರಹದಾರಿಯಲ್ಲಿ ವೇಗ ನಿಯಂತ್ರಣಕ್ಕೆ ಕ್ರಮ :

ಬೆಂಗಳೂರು-ಚೆನ್ನೆ ಎಕ್ಸ್ಪ್ರೆಸ್ ಹೈವೇ ನಲ್ಲಿ ಓಡಾಡುವ ವಾಹನಗಳ ವೇಗವನ್ನು ನಿಯಂತ್ರಿಸಲು, ಮೋಟಾರು ವಾಹನ ಕಾಯ್ದೆಯಡಿ ಅತಿವೇಗ ಚಾಲನೆ ವಿರುದ್ದ ಪ್ರಕರಣವನ್ನು ದಾಖಲಿಸಲು ಸ್ಪೀಡ್ ರಾಡಾರ್ ಗನ್ ಮೂಲಕ ಕ್ರಮ ಕೈಗೊಳ್ಳಲಾಗಿದೆ. ಜೂ. 09 ರಂದು 11 ಅತಿವೇಗ ಚಾಲನೆ ಪ್ರಕರಣಗಳನ್ನು ದಾಖಲಿಸಿ, ರೂ. 11,000/- ದಂಡ ವಿಧಿಸಲಾಗಿದೆ ಮತ್ತು ಜೂ. 10 ರಂದು 05 ಅತಿವೇಗ ಚಾಲನೆ ಪ್ರಕರಣಗಳನ್ನು ದಾಖಲಿಸಿ, ರೂ. 5,000/- ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾ0ತರಾಜು ಅವರು ತಿಳಿಸಿದ್ದಾರೆ. ಇದೇ ರೀತಿ ಅತಿವೇಗ ಚಾಲನೆ ಮಾಡುವವರ ವಿರುದ್ದ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಮಾಹಿತಿ ನೀಡಬಯಸುತ್ತೇನೆ.
ಎಕ್ಸ್ಪ್ರೆಸ್ ಹೈವೇ ವ್ಯಾಪ್ತಿಯ ಬೇತಮಂಗಲ, ಬಂಗಾರಪೇಟೆ ಮತ್ತು ಬೆಮೆಲ್‌ನಗರ ಪೊಲೀಸ್ ಠಾಣೆಗಳಿಗೆ ವಾಹನಗಳ ವೇಗವನ್ನು ಪರಿಶೀಲಿಸುವ ಸ್ಪೀಡ್ ರಾಡಾರ್ ಗನ್ ಗಳನ್ನು ಒದಗಿಸಲಾಗಿದ್ದು, ಆಯಾ ಪೊಲೀಸ್ ಠಾಣಾಧಿಕಾರಿಗಳಿಗೆ ವೇಗದ ಪರಿಶೀಲನೆ ಮಾಡುವ ತರಬೇತಿಯನ್ನು ಈ ಹಿಂದೆಯೇ ನೀಡಲಾಗಿದ್ದು, ಜೂ. 09 ರಂದು ಪೂನರ್ಮನನ ತರಬೇತಿ ಸಹ ಮತ್ತೊಮ್ಮೆ ನೀಡಲಾಗಿರುತ್ತದೆ. ಎಕ್ಸ್ಪ್ರೆಸ್ ಹೈವೇ ಮೂಲಕ ಸಂಚಾರ ಮಾಡುವಂತಹ ಎಲ್ಲಾ ವಾಹನಗಳ ವೇಗದ ಪರಿಶೀಲನೆ ನಡೆಸಿ, ಅತಿವೇಗದಿಂದ ಚಾಲನೆ ಮಾಡುವ ವಾಹನ ಚಾಲಕರ ವಿರುದ್ದ ಮೋಟಾರು ವಾಹನ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಸ್‌ಪಿ ಶಾಂತರಾಜು ಅವರು ತಿಳಿಸಿದರು.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";