Live Stream

[ytplayer id=’22727′]

| Latest Version 8.0.1 |

Bengaluru UrbanEducation News

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗೆ ತಯಾರಿ: ಮಾನಸಿಕ ಮತ್ತು ದೈಹಿಕ ಆರೋಗ್ಯದ ಮಹತ್ವ-ಎನ್.ಎಸ್.ಸೋಮಶೇಖರ್,

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗೆ ತಯಾರಿ: ಮಾನಸಿಕ ಮತ್ತು ದೈಹಿಕ ಆರೋಗ್ಯದ ಮಹತ್ವ-ಎನ್.ಎಸ್.ಸೋಮಶೇಖರ್,

Bengaluru : ಮಾರ್ಚ್ ತಿಂಗಳು ದಿನಾಂಕ: 18-03-2026 ರಿಂದ ಎಸ್.ಎಸ್.ಎಲ್.ಸಿ. (SSLC Examinations) ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿವೆ.ಈಗಾಗಲೆ ಹಲವಾರು ಪೂರ್ವ ಸಿದ್ಧತಾ ಹಂತದ ಪರೀಕ್ಷೆಗಳು ನಡೆದಿದ್ದು ವಾರ್ಷಿಕ ಪರೀಕ್ಷೆಯ ಬಗ್ಗೆ ನಿಮ್ಮಲ್ಲಿ ಆತ್ಮವಿಶ್ವಾಸ ವನ್ನು ಹೆಚ್ಚಿಸಿವೆ. ಅದಕ್ಕಾಗಿ ವಿಷಯವಾರು ಕೊನೆಯ ಹಂತದ ಪೂರ್ವಸಿದ್ಧತೆ (preparations) ಯನ್ನು ನೀವು ಮಾಡಿಕೊಳ್ಳಲೇಬೇಕಿದೆ.

“ಪರೀಕ್ಷೆಯೊಂದು ಹಬ್ಬ ಅದನ್ನು ಸಂಭ್ರಮಿಸಿ. ನೆನಪಿರಲಿ ಪರೀಕ್ಷೆ ಸಮಯ ಹತ್ತಿರಕ್ಕೆ ಬಂದಂತೆ ಯಾವುದೇ ಪರೀಕ್ಷಾ ಭಯ, ಒತ್ತಡಕ್ಕೆ ಒಳಗಾಗದೆ, ಅತ್ಯಂತ ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ, ಖಂಡಿತ ಯಶಸ್ಸು ನಿಮ್ಮದೆ. ನಿಮ್ಮ ಗುರಿಯನ್ನು ತಲುಪಲು ನಿಮಗಿರುವುದು ಇನ್ನೊಂದೇ

ಎಸ್.ಎಸ್.ಎಲ್.ಸಿ (Secondary School Leaving Certificate) ಜೀವನದಲ್ಲಿ ಅತ್ಯಂತ ಪ್ರಮುಖ ಹಂತವಾಗಿದೆ.

ಪರೀಕ್ಷೆಗೆ ತಯಾರಾಗುವಾಗ ಹಲವರು ಹೆಚ್ಚು ಸಮಯ ಓದುವುದರ ಮೇಲೆ ಮಾತ್ರ ಗಮನ ಕೊಡುತ್ತಾರೆ. ಆದರೆ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಓದು ಮಾತ್ರ ಸಾಕಾಗುವುದಿಲ್ಲ. ಉತ್ತಮ ಮಾನಸಿಕ ಹಾಗೂ ದೈಹಿಕ ಆರೋಗ್ಯವೂ ಸಮಾನವಾಗಿ ಮುಖ್ಯವಾಗಿದೆ.

ಸರಿಯಾದ ಓದು ವೇಳಾಪಟ್ಟಿ ರೂಪಿಸಿಕೊಳ್ಳಿ, ಸಕಾರಾತ್ಮಕ ಮನೋಭಾವ ಹೊಂದಿರಿ. ಪರೀಕ್ಷಾ ಒತ್ತಡವು ಸಾಮಾನ್ಯವಾದದ್ದು, ಆದರೆ ವಿದ್ಯಾರ್ಥಿಗಳು ಶಾಂತವಾಗಿಯೂ ಸಕಾರಾತ್ಮಕ ಮನೋಭಾವದೊಂದಿಗೆ ಇರಬೇಕು. ಆಳವಾದ ಉಸಿರಾಟ, ಚಿಕ್ಕ ಧ್ಯಾನ, ಅಥವಾ ಪೋಷಕರೊಂದಿಗೆ ಹಾಗೂ ಶಿಕ್ಷಕರೊಂದಿಗೆ ಮಾತನಾಡುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಮರ್ಪಕ ನಿದ್ರೆ, ಪಡೆಯಿರಿ
ಆರೋಗ್ಯಕರ ಆಹಾರ ಸೇವನೆ ಮಾಡಿ, ಪರೀಕ್ಷಾ ಸಮಯದಲ್ಲಿ ಸಮತೋಲನಯುತ ಆಹಾರ ಬಹಳ ಮುಖ್ಯ ಹಣ್ಣುಗಳು, ತರಕಾರಿಗಳು, ಕಾಯಿ-ಬೀಜಗಳು ಜೊತೆಗೆ ಬಾದಾಮಿ, ಪಿಸ್ತಾ, ವಾಲ್ಬಟ್ ಮಿತವಾಗಿ ಸೇವಿಸಿ ತಪ್ಪದೇ ಒಂದು ಲೋಟ ಬಾದಾಮಿ ಹಾಲು/ ಹಾಲು ಮತ್ತು ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸಿ ಸಾಕಷ್ಟು ನೀರು ಮತ್ತು ಕಲ್ಲಂಗಡಿ ಹಣ್ಣನ್ನು ಸೇವಿಸಿ.

ಕೊನೆಯ ಕ್ಷಣದ ಒತ್ತಡ ತಪ್ಪಿಸಿ
ಕೊನೆಯ ಕ್ಷಣದಲ್ಲಿ ತುಂಬಾ ಓದುವುದರಿಂದ ಗೊಂದಲ ಮತ್ತು ಒತ್ತಡ ಹೆಚ್ಚಾಗಬಹುದು. ಆದ್ದರಿಂದ ನಿಯಮಿತವಾಗಿ ಪುನರ್‌ಮನನ ಮಾಡಿ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದು ಉತ್ತಮ.

ಅಗತ್ಯವಿದ್ದರೆ ಸಹಾಯ ಕೇಳಿ
ಶಿಕ್ಷಕರು, ಪೋಷಕರು ಅಥವಾ ಸ್ನೇಹಿತರ ಸಹಾಯ ಪಡೆಯಲು ಹಿಂಜರಿಯಬಾರದು. ಅವರ ಪ್ರೋತ್ಸಾಹವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮುನ್ನ ಇವು ನಿಮಗೆ ತಿಳಿದಿರಲಿ:
ಉತ್ತರ ಪತ್ರಿಕೆಯಲ್ಲಿ ಬರವಣಿಗೆ ಅಂದವಾಗಿರಲಿ,ಅನಾವಶ್ಯಕವಾಗಿ ಗೀಚುವುದು ಬೇಡ. ಸಮಯದ ಅರಿವಿರಲಿ.

ಇರುವ ಸಮಯದಲ್ಲಿ ಸಾಕಷ್ಟು ಮಾದರಿ/ಹಿಂದಿನ ವರ್ಷದ/ಮಾದರಿಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ.

ಓದುವ ಭರದಲಿ ಆರೋಗ್ಯವನ್ನು ಕಳೆದುಕೊಳ್ಳದಿರಿ. ಆರೋಗ್ಯಕರ ಆಹಾರವನ್ನು ಸೇವಿಸಿ. ಉತ್ತಮ ನಿದ್ದೆ ಅಗತ್ಯ

ಬಹು ಮುಖ್ಯವಾಗಿ ವಿದ್ಯಾರ್ಥಿಗಳು ಟಿ.ವಿ. ಮೊಬೈಲ್‌ನಿಂದ ದೂರವಿದ್ದು, ಅಧ್ಯಯನದ ಕಡೆ ಹೆಚ್ಚಿನ ಗಮನ ನೀಡಿ.

ಪರೀಕ್ಷೆಯ ಪ್ರವೇಶ ಪತ್ರ ಕಳೆದು ಹೋದಲ್ಲಿ ಆತಂಕಕ್ಕೆ ಒಳಗಾಗುವುದು ಬೆಡ ಮೊದಲೆ ಒಂದು ಅಥವಾ ಎರಡು ಜರಾಕ್ಸ್ ಪ್ರತಿಯನ್ನು ನಿಮ್ಮ ಹತ್ತಿರ ಇಟ್ಟುಕೊಳ್ಳುವುದು ಅಥವಾ ನಿಮ್ಮ ಶಾಲೆಯ ಮುಖ್ಯಸ್ಥರನ್ನು ಸಂಪರ್ಕಿಸುವುದು.

ಪರೀಕ್ಷೆಯೊಂದು ಭಯವಲ್ಲ, ಅದೊಂದು ಹಬ್ಬ ಸಂಭ್ರಮಿಸಿ. ಖಂಡಿತ ಯಶಸ್ಸು ನಿಮ್ಮದೇ. ನಿಮಗೆಲ್ಲರಿಗೂ ಶುಭವಾಗಲಿ.

ಸೋಮಶೇಖರ್ ಎನ್ ಎಸ್
(M.A, B.Ed, L.L.B)
ಖಚಾಂಚಿ, ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ

ವೀ ಕೇ ನ್ಯೂಸ್
";