Live Stream

[ytplayer id=’22727′]

| Latest Version 8.0.1 |

Local News

ವಿಶ್ವಪರಿಸರ ದಿನಾಚರಣೆ: ಪರಿಸರ ಸ್ನೇಹಿ ಗಿಡ ನೆಡುವ ಕಾರ್ಯಕ್ರಮ, ಅಲಂಕಾರಿಕ ಸಸಿಗಳ ವಿತರಣೆ 

ವಿಶ್ವಪರಿಸರ ದಿನಾಚರಣೆ: ಪರಿಸರ ಸ್ನೇಹಿ ಗಿಡ ನೆಡುವ ಕಾರ್ಯಕ್ರಮ, ಅಲಂಕಾರಿಕ ಸಸಿಗಳ ವಿತರಣೆ 

ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರ: ಕಮಲನಗರ: ಶಕ್ತಿಗಣಪತಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ ಮತ್ತು ಸಾರ್ವಜನಿಕರಿಗೆ ಉಚಿತವಾಗಿ ಅಲಂಕಾರಿಕ ಸಸಿಗಳ ವಿತರಣಾ ಕಾರ್ಯಕ್ರಮ. ಆಡಳಿತ ಪಕ್ಷದ ನಾಯಕ ಎಮ್.ಶಿವರಾಜುರವರು ಮತ್ತು ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಎಸ್.ಕೇಶವಮೂರ್ತಿರವರು ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆ ಅಚರಿಸಿದರು.

ಇದೇ ಸಂದರ್ಭದಲ್ಲಿ *ಎಸ್.ಕೇಶವಮೂರ್ತಿರವರು* ಮಾತನಾಡಿ ಬೆಂಗಳೂರುನಗರ ಅಭಿವೃದ್ದಿಗಾಗಿ ಮರಗಿಡಗಳನ್ನು ಕಡಿದು ಕಾಂಕ್ರೀಟ್ ನಗರ ಎಂಬ ಕುಖ್ಯಾತಿ ಪಡೆದಿದೆ.

ಮಹಾಲಕ್ಷ್ಮಿಪುರಂ ಮತ್ತು ಶಕ್ತಿಗಣಪತಿನಗರ, ಶಂಕರಮಠ ವಾರ್ಡ್ ನಲ್ಲಿ ಕಳೆದ ವರ್ಷಗಳಿಂದ ಸಸಿಗಳನ್ನು ನೆಟ್ಟು ಪೋಷಣೆ ಮಾಡಿಕೊಂಡು, ಮರಗಳನ್ನಾಗಿ ಬೆಳಸಲಾಗುತ್ತಿದೆ

ಬೆಂಗಳೂರುನ ನಗರಕ್ಕೆ ಗ್ರೀನ್ ಸಿಟಿ, ಗಾರ್ಡನ್ ಸಿಟಿ ಎಂಬ ಖ್ಯಾತಿ ಇದೆ ಅದನ್ನು ಉಳಿಸಿ, ಬೆಳಸಬೇಕು ಎಂದರೆ ಪ್ರತಿಯೊಬ್ಬರು ಅವರ ಮನೆ ಮುಂದೆ ಸಸಿ ನೆಟ್ಟು ಪೋಷಣೆ ಮಾಡಬೇಕು ಇದರಿಂದ ಹಸಿರು ಬೆಂಗಳೂರು ನಿರ್ಮಾಣವಾಗಲಿದೆ ಎಂದು ಹೇಳಿದರು.

*ಎಮ್.ಶಿವರಾಜುರವರು* ಮಾತನಾಡಿ ಪರಿಸರ ಉಳಿದರೆ ನಾಡು ಉಳಿಯುತ್ತದೆ ಪರಿಸರ ಹಾಳಾದರೆ ಇಡಿ ಮನುಕುಲುವೇ ನಾಶವಾಗುತ್ತದೆ.

ಪರಿಸರ ಉಳಿಯಬೇಕಾದರೆ ಪ್ರತಿಯೊಬ್ಬರು ಸಸಿ ನೆಟ್ಟು ಮರವಾಗಿ ಬೆಳಸಬೇಕು. ಮರ ಗಿಡಗಳು ಇದ್ದಾಗ ಉತ್ತಮ ವಾತವರಣ, ಅಮ್ಲಜನಕ ದೊರೆಯುತ್ತದೆ ಇದರಿಂದ ಆರೋಗ್ಯವಂತರಾಗಿ ಬಾಳಬಹುದು.

ಮನೆ ಮುಂದೆ ಗಿಡ ನೆಡಲು ಸಾಧ್ಯವಾದವರಿಗೆ ಅಲಂಕಾರಿಕ ಸಸಿಗಳನ್ನು ನೀಡಲಾಗುತ್ತಿದೆ ಅಲಂಕಾರಿಕ ಸಸಿಗಳಿಂದ ಮನೆಯ ಸೌಂದರ್ಯದ ಜೊತೆಯಲ್ಲಿ ಉತ್ತಮ ಪರಿಸರ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ನರಸಿಂಹಮೂರ್ತಿ, ಜಿ.ಜನಾರ್ಧನ್, ಕೆ.ವಿ.ನಟರಾಜ್, ಪರಿಸರ ರಾಮಕೃಷ್ಣ, ಸುರೇಶ್, ಚಂದ್ರಶೇಖರ್, ಗಂಗಾಧರ್, ಶ್ರೀನಿವಾಸ್ , ಚಂದ್ರಕಾಸಿನ್ ಮತ್ತು ಶಾಲೆಯ ಮಕ್ಕಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";