ಬೆಂಗಳೂರಿನ ಲಯನ್ಸ್ ರಕ್ತ ನಿಧಿ, ಜೈನ ಆಸ್ಪತ್ರೆ ಹಾಗೂ ಜೋಯ್ ಅಲ್ಲುಕಾಸ್ ಸಹಯೋಗದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಆಡಳಿತ ಅಧಿಕಾರಿ ಶ್ರೀ ಮೋನಿಷಾ ರವರು ಮಾತನಾಡುತ್ತಾ ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ, ಇದು ಎಲ್ಲರಿಗೂ ಅಗತ್ಯವಾದ ವಸ್ತು ದೇಶದಲ್ಲಿ ಅನೇಕ ಅಪಘಾತಗಳಾಗುತ್ತಿದ್ದು ಆ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ರಕ್ತಧಾನ ಮಾಡಬೇಕೆಂದು ಕರೆ ನೀಡಿದರು.
ಲಯನ್ ಬ್ಲಡ್ ಬ್ಯಾಂಕಿನ ಆಡಳಿತ ಅಧಿಕಾರಿ ದೀಪಕ್ ಸುಮನ್ ಮಾತನಾಡುತ್ತಾ ನಮ್ಮ ಲಯನ್ಸ್ ಬ್ಲಡ್ ಬ್ಯಾಂಕ್ ಪ್ರತಿದಿನ ರಕ್ತವನ್ನು ಶೇಖರಿಸುತ್ತಿದ್ದು ಅನೇಕ ಬಡವರಿಗೆ ಹಾಗೂ ಅಗತ್ಯವಿರುವ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ರಕ್ತ ನೀಡುತ್ತಿದ್ದೇವೆ, ಆದ್ದರಿಂದ ಪ್ರತಿಯೊಬ್ಬರೂ ಒಮ್ಮೆಯಾದರೂ ರಕ್ತವನ್ನು ದಾನ ಮಾಡಬೇಕೆಂದು ಕರೆ ನೀಡಿದರು,
ಈ ಸಂದರ್ಭದಲ್ಲಿ ರಕ್ತದಾನ ಮಾಡಿದ ನೂರಕ್ಕೂ ಹೆಚ್ಚು ದಾನಿಗಳಿಗೆ ಪ್ರಶಂಸ ಪತ್ರ ನೀಡಿ ಗೌರವಿಸಿದರು.