Live Stream

[ytplayer id=’22727′]

| Latest Version 8.0.1 |

Health & Fitness

ವಿಶಿಷ್ಣ ಆಧ್ಯಾತ್ಮಿಕ ಮತ್ತು ಧ್ಯಾನ ಕೇಂದ್ರ ಆರಂಭ

ವಿಶಿಷ್ಣ ಆಧ್ಯಾತ್ಮಿಕ ಮತ್ತು ಧ್ಯಾನ ಕೇಂದ್ರ ಆರಂಭ
ನಗರದ ಕನಕಪುರ ಮುಖ್ಯರಸ್ತೆಯ ರಘುವನಹಳ್ಳಿ, ಉತ್ತರಹಳ್ಳಿ ಹೋಬಳಿಯಲ್ಲಿ ಶ್ರೀ ಸರ್ವ ದೇವ ಪರಮಜ್ಯೋತಿ ಧ್ಯಾನ ವಿಹಾರ ಎಂಬ ವಿಶಿಷ್ಣ ಆಧ್ಯಾತ್ಮಿಕ ಮತ್ತು ಧ್ಯಾನ ಕೇಂದ್ರದ ಅದ್ಧೂರಿ ಉದ್ಘಾಟನೆಯು ಮೂರು ಪವಿತ್ರ ದಿನಗಳ ಕಾಲ ಭಕ್ತಿಯಿಂದ, ಸಂಸ್ಕೃತಿಯ ಶ್ರೀಮಂತಿಕೆ ಮತ್ತು ದಿವ್ಯ ಶಕ್ತಿಯಿಂದ ಆಚರಿಸಲಾಯಿತು.
ಈ ಸಂಭ್ರಮದಲ್ಲಿ ಕುಂಭಾಭಿಷೇಕ, ಪವಿತ್ರ ಪೂಜೆಗಳು, ಹೋಮಗಳು ಮತ್ತು ಶ್ರೀ ಸರ್ವ ದೇವ ಪರಮಜ್ಯೋತಿಯ ಪ್ರತಿಷ್ಠಾಪನೆ ನೆರವೇರಿತು. ಇದು ಎಲ್ಲ ದೇವತೆಗಳನ್ನು ಪ್ರತಿನಿಧಿಸುವ ದಿವ್ಯ ಬೆಳಕಿನ ರೂಪವಾಗಿದ್ದು, ಧರ್ಮ, ಜಾತಿ ಮತ್ತು ಪಂಥಗಳೆಲ್ಲವನ್ನೂ ಮೀರಿ ಜಗತ್ತಿನ ಎಲ್ಲಾ ತತ್ವಗಳನ್ನು ಒಗ್ಗೂಡಿಸುತ್ತದೆ. ಈ ಉತ್ಸವದ ಅಂತ್ಯಭಾಗದಲ್ಲಿ ಶ್ರೀ ಸರ್ವದೇವ ಪರಮಜ್ಯೋತಿಯ ಅದ್ಭುತ ಶೋಭಾಯಾತ್ರೆ ನಡೆಯಿತು, ಇದನ್ನು ಸಾವಿರಾರು ಭಕ್ತರು ಸಾಕ್ಷಿಯಾಗಿಸಿ ಸಂಭ್ರಮಿಸಿದರು.

ಈ ಮಹೋತ್ಸವದಲ್ಲಿ ಭಾಗವಹಿಸಿದ ಗಣ್ಯರು:  
ಡಾ. ಸಿ.ಎನ್. ಮಂಜುನಾಥ್ – ಸಂಸದರು, ಶ್ರೀಮತಿ ರೇವತಿ ಕಾಮತ್ – ಸಮಾಜಸೇವಕಿ , ಆನಂದ ಸುರಾಣಾ – ಮೈಕ್ರೋ ಲ್ಯಾಬ್ಸ್  , ಎಸ್. ರವಿ – ವಿಧಾನ ಪರಿಷತ್ ಸದಸ್ಯ, ಮಂತರ ಗೌಡ – ವಿಧಾನ ಸಭಾ ಸದಸ್ಯ, ಎಂ. ಕೃಷ್ಣಪ್ಪ – ವಿಧಾನ ಸಭಾ ಸದಸ್ಯ, ರಮೇಶ್ ಭಟ್ – ನಟ ಮತ್ತು ನಿರ್ದೇಶಕ ,  ಚರಣ್ ರಾಜ್ – ಪ್ರಸಿದ್ಧ ಸಂಗೀತ ನಿರ್ದೇಶಕ , ಶ್ರೀಮತಿ ಚಂದನಾ ಅನಂತಕೃಷ್ಣ – ನಟಿ .  ಶ್ರೀ ಸರ್ವದೇವ ಪರಮಜ್ಯೋತಿ ಧ್ಯಾನ ವಿಹಾರವು ಶ್ರದ್ಧಾಳುಗಳಿಗಾಗಿ ಶಾಂತಿ, ಪ್ರೀತಿ ಮತ್ತು ಆಂತರಿಕ ಪರಿವರ್ತನೆಯ ದಿವ್ಯಕೇಂದ್ರವಾಗಿ ಬೆಳಗುತ್ತಿದೆ.

ವೀ ಕೇ ನ್ಯೂಸ್
";