- *ಪ್ರೇಕ್ಷಕರ* *ಮನಸೂರೆಗೊಂಡ*
*ವಿದುಷಿ* *ದಿವ್ಯಾ ಗಿರಿಧರ್* *ಗಾಯನ*
ಬೆಂಗಳೂರು : ಉಡುಪಿ ಶ್ರೀ ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥರ ಆದೇಶಾನುಸಾರ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿರುವ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಪ್ರಥಮ ಏಕಾದಶಿ (ಜುಲೈ 6) ಪ್ರಯುಕ್ತ ಏರ್ಪಡಿಸಿದ್ದ “ನಾದಬ್ರಹ್ಮ ವಿಠಲೋತ್ಸವ” ಎಂಬ ಶೀರ್ಷಿಕೆಯಲ್ಲಿ ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್ ಅವರು ಹಾಡಿದ ಪ್ರತಿಯೊಂದು ಹಾಡುಗಳೂ ಕಿಕ್ಕಿರಿದು ತುಂಬಿದ್ದ ದಾಸಸಾಹಿತ್ಯಾಭಿಮಾನಿಗಳ ಮನಸೂರೆಗೊಂಡಿತು.
ಇವರ ಗಾಯನಕ್ಕೆ ವಿದ್ವಾನ್ ಚಿದಂಬರ ಜೋಶಿ (ಹಾರ್ಮೋನಿಯಂ), ವಿದ್ವಾನ್ ಪ್ರಮೋದ್ ಗಬ್ಬೂರ್ (ತಬಲಾ) ಮತ್ತು ವಿದ್ವಾನ್ ವೆಂಕಟೇಶ್ ಪರೋಹಿತ್ (ತಾಳ) ಸಾಥ್ ನೀಡಿದರು.