Live Stream

[ytplayer id=’22727′]

| Latest Version 8.0.1 |

Cultural

ಶ್ರೀ ಶ್ರೀ ವಿದ್ಯಾಶ್ರೀಶತೀರ್ಥರಿಗೆ ಭವ್ಯ ಮೆರವಣಿಗೆ ಮತ್ತು ನಾಣ್ಯ-ಧಾನ್ಯಗಳಿಂದ ತುಲಾಭಾರ

ಶ್ರೀ ಶ್ರೀ ವಿದ್ಯಾಶ್ರೀಶತೀರ್ಥರಿಗೆ ಭವ್ಯ ಮೆರವಣಿಗೆ ಮತ್ತು ನಾಣ್ಯ-ಧಾನ್ಯಗಳಿಂದ ತುಲಾಭಾರ

ಸೋಸಲೆ ಶ್ರೀ ವ್ಯಾಸರಾಜ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಶ್ರೀಶತೀರ್ಥರಿಗೆ ಭವ್ಯ ಮೆರವಣಿಗೆ ಮತ್ತು ನಾಣ್ಯ-ಧಾನ್ಯಗಳಿಂದ ತುಲಾಭಾರ

ಬೆಂಗಳೂರು : ರಾಜಾಜಿನಗರ 2ನೇ ಹಂತದ ಸುಬ್ರಹ್ಮಣ್ಯನಗರದ ಸೋಸಲೆ ಶ್ರೀ ವ್ಯಾಸರಾಜ ಮಠದಲ್ಲಿ ಆಗಸ್ಟ್ 3, ಭಾನುವಾರ ಮಧ್ಯಾಹ್ನ 3-30ಕ್ಕೆ ಶ್ರೀ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರನ್ನು ‘ಹರಿಕಥಾ ವಿದ್ವಾನ್ ಕೀರ್ತಿಶೇಷ ಸೋಸಲೆ ನಾರಾಯಣದಾಸ್ ರಸ್ತೆಯಿಂದ ಶ್ರೀಮಠದವರೆಗೆ ಚೆಂಡೆ ವಾದ್ಯದೊಂದಿಗೆ ಹತ್ತಾರು ಭಜನಾ ಮಂಡಳಿಗಳ ಸದಸ್ಯರಗಳ ಗಾನದೊಂದಿಗೆ ಆಹ್ವಾನಿಸಲಾಗುವುದು.
ಕಾರ್ಯಕ್ರಮಗಳು : ಶ್ರೀ ವಾದಿರಾಜ ಆಚಾರ್ಯರಿಂದ “ಶ್ರೀ ವ್ಯಾಸರಾಜ ವೈಭವ” ವಿಷಯವಾಗಿ ಪ್ರವಚನ. ಭಜನಾ ಮಂಡಳಿಯವರಿಂದ ನೃತ್ಯ-ಗಾಯನ ನಂತರ ಶ್ರೀ ಗೋಪಿಕೃಷ್ಣನೊಂದಿಗೆ ಶ್ರೀಗಳಿಗೆ ನಾಣ್ಯ ಮತ್ತು ಧಾನ್ಯಗಳಿಂದ ತುಲಾಭಾರ, ಪುಷ್ಪವೃಷ್ಟಿ, ಶ್ರೀಪಾದಂಗಳವರಿಂದ ದರ್ಬಾರ್ ಹಾಗೂ ಆಶೀರ್ವಚನ, ಮಹಾಮಂಗಳಾರತಿ, ಪ್ರಸಾದ ವಿತರಣೆ ಈ ಎಲ್ಲಾ ಕಾರ್ಯಕ್ರಮಗಳನ್ನು ಭಕ್ತಾದಿಗಳ ಹಾಗೂ ಮಠದ ಸಿಬ್ಬಂದಿಗಳ ಸಹಕಾರದೊಂದಿಗೆ ಹಮ್ಮಿಕೊಂಡಿದೆ ಎಂದು ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಸೋಸಲೆ ಪ್ರಕಾಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";