ಬೆಂಗಳೂರಿನ ಬಸವನಗುಡಿಯ ರಾಮಕೃಷ್ಣ ಮಠದ ವತಿಯಿಂದ ಮೂರು ದಿನಗಳ ಸಂಗೀತೋತ್ಸವ “ಶ್ರೀ ರಾಮಕೃಷ್ಣ ಸಂಗೀತ ಸೌರಭ”ವನ್ನು ಇದೇ ಜುಲೈ 11 ರಿಂದ 13 ರವರೆಗೆ ಪ್ರತಿದಿನ ಸಂಜೆ 6 ರಿಂದ 8 ಗಂಟೆಯವರೆಗೆ ಮಠದ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ವಿವರ:
ಶುಕ್ರವಾರ, ಜುಲೈ 11 –
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ
ಗಾಯನ: ಪಂಡಿತ್ ವೆಂಕಟೇಶ್ ಕುಮಾರ
ತಬಲಾ: ಪಂಡಿತ್ ರಘುನಾಥ್ ನಾಕೋಡ್
ಹಾರ್ಮೋನಿಯಮ್: ಪಂಡಿತ್ ವ್ಯಾಸಮೂರ್ತಿ ಕಟ್ಟಿ
ಇಂದಿನ ಪ್ರಮುಖ ಸುದ್ದಿ : ಇದನ್ನೂ ಓದಿ:
ಭಾರತ ಜಾಗತಿಕ ನಾಯಕನಾಗಬೇಕಾದರೆ ‘ಆರೋಗ್ಯಕರ ಭಾರತ-ಬಲಿಷ್ಠ ಭಾರತ’ ಎಂಬ ಮಂತ್ರ ಅಳವಡಿಸಿಕೊಳ್ಳಬೇಕು
ಶನಿವಾರ, ಜುಲೈ 12 –
ಕರ್ನಾಟಕ ವೀಣಾ ವಾದನ
ವೀಣಾ: ವಿದ್ವಾನ್ ಡಿ. ಬಾಲಕೃಷ್ಣ
ಬಾನ್ಸುರಿ: ವಿದ್ವಾನ್ ವಿ. ವಂಶೀಧರ್
ಮೃದಂಗ: ವಿದ್ವಾನ್ ಬಿ. ಎಸ್. ಪ್ರಶಾಂತ್
ಘಟಂ: ವಿದ್ವಾನ್ ಶಮಿತ್ ಗೌಡ
ಭಾನುವಾರ, ಜುಲೈ 13 –
ಗಾಯನ ಮತ್ತು ವಾದ್ಯ ಕಛೇರಿ
ಗಾಯನ: ಕುಮಾರ್ ಮೋದಕ್ ಮತ್ತು ವೃಂದ
ತಬಲಾ ಸೊಲೋ: ಕುಮಾರ್ ಪ್ರದ್ಯುಮ್ನ ಕರ್ಪೂರ್
ವೀಣಾ ವಾದನ: ಕುಮಾರ್ ಚಿನ್ಮಯ್ ಮತ್ತು ವೃಂದ
ಮೃದಂಗ: ವಿದ್ವಾನ್ ಸತ್ಯಕುಮಾರ್
ಕಾರ್ಯಕ್ರಮ ಸ್ಥಳ: ರಾಮಕೃಷ್ಣ ಮಠ, ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಂಗಳೂರು.
ಪ್ರವೇಶ ಉಚಿತ – ಎಲ್ಲರಿಗೂ ಸ್ವಾಗತ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 26613429 / 26612710
VK News DIGITAL headlines