Live Stream

[ytplayer id=’22727′]

| Latest Version 8.0.1 |

Education News

ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿಯಿಂದ ಶಾಲೆಗಳಲ್ಲಿ ಮಕ್ಕಳಿಗೆ ‘ಸಂಸ್ಕಾರ ನೋಟ್ ಬುಕ್’ ವಿತರಣೆ

ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿಯಿಂದ ಶಾಲೆಗಳಲ್ಲಿ ಮಕ್ಕಳಿಗೆ ‘ಸಂಸ್ಕಾರ ನೋಟ್ ಬುಕ್’ ವಿತರಣೆ
 ಬೆಂಗಳೂರು: ಬನಶಂಕರಿಯ ಸ್ವಾಮಿ ವಿವೇಕಾನಂದ ವಿದ್ಯಾಶಾಲಾ ಹೈಸ್ಕೂಲ್ನ 150ಕ್ಕೂ ಹೆಚ್ಚು ಮಕ್ಕಳಿಗೆ, ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ, ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿ ವತಿಯಿಂದ “ಸಮಾಜ ಸಹಾಯ” ಅಭಿಯಾನದಡಿಯಲ್ಲಿ ‘ಸಂಸ್ಕಾರ ನೋಟ್ಬುಕ್’ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಕರ್ತರಾದ ಶ್ರೀಮತಿ ಧನಲಕ್ಷ್ಮೀ ಇವರು ಮಾತನಾಡಿ ತಂದೆ-ತಾಯಿ ಹಾಗೂ ಗುರುಗಳಿಗೆ ಗೌರವ ನೀಡುವುದು ಜೀವನದ ಮೊದಲ ಸಂಸ್ಕಾರ. ಅವರಿಂದ ಪಡೆದ ಜ್ಞಾನವನ್ನು ಸದ್ಬಳಕೆ ಮಾಡಬೇಕು. ದಿನನಿತ್ಯ ಧರ್ಮಾಚರಣೆ ಮಾಡುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದರು.
ಮುಂದೆ ಅವರು ಮಾತನಾಡುತ್ತ ಈ ಸಂಸ್ಕಾರ ನೋಟ್ಬುಕ್ನ ವೈಶಿಷ್ಟ್ಯಗಳೆಂದರೆ ನಮ್ಮ ರಾಷ್ಟ್ರಪುರುಷರ, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಸಂತರ ಭಾವಚಿತ್ರದ ಜೊತೆಗೆ ಅವರ ಮಾಹಿತಿಗಳು ಇರುತ್ತದೆ ಅದರಿಂದ ನಮಗೆ ಅವರ ಶಕ್ತಿ ಸಾಮರ್ಥ್ಯಗಳ ಅರಿವಾಗಿ ನಮಗೆ ಅದನ್ನು ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು. ಈ ವೇಳೆ ಸಮಿತಿಯ ಸದಸ್ಯರಾದ ಸೌ. ಕೋಮಲಕಾಶಿ, ಸೌ. ಸುಧಾ ಮುರುಗನ್, ಸೌ. ಪ್ರತಿಭಾ ಮಹೇಶ್ ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.
ವೀ ಕೇ ನ್ಯೂಸ್
";