Live Stream

[ytplayer id=’22727′]

| Latest Version 8.0.1 |

Education News

ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿಯಿಂದ ಶಾಲೆಗಳಲ್ಲಿ ಮಕ್ಕಳಿಗೆ ‘ಸಂಸ್ಕಾರ ನೋಟ್ ಬುಕ್’ ವಿತರಣೆ

ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿಯಿಂದ ಶಾಲೆಗಳಲ್ಲಿ ಮಕ್ಕಳಿಗೆ ‘ಸಂಸ್ಕಾರ ನೋಟ್ ಬುಕ್’ ವಿತರಣೆ
 ಬೆಂಗಳೂರು: ಬನಶಂಕರಿಯ ಸ್ವಾಮಿ ವಿವೇಕಾನಂದ ವಿದ್ಯಾಶಾಲಾ ಹೈಸ್ಕೂಲ್ನ 150ಕ್ಕೂ ಹೆಚ್ಚು ಮಕ್ಕಳಿಗೆ, ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ, ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿ ವತಿಯಿಂದ “ಸಮಾಜ ಸಹಾಯ” ಅಭಿಯಾನದಡಿಯಲ್ಲಿ ‘ಸಂಸ್ಕಾರ ನೋಟ್ಬುಕ್’ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಕರ್ತರಾದ ಶ್ರೀಮತಿ ಧನಲಕ್ಷ್ಮೀ ಇವರು ಮಾತನಾಡಿ ತಂದೆ-ತಾಯಿ ಹಾಗೂ ಗುರುಗಳಿಗೆ ಗೌರವ ನೀಡುವುದು ಜೀವನದ ಮೊದಲ ಸಂಸ್ಕಾರ. ಅವರಿಂದ ಪಡೆದ ಜ್ಞಾನವನ್ನು ಸದ್ಬಳಕೆ ಮಾಡಬೇಕು. ದಿನನಿತ್ಯ ಧರ್ಮಾಚರಣೆ ಮಾಡುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದರು.
ಮುಂದೆ ಅವರು ಮಾತನಾಡುತ್ತ ಈ ಸಂಸ್ಕಾರ ನೋಟ್ಬುಕ್ನ ವೈಶಿಷ್ಟ್ಯಗಳೆಂದರೆ ನಮ್ಮ ರಾಷ್ಟ್ರಪುರುಷರ, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಸಂತರ ಭಾವಚಿತ್ರದ ಜೊತೆಗೆ ಅವರ ಮಾಹಿತಿಗಳು ಇರುತ್ತದೆ ಅದರಿಂದ ನಮಗೆ ಅವರ ಶಕ್ತಿ ಸಾಮರ್ಥ್ಯಗಳ ಅರಿವಾಗಿ ನಮಗೆ ಅದನ್ನು ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು. ಈ ವೇಳೆ ಸಮಿತಿಯ ಸದಸ್ಯರಾದ ಸೌ. ಕೋಮಲಕಾಶಿ, ಸೌ. ಸುಧಾ ಮುರುಗನ್, ಸೌ. ಪ್ರತಿಭಾ ಮಹೇಶ್ ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";