ಶಿಡ್ಲಘಟ್ಟ : ತಾಲೂಕಿನ ಆನೂರು ಗ್ರಾಮ ಪಂಚಾಯಿತಿಯ ಬೆಳ್ಳೂಟಿ ಗ್ರಾಮದಲ್ಲಿ ಶ್ರೀ ಮಹೇಶ್ವರ ದೇವಿಯ 35 ನೇ ವಾರ್ಷಿಕೊತ್ಸವವು ಬಹಳ ವಿಜೃಂಭಣೆಯಿಂದ ನೆರವೇರಿಸಲಾಯಿತು. ಬೆಳ್ಳೂಟಿ ಗ್ರಾಮದ ನೂರಾರು ಮಹಿಳೆಯರಿಂದ ಭಕ್ತಾದಿಗಳಿಂದ ತುಪ್ಪದ ದೀಪಗಳಿಂದ ಆರತಿ ಬೆಳಗಿದರು.
ದೇಶದ ಬೆನ್ನುಲುಬಾಗಿರುವ ರೈತರಿಗಾಗಿ ಉತ್ತಮ ಮಳೆಯಾಗಿ, ಬೆಳೆಗಾಗಿ ಬೆಂಬಲ ಬೆಲೆ ಸಿಗಬೇಕೆಂದು ವಿಶೇಷ ಪೂಜೆ ಮಾಡಲಾಯಿತು.
ನಾಡಿನ ಜನೆತೆಯ ಆರೋಗ್ಯ ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಗ್ರಾಮ ದೇವತೆ ಮಹೇಶ್ವರಮ್ಮ ಹಾಗೂ ಮುನೇಶ್ವರಪ್ಪ ಸ್ವಾಮಿಗೆ ಬೆಳ್ಳೂಟಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಂದ ವಿಶೇಷ ಪೂಜೆ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.
ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್
VK News Digital : Headlines