ಬೆಂಗಳೂರು: ಕಾವೇರಿ ಸರ್ವರ್ ಡೌನ್ ಅದ ಹಿನ್ನಲೆ ರಾಜ್ಯದಾದ್ಯಂತ ಆಸ್ತಿ ನೋಂದಣಿ ಪ್ರಕ್ರಿಯೆಗಾಗಿ ಕಳೆದ ಒಂದು ವಾರದಿಂದ ಜನರು ಸಬ್ ರಿಜಿಸ್ಟರ್ ಆಫೀಸ್ ನ ಬಾಗಿಲು ಬಳಿ ಜನ ಕಾಯುವಂತಹ ಪರಿಸ್ಧಿತಿ ಬಂದಿದ್ದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ,
ಕಳೆದ ಜೂನ್ 13 ರಿಂದ ನಿರಂತರವಾಗಿ ಸರ್ವರ್ ಡೌನ್ ಆಗಿದ್ದು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಳೆದ ಶುಕ್ರವಾರದಿಂದ ನಿರಂತರವಾಗಿ ಸರ್ವರ್ ಸಮಸ್ಯೆ ಕಾಡುತ್ತಿದೆ, ಇದರಿಂದ ಜನರು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ ,
ದಸ್ತಾಮೇಜುಗಳ ನೋಂದಣಿಗೆ ಸಿಟಿಜನ್ ಲಾಗಿನ್ ನಲ್ಲಿ ದಾಖಲೆ ಅಪ್ ಲೋಟ್ ಮಾಡಲು ಇ-ಖಾತಾ ಅಥವಾ ಪಹಣಿ ಮಾಹಿತಿ ತೋರಿಸುತ್ತಿಲ್ಲ, ಇದಾದ ಮೇಲೆ ಮತ್ತೆ ದಾಖಲೆ ಪತ್ರ ಅಪ್ ಲೋಡ್ ಮಾಡುವಾಗ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದೆ, ಒಂದು ವೇಳೆ ಹೇಗೋ ಅಪ್ ಲೋಡ್ ಮಾಡಿದಾಗ ಸಬ್ ರಿಜೆಸ್ಟ್ರಾರ್ ಲಾಗಿನ ನಲ್ಲಿ ತೋರಿಸುತ್ತಿಲ್ಲ ಎನ್ನಲಾಗಿದೆ,
ಅಷ್ಟೇ ಅಲ್ಲದೆ ಅನ್ ಲೈನ್ ನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿ ಮಾಡಲು ಪೇಮೆಂಟ್ ಗೇಟ್ ವೇನಲ್ಲೂ ಸದಾಕಾಲ ಸರ್ವರ್ ಬ್ಯೂಸಿಯಿದೆ ಎಂದು ತೋರಿಸುತ್ತಿದೆ, ಜೊತೆಗೆ ಲಕ್ಷಾಂತರ ರೂಪಾಯಿ ಹಣ ಪಾವತಿಯ ವೇಳೆ ಕೂಡ ದಿಢೀರ್ ಸರ್ವರ್ ಡೌನ್ ಆಗಿ ಅತ್ತ ಬ್ಯಾಂಕ ಗೂ ವಾಪಸ್ ಆಗದೇ, ಇತ್ತ ಪಾವತಿ ಕೂಡ ಆಗದೆ, ಸತಾಯಿಸುತ್ತಿದೆ,
ಸದ್ಯ ಸಬ್ ರಿಜಿಸ್ಟ್ರರ್ ಆಫೀಸ್ ಮುಂದೆಯೇ ಜನರು ಸಾಲು ಗಟ್ಟಿ ನಿಂತಿದ್ದು, ಇತ್ತ ನೋಂದಣಿ ಮಾಡಲಾಗದೆ, ಅತ್ತ ಕೆಲಸ ಕೂಡ ಮಾಡಲಾಗದೆ ಸಿಟ್ಟಾಗಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ,
Veekay News > State News > ಆಸ್ತಿ ನೋಂದಣಿಗೆ ಮತ್ತೆ ಸರ್ವರ್ ಡೌನ್ ಕಾಟ- ಸಬ್ ರಿಜಿಸ್ಟರ್ ಕಚೇರಿಗಳ ಎದುರು ಜನಾಕ್ರೋಶ!
ಆಸ್ತಿ ನೋಂದಣಿಗೆ ಮತ್ತೆ ಸರ್ವರ್ ಡೌನ್ ಕಾಟ- ಸಬ್ ರಿಜಿಸ್ಟರ್ ಕಚೇರಿಗಳ ಎದುರು ಜನಾಕ್ರೋಶ!
ವೀ ಕೇ ನ್ಯೂಸ್20/06/2025
posted on

Tags:server down
the authorವೀ ಕೇ ನ್ಯೂಸ್
All posts byವೀ ಕೇ ನ್ಯೂಸ್
Leave a reply