Live Stream

[ytplayer id=’22727′]

| Latest Version 8.0.1 |

Bengaluru UrbanEducation News

‘ಸಂಸ್ಕಾರ ಸುಧಾ’ ಬೇಸಿಗೆ ಶಿಬಿರ

‘ಸಂಸ್ಕಾರ ಸುಧಾ’ ಬೇಸಿಗೆ ಶಿಬಿರ

“ಧರ್ಮೋ ರಕ್ಷತಿ ರಕ್ಷಿತಃ” ಎಂಬ ಆಪ್ತವಾಕ್ಯದಂತೆ, ಧರ್ಮ ಮತ್ತು ಸಂಸ್ಕಾರಗಳ ರಕ್ಷಣೆಯೇ ಸದೃಢ ಸಮಾಜಕ್ಕೆ ಮೂಲಾಧಾರವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಮೌಲ್ಯಗಳು ಕ್ಷೀಣಿಸುತ್ತಿವೆ ಎಂಬ ಆತಂಕದ ನಡುವೆ, ಕೇವಲ ಶೈಕ್ಷಣಿಕ ಅಂಕಗಳಿಗೆ ಸೀಮಿತವಾಗದ ಮೌಲ್ಯಯುತ ಶಿಕ್ಷಣದ ಅಗತ್ಯವಿದೆ. ಈ ಪವಿತ್ರ ಆಶಯದೊಂದಿಗೆ, ಬಾಲಭಾರತೀ (ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದ ಅಂಗಸಂಸ್ಥೆ)
ಜಗದ್ಗುರುಗಳ ದಿವ್ಯ ಮಾರ್ಗದರ್ಶನದಲ್ಲಿ, ಕರ್ನಾಟಕ ದಾದ್ಯಂತ ‘ಸಂಸ್ಕಾರ ಸುಧಾ’ ಬೇಸಿಗೆ ಶಿಬಿರಗಳನ್ನು ಆಯೋಜಿಸಲು ಸಂಕಲ್ಪಿಸಲಾಗಿದೆ. ಮಕ್ಕಳಲ್ಲಿ ರಾಷ್ಟ್ರಪ್ರೇಮ, ಭವ್ಯ ಇತಿಹಾಸ ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಜ್ಞಾನದೀಪ್ತಿಯನ್ನು ಮಕ್ಕಳ ಮನಸ್ಸಿನಲ್ಲಿ ಬೆಳಗಲು ಸಮರ್ಥ ಶಿಕ್ಷಕರೇ ಅತ್ಯಗತ್ಯ. ಈ ಶಿಬಿರವನ್ನು ಯಶಸ್ವಿಯಾಗಿ ನಡೆಸುವ ಶಿಕ್ಷಕರಿಗೆ ಯೋಗ್ಯವಾದ ಗೌರವಧನ ನೀಡಲಾಗುತ್ತದೆ.
ಬೋಧನೆಯು ಕೇವಲ ಉದ್ಯೋಗವಾಗದೆ, ಒಂದು ತಪಸ್ಸಿನಂತೆ ಸಮಾಜದ ನವನಿರ್ಮಾಣಕ್ಕೆ ದಾರಿದೀಪವಾಗಲಿ. ಬನ್ನಿ, ಈ ಮಹತ್ತರ ಕಾರ್ಯದಲ್ಲಿ ನಮ್ಮೊಂದಿಗೆ ಕೈಜೋಡಿಸಿ, ಮುಂದಿನ ಪೀಳಿಗೆಗೆ ಸಂಸ್ಕಾರದ ಅಮೃತವನ್ನು ಹಂಚೋಣ.
📍 ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಪೋಸ್ಟರ್‌ನಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
✨ ವಿದ್ಯಾರ್ಥಿಗಳ ಗಮನಕ್ಕೆ: ನೀವೇನಾದರೂ ಈ ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿದ್ದರೆ, ಇಲ್ಲಿ ನಿಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿ ನೋಂದಾಯಿಸಿಕೊಳ್ಳಬಹುದು – visit: http://tinyurl.com/SSCampKA
ಶಾರದೇ ಪಾಹಿಮಾಂ ಶಂಕರ ರಕ್ಷಮಾಂ!

ವೀ ಕೇ ನ್ಯೂಸ್
";