Live Stream

[ytplayer id=’22727′]

| Latest Version 8.0.1 |

National News

ಭಾರತ ಟ್ರಿನಿಡಾಡ್ ಸ್ನೇಹ ವೃದ್ಧಿಸಲಿ- ಗಂಗಾಜಲ ಉಡುಗೊರೆಯಾಗಿ ಕೊಟ್ಟ ಪ್ರಧಾನಿ ಮೋದಿ!

ಭಾರತ ಟ್ರಿನಿಡಾಡ್ ಸ್ನೇಹ ವೃದ್ಧಿಸಲಿ- ಗಂಗಾಜಲ ಉಡುಗೊರೆಯಾಗಿ ಕೊಟ್ಟ ಪ್ರಧಾನಿ ಮೋದಿ!

ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ಪ್ರವಾಸದಲ್ಲಿದ್ದು ಈಗ ಟ್ರಿನಿಡಾಡ್ ಮತ್ತು ಟೊಬಾಗೊಗೆ ಭೇಟಿ ನೀಡಿದ್ದಾರೆ, ಅಲ್ಲಿ ಅವರು ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ್ದಾರೆ, ಮಾತ್ರವಲ್ಲದೆ ಅಲ್ಲಿನ ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಅವರಿಗೆ ಮಹಾ ಕುಂಭದಿಂದ ಸಂಗಮ ಮತ್ತು ಸರಯೂ ನದಿಯ ಪವಿತ್ರ ಜಲ ಮತ್ತು ರಾಮ ಮಂದಿರದ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ,
ಕಮಲಾ-ಬಿಸ್ಸೆಸ್ಸರ್ ಅವರ ಪೂರ್ವಜರು ಬಿಹಾರದ ಬಕ್ಸಾರ್ ನಲ್ಲಿ ವಾಸಿಸುತ್ತಿದ್ದರು, ಕಮಲಾ ಜಿ ಸ್ವತಃ ಅಲ್ಲಿಗೆ ಭೇಟಿ ನೀಡಿದ್ದಾರೆ, ಜನರು ಅವರನ್ನು ಬಿಹಾರದ ಮಗಳು ಎಂದು ಕರೆಯುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು,
ಈ ವರ್ಷದ ಆರಂಭದಲ್ಲಿ ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಸಭೆಯಾದ ಮಹಾಕುಂಭ ನಡೆದಿದ್ದು ನಿಮಗೆಲ್ಲರಿಗೂ ತಿಳಿದಿದೆ, ಮಹಾಕುಂಭದ ನೀರನ್ನು ನನ್ನೊಂದಿಗೆ ಕೊಂಡೆಯ್ಯುವ ಗೌರವ ನನಗಿದೆ, ಸರಯು ನದಿ ಮತ್ತು ಮಹಾಕುಂಭದ ಪವಿತ್ರ ನೀರನ್ನು ಇಲ್ಲಿನ ಗಂಗಾ ಧಾರಾಕ್ಕೆ ಅರ್ಪಿಸುವಂತೆ ಕಮಲಾ ಜಿ ಅವರನ್ನು ನಾನು ವಿನಂತಿಸುತ್ತೇನೆ ಎಂದು ಅವರು ಹೇಳಿದರು,

ವೀ ಕೇ ನ್ಯೂಸ್
";