ಬೆಂಗಳೂರು ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿ ಇರುವ ಗಾಳಿ ಆಂಜನೇಯ ದೇವಸ್ಧಾನ, ಇದೀಗ ಮುಜರಾಯಿ ಇಲಾಖೆ ಸುಪರ್ದಿಗೆ ಸೇರಿದೆ. ದೇವಾಲಯದ ಸುಧಾರಣಾ ಕೆಲಸಗಳು ನಡೆಯುತ್ತಿದ್ದು, ಭಕ್ತರಿಗೆ ಸುಲಭ ಸೇವೆ ಒದಗಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳು ರೂಪಿತವಾಗುತ್ತಿವೆ.
ಆನ್ಲೈನ್ ಸೇವೆಗಳನ್ನು ಪ್ರಾರಂಭಿಸಲು ಮುಜರಾಯಿ ಇಲಾಖೆ ಸಜ್ಜು
ಮುಜರಾಯಿ ಇಲಾಖೆ ಆಯುಕ್ತ ವೆಂಕಟೇಶ್ ಅವರು ನೀಡಿದ ಮಾಹಿತಿಯ ಪ್ರಕಾರ:
-
ಶೀಘ್ರದಲ್ಲೇ ಹೋಮ, ಹವನ ಸೇವೆಗಳಿಗೆ ಆನ್ಲೈನ್ ಬುಕ್ಕಿಂಗ್ ಆರಂಭವಾಗಲಿದೆ
-
ದೇಗುಲದ ಪ್ರಸಾದ ಮತ್ತು ಯಂತ್ರಗಳನ್ನು ಆನ್ಲೈನ್ ಮೂಲಕ ರಾಜ್ಯದ ಎಲ್ಲೆಡೆ ತಲುಪಿಸಲು ಯೋಜನೆ ರೂಪಿಸಲಾಗಿದೆ
-
ದೇಗುಲದಲ್ಲಿ ಪೂಜಾ ದರ ಅಥವಾ ಸೇವಾ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ.
-
ದೇಗುಲದ ಇತಿಹಾಸ – ಶ್ರೀ ವ್ಯಾಸರಾಜರಿಂದ ಸ್ಥಾಪಿತ ಪ್ರತಿಮೆ
ಇಲ್ಲಿನ ಹನುಮಂತನ ವಿಗ್ರಹವನ್ನು ಶ್ರೀ ವ್ಯಾಸರಾಜರು ಸ್ಥಾಪಿಸಿದ್ದು, ಅವರು 732 ಹನುಮಂತ ವಿಗ್ರಹಗಳನ್ನು ಸ್ಥಾಪಿಸಿದ್ದರೆಂದು ನಂಬಿಕೆ. ಗಾಳಿ ಆಂಜನೇಯ ದೇವಾಲಯವು ಅವುಗಳಲ್ಲಿ ಒಂದು.
ವಾಯು ದೇವರ ಪುತ್ರನಾಗಿರುವ ಹನುಮಂತನಿಗೆ, ಇಲ್ಲಿನ ಪ್ರತಿಮೆ “ಗಾಳಿ ಆಂಜನೇಯ” ಎಂಬ ಹೆಸರನ್ನು ಪಡೆದಿದೆ.