ನಾಡಪ್ರಭು ಕೆಂಪೇಗೌಡ ದಿನಾಚರಣೆ ಪ್ರಯುಕ್ತ ಬಿಬಿಎಂಪಿ ವತಿಯಿಂದ ಉತ್ತಮ ನೌಕರ ನಾಡಪ್ರಭು ಕೆಂಪಪೇಗೌಡ ಪ್ರಶಸ್ತಿ-2025ರ ಸಾಲಿನಲ್ಲಿ ಬಿಬಿಎಂಪಿ ಕಂದಾಯ ಮೌಲ್ಯಮಾಪಕರಾದ ಸಾಯಿಶಂಕರ್ ರವರಿಗೆ ಲಭಿಸಿದೆ.
ಸಾಯಿಶಂಕರ್ ರವರು ಕಳೆದ ಮೂವತ್ತು ಹೆಚ್ಚು ವರ್ಷಗಳಿಂದ ಬಿಬಿಎಂಪಿ ಕಂದಾಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಬಿಎಂಪಿ ಕನ್ನಡ ನೌಕರರ ಸಂಘದ ಅಧ್ಯಕ್ಷರಾಗಿ ಮತ್ತು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಹಾಗೂ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಪರಿಷತ್ ನಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರ ಜೊತೆಯಲ್ಲಿ ಸಂಘಟನೆ, ಹೋರಾಟಗಳಲ್ಲಿ ಸಾಯಿಶಂಕರ್ ಸದಾ ಜೊತೆಯಲ್ಲಿ ಅಪ್ತ ಮಿತ್ರರಂತೆ ನಿಂತಿದ್ದಾರೆ.
ಅಪಾರ ದೈವ ಭಕ್ತ ಸಾಯಿಶಂಕರ್ ರವರು ಬಿಬಿಎಂಪಿ ಕೇಂದ್ರ ಕಛೇರಿ ನೌಕರರ ಭವನ ಎದುರು ಇರುವ ಆಂಜನೇಯ, ಗಣೇಶ ದೇವರುಗಳಿಗೆ ನಿತ್ಯಾ ಅಭಿಷೇಕ, ಪೂಜೆ ಮಾಡಿ ನಂತರ ಬಿಬಿಎಂಪಿ ಕರ್ತವ್ಯಕ್ಕೆ ತೆರಳುತ್ತಾರೆ.
2025ನೇ ಸಾಲಿನಲ್ಲಿ ನಾಡಪ್ರಭು ಕೆಂಪೇಗೌಡ ಉತ್ತಮ ನೌಕರ ಪ್ರಶಸ್ತಿ ಲಭಿಸಿರುವುದಕ್ಕೆ ಸಂಘವು ಹೃತ್ವೂರ್ವಕವಾಗಿ ಅಭನಂದಿಸುತ್ತಿದೆ.