Live Stream

[ytplayer id=’22727′]

| Latest Version 8.0.1 |

State News

ಟಿಪ್ಪು ಸುಲ್ತಾನ್ ಕೆಆರ್‌ಎಸ್ ಅಣೆಕಟ್ಟಿಗೆ ಅಡಿಗಲ್ಲು ಹಾಕಿದ್ದಾರೆ: ಸಚಿವ ಮಹದೇವಪ್ಪ ಹೇಳಿಕೆ ವಿವಾದಕ್ಕೆ ಕಾರಣ!

ಟಿಪ್ಪು ಸುಲ್ತಾನ್ ಕೆಆರ್‌ಎಸ್ ಅಣೆಕಟ್ಟಿಗೆ ಅಡಿಗಲ್ಲು ಹಾಕಿದ್ದಾರೆ: ಸಚಿವ ಮಹದೇವಪ್ಪ ಹೇಳಿಕೆ ವಿವಾದಕ್ಕೆ ಕಾರಣ!

ಮಂಡ್ಯ: ಕನ್ನಂಬಾಡಿ ಅಣೆಕಟ್ಟು (ಕೆಆರ್‌ಎಸ್) ಕುರಿತು ನೀಡಿರುವ ಸಚಿವ ಮಹದೇವಪ್ಪ ಹೇಳಿಕೆ ಹೊಸ ವಿವಾದಕ್ಕೆ ಎಳೆದುಕೊಂಡಿದೆ. “ಕೆಆರ್‌ಎಸ್ ಅಣೆಕಟ್ಟಿಗೆ ಟಿಪ್ಪು ಸುಲ್ತಾನ್ ಅವರು ಅಡಿಗಲ್ಲು ಹಾಕಿದ್ದರು” ಎಂಬ ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ಸಂಸತ್ತಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಮಹದೇವಪ್ಪ, “ಕನ್ನಡ ಓದಿ, ಅರ್ಥ ಮಾಡಿಕೊಂಡು ಮಾತನಾಡಿ. ಧರ್ಮದ ಹೆಸರಿನಲ್ಲಿ ರಾಜಕೀಯ ಬೇಡ” ಎಂದು ಟ್ವಿಟರ್‌ನಲ್ಲಿ ಟಿಪ್ಪು ಬೆಂಬಲಿಸಿ ಸ್ಪಷ್ಟೀಕರಣ ನೀಡಿದ್ದಾರೆ.

ಈ ಹೇಳಿಕೆಯು ನಾಲ್ವಡಿ ಕೃಷ್ಣರಾಜ ಒಡೆಯರ್ ಪುಣ್ಯತಿಥಿಯ ದಿನವೇ ನೀಡಲಾಗಿದ್ದು, ರಾಜಕೀಯ ವಲಯದಲ್ಲೂ ತೀವ್ರ ಪ್ರತಿಕ್ರಿಯೆ ಹುಟ್ಟಿಸಿದೆ.


💰 ಟಿಪ್ಪು ಸುಲ್ತಾನ್ ಖಡ್ಗ £3.4 ಕೋಟಿ ರೂಪಾಯಿಗೆ ಹರಾಜು!

ಇದೇ ವೇಳೆ ಟಿಪ್ಪು ಸುಲ್ತಾನ್ ಗೆ ಸೇರಿದ ವೈಯುಕ್ತಿಕ ಖಡ್ಗವನ್ನು ಲಂಡನ್‌ನ ಬೋನ್‍ಹ್ಯಾಮ್ ಹರಾಜು ಸಂಸ್ಥೆ ₹3.4 ಕೋಟಿ ಬೆಲೆಗೆ ಹರಾಜು ಮಾಡಿದೆ. ಈ ಖಡ್ಗವು 1799ರಲ್ಲಿ ಟಿಪ್ಪು ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಸೋತ ನಂತರ ಕ್ಯಾಪ್ಟನ್ ಜೇಮ್ಸ್ ಆಂಡ್ರ್ಯೂ ಡಿಕ್ ಎಂಬಾತನಿಗೆ ಉಡುಗೊರೆಯಾಗಿ ನೀಡಲಾಗಿತ್ತು.

ಖಡ್ಗದ ವಿಶೇಷತೆ:

  • ಹುಲಿ ಪಟ್ಟೆ ವಿನ್ಯಾಸ

  • ಅರೇಬಿಕ್ ಅಕ್ಷರಗಳಲ್ಲಿ ಕೆತ್ತನೆ

  • ಐತಿಹಾಸಿಕ ಆಕರ್ಷಣೆ

ವೀ ಕೇ ನ್ಯೂಸ್
";