ಬೆಂಗಳೂರು: ಇವತ್ತು ಶ್ರೀಕೃಷ್ಣ ಜನ್ಮಾಷ್ಟಮಿ.ಈ ಹಬ್ಬವನ್ನು ದೇಶ – ವಿದೇಶಗಳಲ್ಲೂ ಅತ್ಯಂತ ಭಕ್ತಿ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ.ಶ್ರೀಕೃಷ್ಣನು ವಿಷ್ಣು ದೇವನ 8ನೇ ಅವತಾರವಾಗಿದ್ದು,ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಭೂಮಿಯಲ್ಲಿ ಜನಿಸಿದರು ಎಂದು ಪ್ರತೀತಿ. ಈ ದಿನವನ್ನೇ ನಾವು ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತದೆ.ಶ್ರೀಕೃಷ್ಣ ಜನ್ಮಾಷ್ಟಮಿ ದಿನದ ಪೂಜೆಯು ಮನೆಗೆ ಶಾಂತಿಯನ್ನು, ಸಮೃದ್ಧಿಯನ್ನು, ಸಂತಾನ ಭಾಗ್ಯವನ್ನು ಮತ್ತು ಉತ್ತಮ ಆರೋಗ್ಯವನ್ನು ತರುತ್ತದೆ ಎನ್ನುವ ನಂಬಿಕೆಯಿದೆ.
ಮಕ್ಕಳು ಕೃಷ್ಣನನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.ಕೃಷ್ಣನ ಜೀವನ ಚರಿತ್ರೆಯಿಂದ ಮಕ್ಕಳಿಗೆ ಜೀವನದ ಮೌಲ್ಯವನ್ನು ತಿಳಿಸಬಹುದು.ಈ ಹಿನ್ನೆಲೆಯಲ್ಲಿ ಬಹುತೇಕ ತಾಯಿಯವರು ದೇವಕಿ ನಂದನ ಕೃಷ್ಣನ ವೇಷದಲ್ಲಿ ತಮ್ಮ ಮಕ್ಕಳಿಗೆ ವೇಷಭೂಷಣ ತೋಡಿಸಿ ಶೃಂಗರಿಸುತ್ತಾರೆ.ಮಕ್ಕಳಿಗೆ ಕೃಷ್ಣ ವೇಷ ತೊಡಿಸಿದಾಗ ಆ ನಿಷ್ಕಲ್ಮಷ ಮನಸ್ಸಿನ ಮಗು ಥೇಟ್ ಭಗವಾನ್ ಸ್ವರೂಪದಂತೆಯೇ ಕಾಣುವುದು.ಅದ್ರಂತೆ ಬೆಂಗಳೂರಿನ ವಿದ್ಯಾರಣ್ಯಪುರದ ಚಿಕ್ಕಬೆಟ್ಟಹಳ್ಳಿಯ ದಿಲೀಪ್ ಕುಮಾರ್ ಬಿ.ಜೆ ಹಾಗೂ ಅರುಣಾ ಶಿರಗುಪ್ಪಿ ಪುತ್ರ ಲಿಶಾನ್ ಡಿ ಜೈನ್ ಗೆ ಕೃಷ್ಣನ ಕಲರ್ ಪುಲ್ ಡ್ರೇಸಿಂಗ್ ಮಾಡಿದ್ದು,ಮುದ್ದು ಮುದ್ದಾಗಿ ಕಂಗೋಳಿಸುತ್ತಿದ್ದಾನೆ.
ಲಿಶಾನ್ ಶ್ರೀಕೃಷ್ಣನಾಗಿ ಜೋಕಾಲೆಯಲ್ಲಿ ಒಂದೆಡೆ ತೂಗುತ್ತಿದ್ದರೇ,ಗೋಪಿಕೆಯರಾದ ಅದ್ವಿಕಾ ಹಾಗೂ ಭುವಿಕಾ ಜೊತೆ ತುಂಟಾಟವಾಡುತ್ತಿದ್ದಾನೆ.ಹೂವಿನ ಪೇಟಾ ಅಥವಾ ರೂಮಾಲು ತೊಟ್ಟು ತಲೆಗೆ ನವಿಲು ಗಿರಿ ಇಟ್ಟುಕೊಂಡು ಮಿಂಚುತ್ತಿದ್ದಾರೆ.ಮತ್ತೊಂದೆಡೆ ಬೆಣ್ಣೆ ಕಡೆಯುವ ಮುರಾರಿ ವೇಷದಲ್ಲಿ ಲಿಶಾನ್ ಮಿಂಚಿದನು.ಈ ಪೋಟೋಶೂಟ್ ನ್ನು ಫ್ಯಾಷನ್ ಫಿಕ್ಸೆಲ್ ಸ್ಟುಡಿಯೋದಲ್ಲಿ ಶೂಟ್ ಮಾಡಲಾಗಿದೆ.