ರಾಷ್ಟ್ರನಿಷ್ಠ ವಕೀಲರು, ಉದ್ಯಮಿಗಳು, ಸೇರಿದಂತೆ 350 ಕ್ಕೂ ಅಧಿಕ ಮಂದಿ ಸಹಭಾಗ
ಹಿಂದೂ ಧರ್ಮವನ್ನು ಪಂಥಗಳೊಂದಿಗೆ ಹೋಲಿಕೆ ಯೋಗ್ಯವಲ್ಲ !
– ಶ್ರೀ. ಸಂದೀಪ್ ಬಾಲಕೃಷ್ಣ, ಸಂಸ್ಥಾಪಕರು ಮತ್ತು ಮುಖ್ಯ ಸಂಪಾದಕರು, ದಿ ಧರ್ಮ ಡಿಸ್ಪ್ಯಾಚ್
ಇಬ್ರಹಾಮಿಕ್ ಧರ್ಮಗಳೊಂದಿಗೆ ಹಿಂದೂ ಧರ್ಮವನ್ನು ಹೋಲಿಸಲಾಗದು. ಅವುಗಳ ಕೇವಲ ಪುಸ್ತಕದ ಆಧಾರದಲ್ಲಿ ನಡೆಯುತ್ತಿದ್ದು ಸಂಕುಚಿತ ವಿಚಾರಧಾರೆಯಾಗಿದೆ, ‘ಹಿಂದೂ’ ಇದೊಂದೇ ಧರ್ಮವಾಗಿದ್ದು, ಇತರ ಎಲ್ಲವೂ ಪಂಥಗಳಾಗಿವೆ. ನಾವು ಹಿಂದೂಗಳು ಇಂತಹ ತುಷ್ಟೀಕರಣಕ್ಕೆ ಬಲಿಯಾಗಬಾರದು ಎಂದರು.
ಜನಸಂಖ್ಯಾ ಬದಲಾವಣೆ : ರಾಷ್ಟ್ರದ ಭವಿಷ್ಯದ ಎಚ್ಚರಿಕೆ ! – ಶ್ರೀ. ವಿನೋದ್, ಸಂಸ್ಥಾಪಕರು, ಸ್ಟ್ರಿಂಗ್ ರಿವೀಲ್ಸ್
ಜನರಾಶಿ ಮತ್ತು ಜನಸಂಖ್ಯೆ ಪರಸ್ಪರ ಅವಿಭಾಜ್ಯ ಎಂಬುದನ್ನು ಒತ್ತಿ ಹೇಳಿದರು. ನಮ್ಮ ದೇಶದ ಜನಸಂಖ್ಯಾ ಬದಲಾವಣೆಗಳ ವಿಷಯವನ್ನು ನಾವು ಗಮನಿಸಬೇಕಾಗಿದೆ. ನಾವು ಮೇಲ್ನೋಟಕ್ಕೆ ಬಹುಸಂಖ್ಯಾತ ಸಮಾಜ ಎನಿಸಿದ್ದರೂ ಅದರಲ್ಲಿ ಎಷ್ಟು ಜನ ಮತಾಂತರಗೊಂಡಿದ್ದಾರೆ ? ಎಷ್ಟು ಜನ ಧರ್ಮದ ವಿಚಾರಧಾರೆಗಳ ವಿರುದ್ಧ ನಿಂತಿದ್ದಾರೆ ? ಎಷ್ಟು ಜನ ಶ್ರದ್ಧೆಯಿಂದ ಧರ್ಮಪಾಲನೆ ಮಾಡುತ್ತಿದ್ದಾರೆ ಈ ರೀತಿಯಲ್ಲಿ ನಿಜವಾಗಿ ಅವಲೋಕನ ಮಾಡಬೇಕಿದೆ ಮತ್ತು ಶ್ರದ್ಧಾವಂತ ಸಮಾಜದ ನಿರ್ಮಾಣವಾಗಬೇಕಿದೆ ಎಂದರು.
ದೇವಾಲಯದಿಂದ ಬೌದ್ಧಿಕ ಆಕ್ರಮಣದವರೆಗೆ ನಡೆದು ಬಂದ ದಾಳಿ; ಮುಂದೇನು ? – ಶ್ರೀ. ಮೋಹನ್ ಗೌಡ, ರಾಜ್ಯ ವಕ್ತಾರರು, ಹಿಂದು ಜನಜಾಗೃತಿ ಸಮಿತಿ