!! ಶ್ರೀಮನ್ಮೂಲರಾಮೋ ವಿಜಯತೇ !!
!! ಶ್ರೀ ಗುರುರಾಜೋ ವಿಜಯತೇ !!
” ಶ್ರೀ ರಾಯರ ಭಕ್ತರಿಗೆ ಶುಭ ಸುದ್ದಿ ”
ಪ್ರಹ್ಲಾದನೇ ವ್ಯಾಸಮುನಿ ರಾಘವೇಂದ್ರರು ! ಅಹುದೆಂದು ಭಜಿಸರೊ ವಿಜಯವಿಠ್ಠಲ ಒಲಿವ !!
ಸಾಕ್ಷಾತ್ ಶ್ರೀ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು –
ಬೆಂಗಳೂರು ನಗರದ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಭಕ್ತ ಶಿಷ್ಯರ ಅನುಕೂಲಕ್ಕಾಗಿ –
” ಮಂತ್ರಾಲಯ ಮಾಹಿತಿ ಕೇಂದ್ರ ” ವನ್ನು.. ” ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ – 5ನೇ ಬಡಾವಣೆ, ಜಯನಗರ, ಬೆಂಗಳೂರು ನಲ್ಲಿ ಪ್ರಾರಂಭ ಮಾಡಿದ್ದು, ಶ್ರೀ ರಾಯರ ಭಕ್ತರು ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ನಡೆಯುವ ಸೇವಾ ವಿವರ, ಅನ್ನದಾನ, ವಿದ್ಯಾದಾನ, ಅಭಿವೃದ್ಧಿ ಕಾರ್ಯಗಳಿಗೆ ತನು, ಮನ, ಧನಗಳಿಂದ ಉದಾರವಾಗಿ ಸೇವೆ ಸಲ್ಲಿಸುವ ದಾನಿಗಳು ಈ ಕಾರ್ಯಾಲಯವನ್ನು ಸಂಪರ್ಕಿಸಲು ಈ ಮನವಿ ಮಾಡಿ ಕೊಳ್ಳುತ್ತಿದ್ದೇನೆ.
ವಾಯುವಂಶಾಬ್ಧಿಸಂಭೂತಂ
ಲೋಕಕಲ್ಯಾಣತತ್ಪರಮ್!
ಮೂಲರಾಮಪದಾಸಕ್ತಂ
ಸುಬುಧೇಂದ್ರಗುರುಂ ಭಜೇ!!
ಶ್ರೀ ಶ್ರೀಪಾದಂಗಳವರ ಆಜ್ಞಾನುಸಾರವಾಗಿ.,
ಸಾರ್ವಜನಿಕ ಸಂಪರ್ಕಾಧಿಕಾರಿಗಳು ( P.R.O.)
ಮಂತ್ರಾಲಯ ಮಾಹಿತಿ ಕೇಂದ್ರ
ಶಾಖೆ : ಬೆಂಗಳೂರು.





















