ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಬೆಂಗಳೂರು ಕ್ಯಾಂಪಸ್, ಮಣಿಪಾಲ ಆಸ್ಪತ್ರೆಗಳ (MHH) ಸಹಯೋಗದೊಂದಿಗೆ, ಜೂನ್ 27ರಂದು ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಸಿತು.
ಯಲಹಂಕ ನ್ಯೂ ಟೌನ್ನ ಎಸಿಪಿ ನರಸಿಂಹ ಮೂರ್ತಿ, ಮಾಹೆ ಬೆಂಗಳೂರಿನ ಪ್ರೊ-ವೈಸ್- ಚಾನ್ಸೆಲರ್ ಪ್ರೊ. ಮಧು ವೀರರಾಘವನ್ ಅವರು ಈ ಉಚಿತ ವೈದ್ಯಕೀಯ ತಪಾಸಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾಹೆ ಬೆಂಗಳೂರಿನ ಹೆಚ್ಚುವರಿ ರಿಜಿಸ್ಟ್ರಾರ್ ಶ್ರೀ ರಾಘವೇಂದ್ರ ಪ್ರಭು ಪಿ. ಮತ್ತು ಮಾಹೆ ಬೆಂಗಳೂರಿನ ಸಾಮಾನ್ಯ ಸೇವೆಗಳ ಉಪ ನಿರ್ದೇಶಕ ಶ್ರೀ ಬಸವರಾಜ್ ಎಸ್. ಕುಪ್ಪಸಾದ್ ಇದ್ದರು.
ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನಗರದ ಸುರಕ್ಷತೆಗಾಗಿ ಸದಾ ಶ್ರಮಿಸುವ ಪೊಲೀಸ್ ಸಿಬ್ಬಂದಿಯ ಆರೋಗ್ಯದ ಕಾಳಜಿ ವಹಿಸುವ ಭಾಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆಯಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ ಸುಮಾರು 200 ಜನರು ಭಾಗವಹಿಸಿದ್ದರು.
ಬೆಳಿಗ್ಗೆ 8 ಗಂಟೆಗೆ ಶುರುವಾದ ವೈದ್ಯಕೀಯ ತಪಾಸಣಾ ಶಿಬಿರ ಮಧ್ಯಾಹ್ನದವರೆಗೆ ನಡೆಯಿತು. ಈ ಶಿಬಿರದಲ್ಲಿ ಬಾಡಿ ಮಾಸ್ ಇಂಡೆಕ್ಸ್ (BMI) ತಪಾಸಣೆ, ರಕ್ತದೊತ್ತಡ ಪರೀಕ್ಷೆ, ಜನರಲ್ ರಾಂಡಮ್ ಬ್ಲಡ್ ಶುಗರ್ (GRBS) ಪರೀಕ್ಷೆ, ECG ಪರೀಕ್ಷೆಗಳನ್ನು ಕೈಗೊಳ್ಳಲಾಯಿತು. ಪರೀಕ್ಷೆಯ ವರದಿಯನ್ನು ವೈದ್ಯರು ಸ್ಥಳದಲ್ಲೇ ವಿಶ್ಲೇಷಿಸಿದರು. ಇದರ ಜೊತೆಗೆ ಶಿಬಿರದಲ್ಲಿದ್ದ ಆಹಾರ ತಜ್ಞರು, ಯಾವೆಲ್ಲ ರೀತಿಯ ಆಹಾರ ಸೇವನೆ ಮಾಡಬೇಕು ಎನ್ನುವ ಬಗ್ಗೆ ಅಗತ್ಯ ಮಾಹಿತಿಯನ್ನು ಒದಗಿಸಿದರು. ವೈದ್ಯರು ಹೆಚ್ಚಿನ ತಪಾಸಣೆಗೆ ಸೂಚಿಸುವ ಸಿಬ್ಬಂದಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಹೊರರೋಗಿ ತಪಾಸಣೆ, ಪ್ರಯೋಗಾಲಯ ಪರೀಕ್ಷೆಗಳು ಮತ್ತು ರೇಡಿಯಾಲಜಿ ಸೇವೆಗಳಲ್ಲಿ 10% ವಿಶೇಷ ರಿಯಾಯಿತಿ ನೀಡಲಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ಹೇಳಲಾಯಿತು.
ಈ ಸಾಮಾಜಿಕ ಕೆಲಸದ ಕುರಿತು ಮಾತನಾಡಿದ ಮಾಹೆ ಬೆಂಗಳೂರಿನ ಪ್ರೊ-ವೈಸ್-ಚಾನ್ಸೆಲರ್ ಪ್ರೊ. ಮಧು ವೀರರಾಘವನ್, ‘ನಮಗಾಗಿ ಶ್ರಮಿಸುವವರಿಗೆ ಪುಟ್ಟ ಕೃತಜ್ಞತೆಯನ್ನು ಸಲ್ಲಿಸುವ ಅಂಗವಾಗಿ ನಡೆದ ಈ ವೈದ್ಯಕೀಯ ಶಿಬಿರವು, ಸಮಾಜಕ್ಕೆ ಸ್ಪಂದಿಸುವ ಮಾಹೆಯ ಅಚಲ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ಪೊಲೀಸ್ ಸಿಬ್ಬಂದಿ ಸಾರ್ವಜನಿಕ ಸುರಕ್ಷತೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ ಮತ್ತು ಈ ರೀತಿಯ ಅರ್ಥಪೂರ್ಣ ಕೆಲಸದ ಮೂಲಕ ಅವರ ಆರೋಗ್ಯದ ಕಾಳಜಿ ವಹಿಸುತ್ತಿರುವುದು ನಮಗೆ ಸಂತಸ ತಂದಿದೆ’ ಎಂದರು.
ಯಲಹಂಕ ನ್ಯೂ ಟೌನ್ನ ಎಸಿಪಿ ನರಸಿಂಹ ಮೂರ್ತಿ ಅವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ, ‘ಈ ಅತ್ಯುತ್ತಮ ವೈದ್ಯಕೀಯ ಶಿಬಿರವನ್ನು ಆಯೋಜಿಸಿದ್ದಕ್ಕಾಗಿ ನಾವು ಮಾಹೆ ಬೆಂಗಳೂರಿಗೆ ತುಂಬಾ ಅಭಾರಿಯಾಗಿದ್ದೇವೆ. ನಮ್ಮ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಇಂತಹ ಆರೋಗ್ಯ ತಪಾಸಣೆ ಅತ್ಯಂತ ಅಗತ್ಯ ಮತ್ತು ಅಮೂಲ್ಯವಾಗಿದೆ. ಏಕೆಂದರೆ ಅವರು ಸಾಮಾನ್ಯವಾಗಿ ವೈಯಕ್ತಿಕ ಆರೋಗ್ಯದ ಅಗತ್ಯಗಳಿಗಿಂತ ತಮ್ಮ ಕರ್ತವ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ’ ಎಂದು ಹೇಳಿದರು.
ಈ ವಿಶಿಷ್ಟ ಅಭಿಯಾನವು ತಮ್ಮ ಕೆಲಸದ ಸ್ವರೂಪ ಮತ್ತು ಕರ್ತವ್ಯ ಜವಾಬ್ದಾರಿಗಳಿಂದಾಗಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುವ ಪೊಲೀಸರಾಗಿ ಹಮ್ಮಿಕೊಳ್ಳಲಾಗಿತ್ತು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಬೆಂಗಳೂರು (MAHE B’LRU) ಬಗ್ಗೆ:
1953 ರಲ್ಲಿ ಸ್ಥಾಪನೆಯಾದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆ. ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ದಾಖಲೆ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಗಮನಾರ್ಹ ಸಂಶೋಧನಾ ಕೊಡುಗೆಗಳೊಂದಿಗೆ, ಮಾಹೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಮತ್ತು ಮೆಚ್ಚುಗೆಯನ್ನು ಗಳಿಸಿದೆ. ಅಕ್ಟೋಬರ್ 2020 ರಲ್ಲಿ, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಮಾಹೆಗೆ ಪ್ರತಿಷ್ಠಿತ ಇನ್ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಡೀಮ್ಡ್ ವಿಶ್ವವಿದ್ಯಾಲಯ ಎಂಬ ಹುದ್ದೆಯನ್ನು ನೀಡಿ ಗೌರವಿಸಿತು. ಪ್ರಸ್ತುತ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನಲ್ಲಿ (NIRF) ಆರನೇ ಸ್ಥಾನದಲ್ಲಿದೆ, ಮಾಹೆ ಪರಿವರ್ತನಾತ್ಮಕ ಕಲಿಕೆಯ ಅನುಭವವನ್ನು ಬಯಸುವ ವಿದ್ಯಾರ್ಥಿಗಳಿಗೆ ಆದ್ಯತೆಯ ಆಯ್ಕೆಯಾಗಿದೆ. ಮಾಹೆಯ ಹೊರಗಿನ ಕ್ಯಾಂಪಸ್ ಆಗಿರುವ ಮಾಹೆ ಬೆಂಗಳೂರು, ಹೆಚ್ಚು ಅರ್ಹ ಅಧ್ಯಾಪಕರು ಮತ್ತು ಸಮರ್ಪಿತ ಮಾರ್ಗದರ್ಶಕರಿಂದ ಬೆಂಬಲಿತವಾದ ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣವನ್ನು ನೀಡುವಲ್ಲಿ ಶ್ರೇಷ್ಠವಾಗಿದೆ. ಮಾಹೆ ಬೆಂಗಳೂರು ಕ್ಯಾಂಪಸ್ ಹೊಸ ಯುಗದ ತಂತ್ರಜ್ಞಾನ-ಸಕ್ರಿಯಗೊಳಿಸಿದ ಜೀವನ ಕ್ಯಾಂಪಸ್ನಲ್ಲಿ ಸ್ಪೂರ್ತಿದಾಯಕ, ಭವಿಷ್ಯ-ಸಂಬಂಧಿತ ಕಲಿಕಾ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿ, ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ, ರೂಪಾಂತರಗೊಳ್ಳುತ್ತಾರೆ ಮತ್ತು ಬಹು ಆಯ್ಕೆಗಳು ಮತ್ತು ಅವಕಾಶಗಳನ್ನು ಕಂಡುಕೊಳ್ಳುತ್ತಾರೆ. ಮಾಹೆ ಬೆಂಗಳೂರಿನಲ್ಲಿ, ಬೆಳವಣಿಗೆಯ ಸಾಮರ್ಥ್ಯ ಮತ್ತು ಲಭ್ಯವಿರುವ ಅವಕಾಶಗಳು ಅಪಾರವಾಗಿವೆ.