Live Stream

[ytplayer id=’22727′]

| Latest Version 8.0.1 |

National News

ಮಾಜಿ ಸಿಎಂ ಜಗನ್ ಕಾರಿಗೆ ಸಿಕ್ಕಿ ವೃದ್ಧನ ಸಾವು ಪ್ರಕರಣ : ಕಾರು ಚಾಲಕ ಪೊಲೀಸ್ ವಶಕ್ಕೆ

ಮಾಜಿ ಸಿಎಂ ಜಗನ್ ಕಾರಿಗೆ ಸಿಕ್ಕಿ ವೃದ್ಧನ ಸಾವು ಪ್ರಕರಣ : ಕಾರು ಚಾಲಕ ಪೊಲೀಸ್ ವಶಕ್ಕೆ

ಹೈದರಾಬಾದ್: ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ರ‍್ಯಾಲಿ ಒಂದರಲ್ಲಿ ಘಟಿಸಿದ ದುರಂತದಲ್ಲಿ 65 ರ ಪ್ರಾಯದ ವೃದ್ಧ ಕಾರಿನ ಚಕ್ರದಡಿ ಸಿಲುಕಿ ಸಾವನ್ನಪ್ಪಿದ ಘಟನೆ ಸಂಭವಿಸಿತ್ತು. ಈ ವಿಷಯಕ್ಕೆ ಸಂಬ0ಧಿಸಿದ0ತೆ ಮಾಜಿ ಸಿ.ಎಂ. ಜಗನ್ ವಿರುದ್ಧ ಈಗಾಗಲೇ ಎಫ್‌ಐಆರ್ ಕೂಡಾ ದಾಖಲಾಗಿದೆ. ಕಾರು ಚಾಲಕ ರಮಣ ರೆಡ್ಡಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು,ಕಾರಿನ ಮಾಲೀಕ ಕೃಷ್ಣ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ ಎನ್ನಲಾಗಿದೆ.
ಇದೇ ದಿನಾಂಕ ತಿಂಗಳ 18 ರಂದು ಪಲ್ನಾಡು ಜಿಲ್ಲೆಯ ಸತ್ತೇನಹಳ್ಳಿಯಲ್ಲಿ ಜಗನ್ ಅವರು ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಸಂದರ್ಭದಲಿ ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟ ನಡೆದಿದೆ. ಇದೇ ವೇಳೆ 65 ವರ್ಷದ ಸಂಗಯ್ಯ ಎಂಬ ವೃದ್ಧ ಅಸುನೀಗಿದ್ದಾರೆ. ಪ್ರಕರಣಕ್ಕೆ ಸಂಬ0ಧಿಸಿದ0ತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಾರು ಚಾಲಕ ರಮಣ ರೆಡ್ಡಿಯನ್ನು ಎ1 ಆರೋಪಿಯಾಗಿ, ಜಗನ್ ಮೋಹನ್ ರೆಡ್ಡಿಯನ್ನು ಎ2 ಆರೋಪಿಯಾಗಿ ಮತ್ತು ಕಾರ್ ಮಾಲಿಕ ಕೃಷ್ಣನನ್ನು 3ನೇ ಆರೋಪಿಯಾಗಿ ಪರಿಗಣಿಸಲಾಗಿದೆ. ರಮಣ ರೆಡ್ಡಿಯನ್ನು ಬಂಧಿಸಲಾಗಿದೆ.
ಸಂಗಯ್ಯನ ಸಾವಿನ ಘಟನೆಗೆ ಸಂಬAಧಿಸಿದAತೆ, ಕಾರ್ಯಕರ್ತರು ಮತ್ತು ಸಾರ್ವಜನಿಕರು ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರ‍್ಯಾಲಿಗಳಂತಹ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನರ ಸುರಕ್ಷತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಸರಕಾರ ಮತ್ತು ಆಯೋಜಕರು ಹೆಚ್ಚಿನ ಮುತುವರ್ಜಿಯನ್ನು ವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿರುವರು.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";