Live Stream

[ytplayer id=’22727′]

| Latest Version 8.0.1 |

State News

20 ದಿನಗಳ ಬಂಜಾರ ಸಾಹಿತ್ಯ, ಕಾವ್ಯ ಹಾಗೂ ನಾಟಕ ರಚನಾ ಕಾರ್ಯಗಾರಕ್ಕೆ ಚಾಲನೆ

20 ದಿನಗಳ ಬಂಜಾರ ಸಾಹಿತ್ಯ, ಕಾವ್ಯ ಹಾಗೂ ನಾಟಕ ರಚನಾ ಕಾರ್ಯಗಾರಕ್ಕೆ ಚಾಲನೆ

ವೈಜ್ಞಾನಿಕವಾಗಿ ಕಲೆ ಸಾಹಿತ್ಯವು ವಿದ್ಯಾರ್ಥಿಗಳಿಗೆ ರಾಂಕ್ ಬರಲು ಸಹಕಾರಿ:

ರಾಜ್ಯ ಸರ್ಕಾರದ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ನಗರದ ಅಗರದಲ್ಲಿ  ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ ಮತ್ತು ಪ್ರಜಾಕೀಯ ಆಶ್ರಯದ ಆಶ್ರಯದಲ್ಲಿ ಯುವಕರಿಗೆ ಬಂಜಾರ ಸಾಹಿತ್ಯ, ಕಾವ್ಯ ಹಾಗೂ ನಾಟಕ ರಚನೆಯ 20 ದಿನಗಳ ತರಬೇತಿ ಕಾರ್ಯಗಾರಕ್ಕೆ ಬಂಜಾರ ಅಕಾಡೆಮಿ ಅಧ್ಯಕ್ಷರಾದ ಡಾ.ಎ.ಆರ್.‌ ಗೋವಿಂದಸ್ವಾಮಿ ಉದ್ಘಾಟಿಸಿದರು.

ಸಮಾರಂಭದಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆ. ಪ್ರಕಾಶ್‌, ಸಾಹಿತ್ಯ ಸಂಸ್ಕೃತಿ ವೇದಿಕೆ ಅಧ್ಯಕ್ಷ ಆರ್‌ ಸದಾಶಿವಯ್ಯ, ಶಿಬಿರದ ನಿರ್ದೇಶಕರಾದ ಛಾಯಾಭಾರ್ಗವಿ, ಪ್ರಜಾಕಿರಣ ಸೇವೆ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಡಾ. ರಾಹುಲ್ ಗಾಳಿ, ಅಕಾಡೆಮಿ ಸಹ ಸದಸ್ಯ ಗಿರೀಶ್‌ ನಾಯ್ಕ್‌, ಬಂಜಾರ ಸಮುದಾಯದ ಚಿಂತಕರು, ಮುಖಂಡರಾದ ಬಿ. ರವಿನಾಯಕ್‌, ಚಂದ್ರನಾಯಕ್‌, ಸೌಂದರ್ಯ, ಪ್ರೊ. ಶಿವಣ್ಣ ನಾಯ್ಕ್‌, ರಂಗಕರ್ಮಿ ಮೈಕೂ ಶಿವಶಂಕರ್‌, ಪರಮೇಶ್‌, ಮುಖ್ಯ ಮುಖ್ಯ ಉಪದ್ಯಾಯರು, ಸ್ಥಳೀಯ ಮುಖಂಡರು, ವಿದ್ಯಾರ್ಥಿಗಳು, ಆಶ್ರಮ ಮಕ್ಕಳು ಮುಂತಾದವರು ಭಾಗವಹಿಸಿದ್ದರು.

ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ, ಬಂಜಾರ ಅಕಾಡೆಮಿ ಅಧ್ಯಕ್ಷರಾದ ಡಾ.ಎ.ಆರ್.‌ ಗೋವಿಂದಸ್ವಾಮಿ ಅವರು ಬಂಜಾರರ ಸಾಹಿತ್ಯ, ಕಾವ್ಯ, ನಾಟಕ ರಚನೆ ಹಿಂದಿನ ಅನಿವರ್ಯವಾಗಿದೆ.  ಅಲೆಮಾರಿ ಬುಡಕಟ್ಟು ಹಿನ್ನಲೆಯ ಬಂಜಾರರು ಮುಖ್ಯವಾಹಿನಿಯ ಸಾಂಸ್ಕೃತಿಕ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ತರೆದುಕೊಳ್ಳುವ ಅಗತ್ಯವಿದೆ.  ವಿಶೇಷವಾಗಿ ಯುವಕರು, ಕಲೆ, ಸಾಹಿತ್ಯ, ನಾಟಕದಂತಹ ಸಾಂಸ್ಕೃತಿಕ ವಲಯಕ್ಕೆ ಗುರುತಿಸಿಕೊಳ್ಳುವುದರಿಂದ ಸಾಮಾಜಿಕ ಜಾಗೃತಿ, ಅರಿವು, ವ್ಯಕ್ತಿತ್ವ ವಿಕಾಸಕ್ಕೆ, ಸಜ್ಜನಿಕೆಗೆ ಜನಪರ ಕಾಳಜಿಗೆ, ಜೀವಪರ ಕಾಳಜಿಗೆ ಪರಿಸರ ಕಾಳಜಿಗೆ ಅತ್ಯಂತ ಅಗತ್ಯವಿದೆ. ಇಂದು ಸಾಹಿತ್ಯ ಸಾಹಿತಿಗಳು, ಕಲೆ-ಕಲಾವಿದರು ಸಾಮಾಜದ ಸ್ಪಾಸ್ಥತೆಗೆ ಕೆಲಸ ಮಾಡುವರಾಗಿದ್ದು, ಕಲೆ, ಸಾಹಿತ್ಯ ಕ್ಷೇತ್ರಕ್ಕೆ ಯುವ ಜನತೆಯ ಜೋತೆಗೆ ರಾಜಕಾರಣೀಗಳು, ಉಪನ್ಯಾಸಕರು ಹಾಗೂ ಇತರೆ ಕ್ಷೇತ್ರದ ಜನ ತೊಡಗುವುದರಿಂದ   ಪ್ರಾಮಾಣಿಕತೆ ಸಮಾಜದಲ್ಲಿ ಹೆಚ್ಚಾಗಲಿದೆ, ನಂಬಿಕೆ  ಹೆಚ್ಚಲಿದೆ. ಸಂಬಂಧಗಳು ಸುಗಮವಾಗಲಿದೆ. ಸೇವಾ ಮಾನೋಭವ ಹುಟ್ಟಲಿದೆ. ಇದು ನಾನು ಹೇಳುವ ವಿಷಯವಲ್ಲ ಸಂಶೋಧನೆ ಹೇಳುತ್ತದೆ. ಲಿಂಡಾ ವಿಲಿಯಮ್ಸ್‌ ದಂಪತಿಗಳು ಈ ಹಿಂದೆ ಆಮೇರಿಕದಲ್ಲಿ ನಡೆಸಿರುವ ಸಂಶೋಧನೆ ಕಲೆ, ಸಾಹಿತ್ಯ, ಚಿತ್ರಕಲೆ, ಸಂಗೀತ, ನಾಟಕ ಕ್ಷೇತ್ರದಲ್ಲಿ ಇರುವವರು ಅವರ ಪಠ್ಯೇತರವಾಗಿ ತೊಡಗುವ ಮಕ್ಕಳು ರಾಂಕ್‌ ಗಳಿಸಿ ವಿಶಾಲ ಮನೋಭಾವವುಳ್ಳವರಾಗಿರುತ್ತಾರೆ. ಎಂದು ಅಭಿಪ್ರಯ ಪಟ್ಟರು.

ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿದ ಕೆ. ಪ್ರಕಾಶ್‌ ಮಾತನಾಡಿ, ಬಂಜಾರ ಅಕಾಡೆಮಿಯ ಅಧ್ಯಕ್ಷರು ದಿನದಂದೆ ಈ ಕಾರ್ಯಗಾರ ಮಾಡಿ, ಸಮಾಜದ ಸಾಂಸ್ಕೃತಿಕ ಜವಾಬ್ದಾರಿ ನಿಭಾಯಿಸುತ್ತಿದ್ದು, ಈ ಹಿಂದೆ ಶಿಕ್ಷಣದಲ್ಲಿ ರಂಗಭೂಮಿ ಜಾರಿಗಾಗಿ ಹೋರಾಡಿ ನಾಟಕ ಉಪನ್ಯಾಸಕ ನೇಮಕಾತಿಗೆ ಶ್ರಮಿಸಿ ಪರಿಚಯವಾದವರು.

ಇಂದು ಬಂಜಾರ ಭಾಷೆ, ಸಾಹಿತ್ಯ, ಸಂಸ್ಕೃತಿ ಮುಖ್ಯವಾಹಿನಿಗೆ ಬರಲು ಅವಿದತ ಶ್ರಮಿಸುತ್ತಿದ್ದಾರೆ. ಅದರ ಭಾಗವಾಗಿಯೇ ಈ ಸಾಹಿತ್ಯ ರಚನಾ ತರಬೇತಿ ಕಾರ್ಯಾಗಾರ ಇವರು ಬಂಜಾರರ  ಜೋತೆಗೆ ಇತರರಿಗೂ ಸಮಾನ ಅವಕಾಶ ನೀಡಿರುವುದು ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ಆಶ್ರಮದ ಡಾ. ರಾಹುಲ್ ಗುಳಿ ಅವರು ಮಾತನಾಡಿ ನಮ್ಮ ಅಶ್ರಮದಲ್ಲಿರು ಬಡ ಬಂಜಾರ ಹಾಗೂ ಇತರೆ ಮಕ್ಕಳಿಗೂ ಬಂಜಾರ ಸಾಹಿತ್ಯ ರಚನೆಯ ತರಬೇತಿಗೆ ಅವಕಾಶ ಕಲ್ಪಿಸಿದ್ದು ನಮ್ಮ ಮಕ್ಕಳು ಸಾಂಸ್ಕೃತಿಕ ಕ್ಷೇತ್ರಕ್ಕೆ ತರೆದುಕೊಳ್ಳಲು ಉತ್ತಮ ಅವಕಾಶ ಕೊಟ್ಟಿದ್ದಾರೆ ಎಂದರು. ಸಾಹಿತ್ಯ ಸಂಸ್ಕೃತಿ ವೇದಿಕೆ ಅಧ್ಯಕ್ಷ ಆರ್‌. ಸದಾಶಿವಯ ಜರಗನಹಳ್ಳಿ ಮಾತನಾಡಿ, ನಮ್ಮ ವೇದಿಕೆಗೂ ಸಲಹೆಗಾರರಾದ ಡಾ.ಎ.ಆರ್.‌ ಗೋವಿಂದಸ್ವಾಮಿ ಅವರು ನಮ್ಮ 150ನೇ ಕಾರ್ಯಕ್ರಮವಾಗಿ ಈ ತರಬೇತಿ ಕಾರ್ಯಗಾರದ ಕೊಡುಗೆಯಿಂದ ಬಂಜಾರ ಭಾಷೆ, ಸಂಸ್ಕೃತಿಗೆ ನಾವು ಸೇವೆ ಮಾಡಲು ವೇದಿಕೆಯಾಗಿದೆ. ಯಾವುದೇ ಭಾಷೆಯ ಅಳಿವು ಉಳಿವು ಒಂದು ಸಮಾಜದ ಉಳಿತಾಗಿದೆ ಎಂದರು.

ಕಾರ್ಯಾಗಾರದ ನಿರ್ದೇಶಕ ಛಾಯಾ ಅವರು ಮಾತನಾಡಿ, ಮಕ್ಕಳಿಗೆ ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೋಡಿಸುವ ಹಾಗೂ ಪ್ರದರ್ಶಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.

- Advertisement -  - Advertisement - 
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";