Live Stream

[ytplayer id=’22727′]

| Latest Version 8.0.1 |

CinemaEntertainment NewsFeature Article

ಮನಸ್ತಾಪ ಯಾಕೆ ಗೊತ್ತಾ – ಕ್ರೇಜಿಸ್ಟಾರ್ ಮನದಾಳ

ಮನಸ್ತಾಪ ಯಾಕೆ ಗೊತ್ತಾ – ಕ್ರೇಜಿಸ್ಟಾರ್ ಮನದಾಳ

ನಾದಬ್ರಹ್ಮ ಹಂಸಲೇಖ (Hamsalekha) ಅವರ 74ನೇ ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾದ ಘೋಷಣೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಹಂಸಲೇಖ ಅವರ ಆಪ್ತ ಗೆಳೆಯರು, ನಿರ್ದೇಶಕರು ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಆಗಮಿಸಿ ಶುಭಾಶಯ ಕೋರಿದ್ದಾರೆ. ಜೊತೆಗೆ ಹಂಸಲೇಖ ಹಾಗೂ ಕ್ರೇಜಿಸ್ಟಾರ್ ನಡುವಿನ ಸ್ನೇಹ ಹಾಗೂ ಮನಸ್ತಾಪದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ ನಟ ರವಿಚಂದ್ರನ್. ಹಂಸಲೇಖ ಹುಟ್ಟುಹಬ್ಬದ ವೇದಿಕೆ ಮೇಲೆ ಕ್ರೇಜಿಸ್ಟಾರ್ ಮಾತಾಡಿದ ಮಾತುಗಳು ಕನ್ನಡ ಸಿನಿಮಾ ಅಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದೆ, ನಮ್ಮಿಬ್ಬರ ಸ್ನೇಹ ದೂರಾಗಿದ್ದಕ್ಕೆ ಕಾರಣವಿಲ್ಲ. ಯಾವತ್ತೂ ಜಗಳ ಮಾಡಿ ದೂರಾಗಲಿಲ್ಲ. ಹೇಗೆ ಸೇರಿದ್ದೇವೋ ಹಾಗೆ ದೂರಾದೆವು. ನಾನು ಪೆನ್ನು ಪೇಪರ್ ಹಿಡಿಬೇಕು ಅಂತಾ ಇತ್ತೋ ಏನೋ ಹೀಗಾಗಿ ನಾವು ದೂರವಾಗಿದ್ದಿರಬಹುದು. ಈಗ ನನ್ನ ಜಾಗಕ್ಕೆ ರಾಜು (ಹಂಸಲೇಖ) ಬಂದಿದ್ದಾರೆ. ನಾನು ಹೃದಯ ಆದ್ರೆ ನೀವು ನಮ್ಮ ಹಾರ್ಟ್ ಬೀಟ್” ಎಂದು ಹಂಸಲೇಖ ಬರ್ತ್ ಡೇ ದಿನ ಕ್ರೇಜಿಸ್ಟಾರ್ ಮನಬಿಚ್ಚಿ ಮಾತಾಡಿದ್ದಾರೆ. ಅದೆಷ್ಟೋ ವರ್ಷಗಳಿಂದ ತಮ್ಮ ಮನಸ್ಸಲ್ಲಿದ್ದ, ಮುಕ್ತವಾಗಿ ಹೇಳಬೇಕೆಂದುಕೊಂಡಿದ್ದ ಮನದಾಳದ ಇಂಗಿತವನ್ನ ತೋಡಿಕೊಂಡಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ಸ್ನೇಹ ಹಾಗೂ ಅವರು ಸಪೋರ್ಟ್ ಮಾಡಿದ ಬಗೆಯನ್ನ ಹಂಸಲೇಖ ಎಳೆಎಳೆಯಾಗಿ ವಿವರಿಸಿದರು. ಈಗಲೂ ಕ್ರೇಜಿಸ್ಟಾರ್ 10 ಕೆಜಿ ತೂಕ ಕಡಿಮೆ ಮಾಡಿ ನಿಂತರೆ, ಸ್ಪುರದೃಪಿ ನಟರು. ಅತೀ ಹೆಚ್ಚು ಲೇಡಿ ಅಭಿಮಾನಿಗಳು ಇರುವ ಇರುವ ಏಕೈಕ ನಟ ಅದು ಕ್ರೇಜಿಸ್ಟಾರ್ ಎಂದು ಗುಣಗಾನ ಮಾಡಿದರು. ಅಲ್ಲದೇ ಎಂಜಿ ರೋಡ್ ಕಡೆ ತಿರುಗಿಕೊಂಡಿದ್ದ ಪ್ರೇಕ್ಷಕರನ್ನು ಗಾಂಧಿನಗರಕ್ಕೆ ಕರೆದಕೊಂಡು ಬಂದವರು ರವಿಚಂದ್ರನ್. ನನ್ನ ಜೀವನದ ಫಸ್ಟ್ ಪಾಸಿಟಿವ್ ಪರ್ಸಾನಾಲಿಟಿ ರವಿಚಂದ್ರನ್ ಎಂದು ಕೊಂಡಾಡಿದರು.

- Advertisement - 
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";