ಬೆಂಗಳೂರು: ಸೆಪ್ಟೆಂಬರ್ ಒಳಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ಬದಲಾಗಲಿದೆಯೇ? ಹೀಗೊಂದು ಸುದ್ದಿಯೊಂದು ರಾಜಕೀಯ ವಲಯದಲ್ಲಿ ಒಡಾಡುತ್ತಿದೆ, ಆದರೆ ಡಿಸಿಎಂ ಡಿಕೆಶಿ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ,
ಶುಕ್ರವಾರ ಕೆಂಪೇಗೌಡ ಜಯಂತಿ ಅಂಗವಾಗಿ ಬಿಬಿಎಂಪಿ ಆವರಣದಲ್ಲಿರುವ ಕೆಂಪೇಗೌಡ ಪ್ರತಿಮೆಗೆ ಅವರು ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು, ಈ ವೇಳೆ ಸೆಪ್ಟೆಂಬರ್ ನಲ್ಲಿ ಸರ್ಕಾರದ ಸಚಿವ ಸಂಪುಟ ಬದಲಾಗಲಿದೆಯೇ ಎಂಬ ಪ್ರಶ್ನೆ ಕೇಳಿದಾಗ ಉತ್ತರ ನೀಡದೇ ಅಲ್ಲಿಂದ ಹೊರಟಿದ್ದಾರೆ,
ಸಚಿವ ಕೆ.ಎನ್ ರಾಜಣ್ಣ ಗುರುವಾರ ಸೆಪ್ಟೆಂಬರ್ ನಂತರ ಪಕ್ಷದಲ್ಲಿ ಕ್ರಾಂತಿ ನಡೆಯಲಿದೆ ಎಂದು ಹೇಳಿಕೆ ನೀಡಿದ್ದರು, ಅಲ್ಲದೇ ನಾಯಕತ್ವವೂ ಬದಲಾವಣೆಯಾಗಲಿದ್ದು, ರಾಜ್ಯದಲ್ಲಿ ಹಲವು ಶಕ್ತಿಕೇಂದ್ರಗಳು ಇವೆ ಎಂದು ನಿಗೂಢ ಹೇಳಿಕೆ ನೀಡಿದ್ದರು,
Veekay News > State News > ಸಚಿವರ ಬದಲಾವಣೇ ನಿಜವೇ?-ಉತ್ತರಿಸದೇ ಮುಂದ ಹೋದ ಡಿಕೆಶಿ!
ಸಚಿವರ ಬದಲಾವಣೇ ನಿಜವೇ?-ಉತ್ತರಿಸದೇ ಮುಂದ ಹೋದ ಡಿಕೆಶಿ!
ವೀ ಕೇ ನ್ಯೂಸ್27/06/2025
posted on
