ಬೆಂಗಳೂರು : “ಶ್ರೀ ಗಣೇಶ ನೃತ್ಯಾಲಯ”ದ ಕಲಾ ನಿರ್ದೇಶಕರಾದ ಶ್ರೀಯುತ ಗಣೇಶ್ ಹಾಗೂ ಅವರ ಪತ್ನಿ ಶ್ರೀಮತಿ ಭಾವನಾ ಗಣೇಶ್ ನೃತ್ಯ ದಂಪತಿಗಳು ಇವರು ತಮ್ಮ ನೃತ್ಯ ಶಾಲೆಯಲ್ಲಿ ಸುಮಾರು ಒಂದೂವರೆ ವರ್ಷದಿಂದ ಮಾಸಿಕ ಭರತನಾಟ್ಯ ಕಾರ್ಯಕ್ರಮವನ್ನು “ಯುವ ಪ್ರತಿಭೆ”ಗಳಿಗೆ ವೇದಿಕೆ ನೀಡುತ್ತಾ ಬಂದಿದ್ದಾರೆ. ಈವರೆಗೆ ಹಲವಾರು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುತ್ತಾರೆ. ಇದೇ ತಿಂಗಳ ಅಂದರೆ ಆಗಸ್ಟ್ 24ರಂದು ನಡೆದ ಕಾರ್ಯಕ್ರಮದಲ್ಲಿ ಶ್ರೀ ಗಣೇಶ್ ದಂಪತಿಗಳ ಹಿರಿಯ ವಿದ್ಯಾರ್ಥಿಗಳು ಕು|| ಪೂರ್ವಿತಾ ಬಿ ಜೆ, ಕು||ಶಾಲಿನಿ ಜಿ, ಕು|| ಸಮೃದ್ಧಿ ವಿ ಹೆಬ್ಬಾರ್ ಮತ್ತು ಗುರು ಡಾ. ಧ್ವರಿತಾ ವಿಶ್ವನಾಥ್ ರವರ ಶಿಷ್ಯೆ ಕು|| ಶ್ರೀಕೀರ್ತಿ ರಾಮನ್ ರಿಂದ ಭರತನಾಟ್ಯ ಪ್ರಸ್ತುತಿ ನಡೆಸಲಾಗಿತ್ತು. ಇದಕ್ಕೆ ಹಲವಾರು ಕಲಾ ರಸಿಕರು ಸಾಕ್ಷಿಯಾಗಿದ್ದರು..
ವಿಶೇಷ ಆಕರ್ಷಣೆ : “ನೃತ್ಯೋಲ್ಲಾಸ ” ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಸಕ್ತ ಯುವ ಕಲಾವಿದರು ಸಂಪರ್ಕಿಸಬಹುದು. ಮೊಬೈಲ್ : +919449255842
ಈ-ಮೇಲ್ : [email protected]
Veekay News > Feature Article > Cultural > “ನೃತ್ಯೋಲ್ಲಾಸ ” ಮಾಸಿಕ ಭರತನಾಟ್ಯ ಕಾರ್ಯಕ್ರಮ
“ನೃತ್ಯೋಲ್ಲಾಸ ” ಮಾಸಿಕ ಭರತನಾಟ್ಯ ಕಾರ್ಯಕ್ರಮ
ವೀ ಕೇ ನ್ಯೂಸ್25/08/2025
posted on





















