Live Stream

[ytplayer id=’22727′]

| Latest Version 8.0.1 |

State News

ಸಮಾವೇಶ ಶಕ್ತಿಪ್ರದರ್ಶನವಲ್ಲ, ಇದು ಸಾಧನೆಯ ವೇದಿಕೆ: ಸಚಿವ ತಿಮ್ಮಾಪುರ ಸ್ಪಷ್ಟನೆ

ಸಮಾವೇಶ ಶಕ್ತಿಪ್ರದರ್ಶನವಲ್ಲ, ಇದು ಸಾಧನೆಯ ವೇದಿಕೆ: ಸಚಿವ ತಿಮ್ಮಾಪುರ ಸ್ಪಷ್ಟನೆ

ಹುಬ್ಬಳ್ಳಿ: ಮೈಸೂರಿನಲ್ಲಿ ನಡೆಯುತ್ತಿರುವ ಸಾಧನಾ ಸಮಾವೇಶ ಯಾವುದೇ ಶಕ್ತಿಪ್ರದರ್ಶನವಲ್ಲ, ಅದು ಕೇವಲ ಸರ್ಕಾರದ ಸಾಧನೆಗಳನ್ನು ಜನತೆಗೆ ತಲುಪಿಸುವ ಉದ್ದೇಶದೊಂದಿಗೆ ಆಯೋಜಿಸಲಾಗಿದೆ ಎಂದು ಸಚಿವ ಆರ್.ಬಿ. ತಿಮ್ಮಾಪುರ ಸ್ಪಷ್ಟಪಡಿಸಿದರು.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ತಿಮ್ಮಾಪುರ, “ಸಮಾವೇಶವನ್ನು ಸಿದ್ದರಾಮಯ್ಯನ ಶಕ್ತಿಪ್ರದರ್ಶನವೆಂದು ಬಿಂಬಿಸಲು ವಿರೋಧ ಪಕ್ಷ ಪ್ರಯತ್ನಿಸುತ್ತಿದೆ. ಆದರೆ ಸತ್ಯವೆಂದರೆ ಸಿದ್ದರಾಮಯ್ಯ ಅವರು ಈಗಾಗಲೇ ಮುಖ್ಯಮಂತ್ರಿ ಆಗಿದ್ದು, ರಾಜ್ಯದಾದ್ಯಂತ ಅವರಿಗೆ ಹೆಚ್ಚಿನ ಜನಮೆಚ್ಚುಗೆ ಇದೆ. ಅವರ ಬಹುಮಾನ ಮತ್ತು ನಾಯಕತ್ವವನ್ನು ಪಕ್ಷದ ಹೈಕಮಾಂಡ್ ಕೂಡಾ ಗುರುತಿಸಿದೆ. ಅವರ ವರ್ಚಸ್ಸು ವಿರೋಧ ಪಕ್ಷದ ನಾಯಕರಿಗೆ ಭಯ ಹುಟ್ಟಿಸುವಂತಾಗಿದೆ,” ಎಂದು ತೀವ್ರವಾಗಿ ಟೀಕಿಸಿದರು.

ತಿಂಗಳುಗಳ ಹಿಂದೆ ಮೈಸೂರು ಸಮಾವೇಶದ ಪ್ಲ್ಯಾನ್ ಆಗಿದ್ದು, ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ₹50 ಕೋಟಿ ಅನುದಾನ ಮೀಸಲಾಗಿರುವ ನಿರ್ಧಾರ ಈ ಸಮಾವೇಶಕ್ಕೆ ಯಾವುದೇ ಸಂಬಂಧವಿಲ್ಲವೆಂದು ಅವರು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಬಂದು ಶಾಸಕರ ಸಭೆ ನಡೆಸಿದ್ದು, ಹೈಕಮಾಂಡ್ ಸೂಚನೆಯಂತೆ ನಡೆದುಕೊಂಡಂತೆಯೇ ಆಗಿದೆ. “ಅವರು ಅಭಿವೃದ್ಧಿ ಕುರಿತು ಚರ್ಚೆ ನಡೆಸಿರಬಹುದು. ಆದರೆ ಸಚಿವರ ವಿರುದ್ಧ ಶಾಸಕರ ದೂರು ಹಾಗೂ ನಾನು ಸಭೆಗೆ ಕರೆದಿಲ್ಲ ಎಂಬುದು ನನಗೆ ಸ್ಪಷ್ಟವಾಗಿದೆ,” ಎಂದು ತಿಮ್ಮಾಪುರ ತಿಳಿಸಿದರು.

- Advertisement -  - Advertisement - 
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";