ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಆಡಳಿತದಲ್ಲಿ ಕಂಟ್ರೋಲ್ ಕಳೆದುಕೊಂಡಿದ್ದಾರೆ ಎನ್ನುವ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಆ ರೀತಿ ಯಾವುದೇ ಮಾತು ನಾನು ಕೇಳಿಲ್ಲ ಅವರು ಕಂಟ್ರೋಲ್ ಕಳೆದುಕೊಂಡಿಲ್ಲ ಎಂದಿದ್ದಾರೆ,
ನಮಗೆ ಹೈಕಮಾಂಡ್ ಇದೆ
ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಮಗೆ ಹೈಕಮಾಂಡ್ ಇದ್ದು, ಎಲ್ಲವನ್ನೂ ನೋಡಿಳ್ಳುತ್ತದೆ, ನಾನು ಎಲ್ಲರ ಜೊತೆ ಮಾತನಾಡುತ್ತೇನೆ, ನಮ್ಮ ಮಧ್ಯೆ ಯಾವುದೇ ಸಮಸ್ಯೆ ಇಲ್ಲ, ಆಡಳಿತದಲ್ಲಿ ಕಂಟ್ರೋಲ್ ಕಳೆದುಕೊಂಡಿಲ್ಲ, ಮಾಧ್ಯಮದವರೇ ಸುಮ್ಮನೆ ಸುದ್ದಿ ಹರಡಿಸುತ್ತಿದ್ದಾರೆ ಎಂದು ಡಿಸಿಎಂ ಹೇಳಿದ್ದಾರೆ,
ಬಿ.ಆರ್. ಪಾಟೀಲ್ ಅವರನ್ನು ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ನಾನು ಪಕ್ಷದ ಅಧ್ಯಕ್ಷ ಹಾಗಾಗಿ ಅವರ ಜೊತೆ ಮಾತನಾಡಬೇಕಿತ್ತು, ಅವರ ಹೇಳಿಕೆಯ ಬಗ್ಗೆ ಕೇಳಬೇಕಿತ್ತು, ಅದಕ್ಕಾಗಿ ಫೋನ್ ಮಾಡಿ ಕರೆಸಿದ್ದೆ, ಅವರು ಎಲ್ಲಾ ವಿಚಾರವನ್ನು ಹೇಳಿದ್ದಾರೆ, ನಾನು ಸಿಎಂ ಹಾಗೂ ಜಮೀರ್ ಜೊತೆ ಮಾತನಾಡಲಿದ್ದೇನೆ, ಸದ್ಯದಲ್ಲಿ ನಮ್ಮ ಪಕ್ಷದ ನಾಯಕರು ಬರುತ್ತಾರೆ, ಅವರು ಎಲ್ಲರ ಜೊತೆ ಮಾತನಾಡುತ್ತಾರೆ ಎಂದಿದ್ದಾರೆ.