Live Stream

[ytplayer id=’22727′]

| Latest Version 8.0.1 |

Politics News

ಮಾಧ್ಯಮ ಪ್ರತಿನಿದಿಗಳ ಗಮನಕ್ಕೆ – ಸಚಿವ ಸಂಪುಟ ಸಭೆ

ಮಾಧ್ಯಮ ಪ್ರತಿನಿದಿಗಳ ಗಮನಕ್ಕೆ – ಸಚಿವ ಸಂಪುಟ ಸಭೆ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಬೆಟ್ಟ ಗಿರಿಧಾಮದ ಮಯೂರ ಸಭಾಂಗಣದಲ್ಲಿ ದಿನಾಂಕ 19-06-2025 ರಂದು ಅಪರಾಹ್ನ 12.00 ಗಂಟೆಗೆ 2025ನೇ ಸಾಲಿನ 13 ನೇ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ. ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದ್ದು, ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿರುವ ಮಾಧ್ಯಮ ಪ್ರತಿನಿಧಿಗಳಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಡಳಿತ ವತಿಯಿಂದ ಅಗತ್ಯ ಪಾಸುಗಳನ್ನು ನೀಡಲಾಗುವುದು.

Home - Department of Information and Public Relations

ಅದ್ದರಿಂದ ಈ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಲಿರುವ ಬೆಂಗಳೂರು ಜಿಲ್ಲೆಯ ಮಾಧ್ಯಮ ಮಾನ್ಯತೆ ಹೊಂದಿರುವ ರಾಜ್ಯ ಮಟ್ಟದ ಪತ್ರಿಕೆಗಳ (ಇಬ್ಬರು ವರದಿಗಾರ ಹಾಗೂ ಓರ್ವ ಛಾಯಾಗ್ರಾಹಕ ಮಾತ್ರ) ಮತ್ತು ವಿದ್ಯುನ್ಮಾನ ಮಾಧ್ಯಮದ (ಇಬ್ಬರು ವರದಿಗಾರರು ಹಾಗೂ ಇಬ್ಬರು ವಿಡಿಯೋಗ್ರಾಹಕರು ಮಾತ್ರ) ಮಾಧ್ಯಮ ಪ್ರತಿನಿಧಿಗಳ ಹೆಸರು, ಪದನಾಮ, ಮೊಬೈಲ್ ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸದೊಂದಿಗೆ ಇತ್ತೀಚಿನ 2 ಭಾವಚಿತ್ರಗಳನ್ನು ಒಳಗೊಂಡಂತೆ ಕಡ್ಡಾಯವಾಗಿ ತಮ್ಮ ಸಂಸ್ಥೆಯ ಶಿಫಾರಸ್ಸು ಪತ್ರದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ತಮ್ಮ ಸಂಸ್ಥೆಯ ಮಾಧ್ಯಮ ಪ್ರತಿನಿಧಿಗಳ ಮೂಲಕ, ಶ್ರೀ ಎಂ.ಜುಂಜಣ್ಣ, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲೆ ಇವರಿಗೆ ದಿನಾಂಕ: 12-06-2025ರ ಮಧ್ಯಾಹ್ನ 3.00 ಗಂಟೆಗೆ ಒಳಗಾಗಿ ತಲುಪಿಸುವುದು.

ಪತ್ರಿಕಾಗೋಷ್ಠಿಯ ಹಾಲ್‍ಗೆ ರಾಜ್ಯಮಟ್ಟದ ಪತ್ರಿಕೆಗಳಿಗೆ ಓರ್ವ ವರದಿಗಾರ ಮತ್ತು ಛಾಯಾಗ್ರಾಹಕ, ಸುದ್ದಿವಾಹಿನಿಗಳಿಗೆ ಓರ್ವ ವರದಿಗಾರ ಮತ್ತು ಕ್ಯಾಮೆರಾಮ್ಯಾನ್ ಗೆ ಮಾತ್ರ ಅವಕಾಶವಿರುವುದರಿಂದ ಶಿಫಾರಸ್ಸು ಪತ್ರದಲ್ಲಿ ಯಾರನ್ನು ಪತ್ರಿಕಾಗೋಷ್ಠಿ ವರದಿಗಾರಿಕೆಗೆ ನಿಯೋಜಿಸಲಾಗಿದೆ ಎಂಬುದನ್ನು ನಮೂದಿಸುವುದು.

ಉಳಿದಂತೆ ರಾಷ್ಟ್ರಮಟ್ಟದ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮ ಪ್ರತಿನಿಧಿಗಳು ಮಾತ್ರ ಹೆಸರು, ಪದನಾಮ, ಮೊಬೈಲ್ ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸದೊಂದಿಗೆ ಇತ್ತೀಚಿನ 2 ಭಾವಚಿತ್ರಗಳನ್ನು ಒಳಗೊಂಡಂತೆ ಕಡ್ಡಾಯವಾಗಿ ತಮ್ಮ ಸಂಸ್ಥೆಯ ಶಿಫಾರಸ್ಸು ಪತ್ರದೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿರುವ ಸುದ್ದಿ ಮತ್ತು ಪತ್ರಿಕಾ ಶಾಖೆಗೆ ದಿನಾಂಕ 12-06-2025 ರ ಮಧ್ಯಾಹ್ನ 3.00 ಗಂಟೆಯ ಒಳಗಾಗಿ ತಲುಪಿಸುವುದು.

ವಿಶೇಷ ಸೂಚನೆ :

1. ಮಾಧ್ಯಮ ಪಟ್ಟಿಯಲ್ಲಿ ಇರುವ ಮಾಧ್ಯಮ ಪ್ರತಿನಿಧಿಗಳು ಅಗತ್ಯ ದಾಖಲೆ ಮತ್ತು ಮಾಹಿತಿಯೊಂದಿಗೆ ನೇರವಾಗಿ ಶ್ರೀ ಎಂ. ಜುಂಜಣ್ಣ, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ ಇವರಿಗೆ ಸಲ್ಲಿಸುವುದು. ಶ್ರೀಯುತರ ಮೊಬೈಲ್ ದೂರವಾಣಿ ಸಂಖ್ಯೆ: 094808 41224
2. ಅಪೂರ್ಣ ಮಾಹಿತಿ, ಶಿಫಾರಸ್ಸು ಪತ್ರ ಸಲ್ಲಿಸದಿದ್ದಲ್ಲಿ ಪರಿಗಣಿಸಲು ಸಾಧ್ಯವಿಲ್ಲ.
3. ನಿಗದಿತ ದಿನಾಂಕ ಹಾಗೂ ಅವಧಿಯ ನಂತರ ಸಲ್ಲಿಸುವ ಮಾಹಿತಿಯನ್ನು ಪರಿಗಣಿಸಲಾಗುವುದಿಲ್ಲ.
4.ಪಾಸುಗಳನ್ನು ಸಹಾಯಕ ನಿರ್ದೇಶಕರು, ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ ಕಚೇರಿಯಲ್ಲಿ ನೀಡಲಾಗುವುದು.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";