Live Stream

[ytplayer id=’22727′]

| Latest Version 8.0.1 |

State News

ರಾಜ್ಯ ಅಭಿವೃದ್ಧಿಗೆ 83 ಸಾವಿರ ಕೋಟಿ ರೂ. ಮೀಸಲಾತಿ: ಬಜೆಟ್ ಅನುದಾನ ಕುರಿತು ಬಸವರಾಜ ರಾಯರಡ್ಡಿ ಸ್ಪಷ್ಟನೆ

ರಾಜ್ಯ ಅಭಿವೃದ್ಧಿಗೆ 83 ಸಾವಿರ ಕೋಟಿ ರೂ. ಮೀಸಲಾತಿ: ಬಜೆಟ್ ಅನುದಾನ ಕುರಿತು ಬಸವರಾಜ ರಾಯರಡ್ಡಿ ಸ್ಪಷ್ಟನೆ

ರಾಜ್ಯದ ಅಭಿವೃದ್ಧಿಗಾಗಿ ಈ ಬಾರಿ ಬಜೆಟ್‌ನಲ್ಲಿ 83 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿರುವುದು ಇತಿಹಾಸದಲ್ಲೇ ಮೆಟ್ಟಿಲು ಬಡಿದ ನಿರ್ಧಾರ” ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಬಜೆಟ್‌ನಲ್ಲಿ ಶಾಸಕರಿಗೆ ಅನುದಾನ ಹಂಚಿಕೆ ಬಗ್ಗೆ ಬಜೆಟ್ ಸಭೆಯಲ್ಲೇ ಚರ್ಚೆ ನಡೆದಿದೆ ಎಂದರು. “ಸರ್ವ ಸದಸ್ಯರಿಗೂ ತಲಾ ₹50 ಕೋಟಿ ರೂ. ವಿಶೇಷ ಅನುದಾನ ನೀಡುವ ಪ್ರಸ್ತಾಪವಿತ್ತು. ಆದರೆ ಲೆಕ್ಕ ಹಾಕಿದರೆ ₹11,000 ಕೋಟಿ ಅಗತ್ಯವಿತ್ತು. ಆದ್ದರಿಂದ ₹8,000 ಕೋಟಿ ರೂ.ಗೆ ಸೀಮಿತಗೊಳಿಸಲಾಗಿದೆ” ಎಂದು ವಿವರಿಸಿದರು.

ವಿಶೇಷ ಅನುದಾನ ಹಂಚಿಕೆ ವಿವರ:

  • BBMP ವ್ಯಾಪ್ತಿಯ ಶಾಸಕರಿಗೆ ₹11,000 ಕೋಟಿ ರೂ. ಮೀಸಲಾಗಿದ್ದು,

  • ಉಳಿದ 68 ವಿಪಕ್ಷ ಶಾಸಕರಿಗೆ ತಲಾ ₹25 ಕೋಟಿ ರೂ.,

  • 27 ಕಲ್ಯಾಣ ಕರ್ನಾಟಕ ಶಾಸಕರಿಗೆ ₹25 ಕೋಟಿ ರೂ.,

  • ಉಳಿದ 101 ಕಾಂಗ್ರೆಸ್ ಶಾಸಕರಿಗೆ ತಲಾ ₹50 ಕೋಟಿ ರೂ. ನೀಡಲು ಚರ್ಚೆ ನಡೆಯುತ್ತಿದೆ.

ಇದರೊಂದಿಗೆ ಒಟ್ಟು ₹7,455 ಕೋಟಿ ರೂ. ಅನುದಾನ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 30ರಿಂದ ಆಗಸ್ಟ್ 3ರ ವರೆಗೆ ಭಾಗವಾರು ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";