ಬೆಂಗಳೂರು ನಿರ್ಮಾತೃ ಕೇಂಪೇಗೌಡರ ಜಯಂತಿ ಸಂದರ್ಭದಲ್ಲಿ ಮೂರು ದಿನಗಳ ಕಾಲ ಇದೇ ಜೂನ್ ತಿಂಗಳ 25, 26 ಮತ್ತು 27 ರಂದು ದಕ್ಷಿಣ ಕರ್ನಾಟಕದ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಯಾದ ʼಬಂಡಿದೇವರ ಉತ್ಸವʼ ವನ್ನು ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ಕೆಂಪೇಗೌಡರ ಪೂರ್ವಜರಾದ ರಣಭೈರೇಗೌಡರು ತಮಿಳುಕಂಚಿ ದಿಕ್ಕಿನ ಯಣಮಂಜಿಪುತ್ತೂರಿನಿಂದ ತಮ್ಮ ಸಹೋದರರು ಮತ್ತು ಕುಟುಂಬದೊಡನೆ ಮಾತೃನೆಲ ಕನ್ನಡನಾಡಿಗೆ ಬಂಡಿಗಳಲ್ಲಿ ಬಂದ ನೆನಪಿಗಾಗಿ ಹಾಗೂ ತಮ್ಮ ಪ್ರಾಣ ಉಳಿಸಿದ ಬಂಡಿಗಳನ್ನು ದೈವವೆಂದು ಗೌರವಿಸಲು ಮಾಡುವ ಹಬ್ಬವಿದು.
ವಿಭಿನ್ನ ಹಾಗೂ ವಿಶೇಷವಾಗಿ ಬಂಡಿದೇವರ ಉತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ. ಈ ಮೂರು ದಿನಗಳ ಆಚರಣೆಯ ಸವಿವರಗಳ ಕುರಿತಂತೆ ಮಾಹಿತಿಯನ್ನು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಳ್ಳಲಾಗುವುದು.
ಭಾಗವಹಿಸುವ ಅತಿಥಿಗಳು:
ಡಾ.ತಲಕಾಡು ಚಿಕ್ಕರಂಗೇಗೌಡ
ಶ್ರೀ ಎಂ.ಅಮರೇಶ
ದಿವ್ಯಾ ರಂಗೇನಹಳ್ಳಿ
ಎಂ.ಎ.ಮದನ್ ಕುಮಾರ್
ಗೋವಿಂದೇಗೌಡ
ದಿನಾಂಕ: ಜೂನ್ 24, 2025
ಸಮಯ: ಬೆಳಗ್ಗೆ 11:30ಕ್ಕೆ
ಸ್ಥಳ: ಪ್ರೆಸ್ ಕ್ಲಬ್, ಕಬ್ಬನ್ ಪಾರ್ಕ್ ಬೆಂಗಳೂರು