ನಮ್ಮ ಮೆಟ್ರೋ ನಿಲ್ದಾಣದಲ್ಲಿ ಅಮೂಲ್ ಮಳಿಗೆ: ಡಿಸಿಎಂ ಹೇಳಿದ್ದೇನು?
ಬೆಂಗಳೂರು: ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್ ಮೂಲದ ಜನಪ್ರಿಯ ಡೈರಿ ಕಂಪನಿ ಅಮುಲ್ ಮಳಿಗೆ ತೆರೆಯಲು ಬಿಎಂಆರ್ಸಿಎಲ್ ಒಪ್ಪಂದ ಮಾಡಿಕೊಂಡಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ, ಇದೀಗ ಈ ಸಂಬಂಧ ಡಿಸಿಎಂ ಡಿಕೆಶಿ ಪ್ರತಿಕ್ರಿಯೆ ಕೊಟ್ಟಿದ್ದು, ನಂದಿನಿಗೆ ಅನ್ಯಾಯ ಆಗೋಕೆ ಬಿಡೋದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ,
ಬೆಂಗಳೂರಲ್ಲಿ ಮಾತನಾಡಿದ ಅವರು ಗ್ಲೋಬಲ್ ಟೆಂಡರ್ ಮೂಲಕ ಬಿಎಂಆರ್ಸಿಎಲ್ ಅಮುಲ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಈ ಬಗ್ಗೆ ಪರಮಾರ್ಶೆ ಮಾಡಾಲಾಗಿದೆ, ಟೆಂಡರ್ ನಲ್ಲಿ ನಂದಿನಿ ಭಾಗವಹಿಸಿರಲಿಲ್ಲ, ಇದೀಗ ಈ ವಿಚಾರ ಗಮನಕ್ಕೆ ಬಂದಿದ್ದು 10 ಮೆಟ್ರೋ ನಿಲ್ದಾಣಗಳ ಪೈಕಿ 8 ರಲ್ಲಿ ನಂದಿನಿ ಮಳಿಗೆಗೆ, ಹಾಗೆ ಈಗಾಗ್ಲೇ ಉಳಿದ 2 ಕಡೆ ಮಾತ್ರ ಓಪನ್ ಮಾಡಲಾಗಿರುವ ಅಮುಲ್ ಸಂಸ್ಧೆಯ ಅಂಗಡಿಗೆ ಅವಕಾಶ ಮಾಡಿಕೊಟ್ಟಿರೋದಾಗಿ ಹೇಳಿದ್ದಾರೆ,
ನಂದಿನಿ ಇದ್ದರೂ ಅಮುಲ್ ಜೊತೆ ಒಪ್ಪಂದ ಯಾಕೆ ಎಂಬ ಪ್ರಶ್ರೆಯನ್ನು ಜನ ಎತ್ತಿದ್ದಾರೆ, ಅಧಿಕಾರಿಗಳ ಜೊತೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿರೋದಾಗಿ ಡಿಕೆಶಿ ಹೇಳಿದ್ದಾರೆ,
ಬಿಎಂಆರ್ಸಿಎಲ್ ನಡೆ ವಿರದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು
Veekay News > Politics News > ನಮ್ಮ ಮೆಟ್ರೋ ನಿಲ್ದಾಣದಲ್ಲಿ ಅಮೂಲ್ ಮಳಿಗೆ: ಡಿಸಿಎಂ ಹೇಳಿದ್ದೇನು?
ನಮ್ಮ ಮೆಟ್ರೋ ನಿಲ್ದಾಣದಲ್ಲಿ ಅಮೂಲ್ ಮಳಿಗೆ: ಡಿಸಿಎಂ ಹೇಳಿದ್ದೇನು?
ವೀ ಕೇ ನ್ಯೂಸ್18/06/2025
posted on

the authorವೀ ಕೇ ನ್ಯೂಸ್
All posts byವೀ ಕೇ ನ್ಯೂಸ್
Leave a reply