Live Stream

[ytplayer id=’22727′]

| Latest Version 8.0.1 |

State News

ದೆಹಲಿ ರಾಜಕೀಯದಲ್ಲಿ ಚಟುವಟಿಕೆ: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇಂದು ದೆಹಲಿಗೆ, ಪವರ್ ಶೇರಿಂಗ್ ಮತ್ತೆ ಸದ್ದು

ದೆಹಲಿ ರಾಜಕೀಯದಲ್ಲಿ ಚಟುವಟಿಕೆ: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇಂದು ದೆಹಲಿಗೆ, ಪವರ್ ಶೇರಿಂಗ್ ಮತ್ತೆ ಸದ್ದು

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಪವರ್ ಶೇರಿಂಗ್ ವಿಚಾರ ಚರ್ಚೆಗೆ ಕಾರಣವಾಗಿದೆ. ಇಂದು ಗುರುವಾರ (ಜುಲೈ 25), ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತ್ಯೇಕವಾಗಿ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಅವರ ಭೇಟಿಗೆ ರಾಜಕೀಯ ಮಹತ್ವ ಹೆಚ್ಚಾಗಿದ್ದು, ಇದನ್ನು ಕೇಂದ್ರ ನಾಯಕತ್ವದೊಂದಿಗೆ ನಿರ್ಣಾಯಕ ಮಾತುಕತೆಗೆ ಆಗಲಿದೆ ಎನ್ನಲಾಗಿದೆ.

ಇತ್ತೀಚೆಗೆ ಇಬ್ಬರೂ ದೆಹಲಿಗೆ ತೆರಳಿ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರೊಂದಿಗೆ ನಿಗಮ ಮಂಡಳಿಗಳ ನೇಮಕಾತಿ, ಅಭಿವೃದ್ಧಿ ಯೋಜನೆಗಳು, ರಾಜಕೀಯ ಸಮತೋಲನೆ ಬಗ್ಗೆ ಚರ್ಚೆ ನಡೆಸಿದ್ದರು. ಆದರೆ, ಆ ವೇಳೆ ರಾಹುಲ್ ಗಾಂಧಿ ಭೇಟಿಗೆ ಸಮಯ ಸಿಗಲಿಲ್ಲ. ಈ ಬಾರಿ ಅವರ ಭೇಟಿಗೆ ಅವಕಾಶ ಸಿಗಬಹುದೆಂದು ನಿರೀಕ್ಷೆ ಇದೆ.

ಸಚಿವ ಸಂಪುಟ ಸಭೆ ನಡೆಯಲಿದೆ

ಸಿಎಂ ಮತ್ತು ಡಿಸಿಎಂ ದೆಹಲಿಗೆ ಹೊರಡುವ ಮೊದಲು ಇಂದು ಬೆಳಗ್ಗೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುವ ಈ ಸಭೆಯಲ್ಲಿ ಪ್ರಮುಖ ನಿರ್ಣಯಗಳ ನಿರೀಕ್ಷೆ ಇದೆ.


📍 ದೆಹಲಿಯಲ್ಲಿ OBC ನ್ಯಾಯ ಸಮಾವೇಶ

ನಾಳೆ (ಶುಕ್ರವಾರ) ದೆಹಲಿಯಲ್ಲಿ ನಡೆಯಲಿರುವ OBC ನಾಯಕತ್ವ ನ್ಯಾಯ ಸಮ್ಮೇಳನ ಪ್ರಮುಖವಾಗಿದ್ದು, ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಗೆ ‘ನ್ಯಾಯ ಯೋಧ’ ಬಿರುದು ನೀಡಲಾಗಲಿದೆ. ಹಾಗೆಯೇ, ಬೆಂಗಳೂರುನಲ್ಲಿ ನಡೆದ AICC ಸಭೆಯಲ್ಲಿ ತೆಗೆದುಕೊಂಡ ಮೂರು ಮಹತ್ವದ ನಿರ್ಣಯಗಳನ್ನು ಇಲ್ಲಿ ಘೋಷಣೆ ಮಾಡಲಾಗುತ್ತದೆ.

ಡಿಕೆ ಶಿವಕುಮಾರ್ ದೇವಾಲಯಕ್ಕೆ ಗುಪ್ತ ಭೇಟಿ

ಸಾಮಾಜಿಕ ಕಾರ್ಯಕ್ರಮಗಳಿಂದ ದೂರವಿದ್ದು, ಎಲ್ಲರೊಂದಿಗೆ ಭೇಟಿಗೆ ನಿಲ್ಲಿಸಿದ ಡಿಕೆ ಶಿವಕುಮಾರ್, ಬುಧವಾರ ರಾತ್ರಿ ಹಾಸನದ ನಾಗರ ನವಿಲೆ ದೇವಾಲಯಕ್ಕೆ ಎಲ್ಲರ ಗಮನವನ್ನು ತಪ್ಪಿಸಿ ಗುಪ್ತವಾಗಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಗಿರಿಸಿದ್ದೇಶ್ವರ ದೇವರಿಗೆ ಅಭಿಷೇಕ ನೆರವೇರಿಸಿ, ಲೋಕ ಕಲ್ಯಾಣಕ್ಕಾಗಿ ಸಂಕಲ್ಪ ಮಾಡಿ ಪೂಜೆ ಸಲ್ಲಿಸಿದ್ದಾರೆ.

- Advertisement -  - Advertisement - 
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";