Live Stream

[ytplayer id=’22727′]

| Latest Version 8.0.1 |

State News

ಕಾಂಗ್ರೆಸ್ ಕಾರ್ಯಕರ್ತನ ಆಟೋಗೆ ಆಸಿಡ್ ದಾಳಿ – ಸ್ಥಳೀಯ ರಾಜಕೀಯ ವೈಷಮ್ಯ ಶಂಕೆ

ಕಾಂಗ್ರೆಸ್ ಕಾರ್ಯಕರ್ತನ ಆಟೋಗೆ ಆಸಿಡ್ ದಾಳಿ – ಸ್ಥಳೀಯ ರಾಜಕೀಯ ವೈಷಮ್ಯ ಶಂಕೆ
ಬೆಂಗಳೂರು ನಗರದಲ್ಲಿ ರಾಜಕೀಯ ದ್ವೇಷದ ಭಾಗವಾಗಿ ಆಸಿಡ್ ದಾಳಿಯ ಮತ್ತೊಂದು ಘಟನೆ ನಡೆದಿದೆ. ನಂದಿನಿಲೇಔಟ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಧನಂಜಯ್ ಅವರ ಆಟೋ ಮೇಲೆ ಆಸಿಡ್ ಎರಚಲಾಗಿದೆ. ದುಷ್ಕರ್ಮಿಗಳು ರಾತ್ರೋ ರಾತ್ರಿ ಬಂದು ಆಟೋ ಹಾನಿಗೊಳಿಸುವ ಮೂಲಕ ತಮ್ಮ ದುಷ್ಕೃತ್ಯ ಮೆರೆದಿದ್ದಾರೆ.

CTV ದೃಶ್ಯದಲ್ಲಿ ಆಸಿಡ್ ಎರೆಚಿದ ನಕಲಿ ರಾಜಕೀಯ ಕೃತ್ಯ ದಾಖಲೆ

ದಾಳಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸುಮಾರು ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ. ಧನಂಜಯ್ ಈ ದೃಶ್ಯಗಳ ಆಧಾರದ ಮೇಲೆ ದೂರು ದಾಖಲಿಸಿದ್ದು, ಫಾರೆನ್ಸಿಕ್ ವರದಿಯ ಪ್ರಕಾರ ಆಟೋ ಮೇಲೆ ಎರಚಿದ ದ್ರವವಸ್ತು ಆಸಿಡ್ ಎಂಬುದು ದೃಢವಾಗಿದೆ.

ಸ್ಥಳೀಯ ರಾಜಕೀಯ ನಾಯಕನ ತಲೆಮೇಲೆ ಶಂಕೆ – ಎಫ್‌ಐಆರ್ ದಾಖಲು

ಸ್ಥಳೀಯ ಮಟ್ಟದ ರಾಜಕೀಯ ನಾಯಕನ ಪ್ರಭಾವ ಇದಕ್ಕೊಂದು ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಈ ಬಗ್ಗೆ ಆಳವಾದ ತನಿಖೆ ನಡೆಸುತ್ತಿದ್ದು, ನಂದಿನಿಲೇಔಟ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ.
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";