Live Stream

[ytplayer id=’22727′]

| Latest Version 8.0.1 |

State News

ಮಂಡ್ಯದಲ್ಲಿ ಕಾವೇರಿ ನದಿಗೆ ಹಾರಿದ ಕಾನೂನು ವಿದ್ಯಾರ್ಥಿನಿ!

ಮಂಡ್ಯದಲ್ಲಿ ಕಾವೇರಿ ನದಿಗೆ ಹಾರಿದ ಕಾನೂನು ವಿದ್ಯಾರ್ಥಿನಿ!

ಮಂಡ್ಯ: ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಕಾವೇರಿ ನದಿಗೆ ಹಾರಿದ್ದ ಕಾನೂನು ವಿದ್ಯಾರ್ಥಿನಿ ಪವಾಡ ಸದೃಶದಂತೆ ಪಾರಾಗಿ ಬಳಿಕ ರಕ್ಷಿಸಲ್ಪಟ್ಟ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹಂಗರಹಳ್ಳಿ ಬಳಿ ನಡೆದಿದೆ,
ಬೆಂಗಳೂರಿನ ಕಾನೂನು ವಿದ್ಯಾರ್ಥಿನಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಪವಿತ್ರಾ(19) ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುತಿ, ಆಕೆ ಗುರುವಾರ ಸಂಜೆ ಕಾವೇರಿ ನದಿಗೆ ಹಾರಿದ್ದು ಸುಮಾರು ಐದು ಕಿ.ಮೀ ದೂರ ಪ್ರವಾಹದಲ್ಲಿ ಕೊಚ್ಚಿ ಹೋಗಿ ಬಳಿಕ ನದಿ ಮಧ್ಯೆ ಇದ್ದ ಮರಕ್ಕೆ ಸಿಕ್ಕಿಹಾಕಿಕೊಂಡಿದ್ದಳು, ರಾತ್ರಿಯಿಡೀ ಮರದ ಮೇಲೆಯೇ ಕಳೆದಿದ್ದಳು.
ಶುಕ್ರವಾರ ಸಹಾಯಕ್ಕಾಗಿ ಆಕೆ ಕಾಪಾಡಿ ಎಂದು ಕೂಗಿಕೊಂಡಿದ್ದಾಳೆ, ಆಗ ನದಿಯ ಆಸುಪಾಸಿನಲ್ಲಿದ್ದ ರೈತರು ಯುವತಿಯನ್ನು ನದಿ ಮಧ್ಯೆ ಗಮನಿಸಿದ್ದಾರೆ, ತಕ್ಷಣ ಅರಕೆರೆ ಠಾಣೆ ಸಬ್ ಇನ್ಸೆಪ್ಕ್ಟರ್ ಎನ್ ವಿನೋದ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಹಾಗೂ ಅಗ್ನಿಶಾಮಕ ದಳ ಸ್ಧಳಕ್ಕಾಗಮಿಸಿ ಪವಿತ್ರಾಳನ್ನು ರಕ್ಷಿಸಿ ಆಕೆಯ ಪೋಷಕರಿಗೆ ವಿಚಾರ ತಿಳಿಸಿದ್ದಾರೆ,

- Advertisement -  - Advertisement - 
ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";