Live Stream

[ytplayer id=’22727′]

| Latest Version 8.0.1 |

Cultural

ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಅಂತಗಂಗ ಭಕ್ತರಾದ ಪ್ರಾತಃಸ್ಮರಣೀಯ ಪರಮಪೂಜ್ಯ ಶ್ರೀ ರಾಮದುರ್ಗ ಮಾಧವೇಶಾಚಾರ್ಯರ ಆರಾಧನಾ ಮಹೋತ್ಸವ “

ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಅಂತಗಂಗ ಭಕ್ತರಾದ ಪ್ರಾತಃಸ್ಮರಣೀಯ ಪರಮಪೂಜ್ಯ ಶ್ರೀ ರಾಮದುರ್ಗ ಮಾಧವೇಶಾಚಾರ್ಯರ ಆರಾಧನಾ ಮಹೋತ್ಸವ “

17.08.2025 ಭಾನುವಾರ – ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಅಂತಗಂಗ ಭಕ್ತರಾದ ಪ್ರಾತಃಸ್ಮರಣೀಯ ಪರಮಪೂಜ್ಯ ಶ್ರೀ ರಾಮದುರ್ಗ ಮಾಧವೇಶಾಚಾರ್ಯರ ಆರಾಧನಾ ಮಹೋತ್ಸವ ”

” ಪರಮ ಭಾಗವತೋತ್ತಮರ ಪ್ರಿಯರೂ; ಪರಮ ವಿರಕ್ತರೂ; ಶ್ರೀ ರುದ್ರದೇವರ ಅಂಶ ಸಂಭೂತರೆಂದು ಖ್ಯಾತರೂ, ಶತಾಯುಷಿಗಳೂ ಆದ ಪ್ರಾತಃಸ್ಮರಣೀಯ ಪರಮಪೂಜ್ಯ ಶ್ರೀ ರಾಮದುರ್ಗ ಮಾಧವೇಶಾಚಾರ್ಯರು ”

” ಪರಮ ಭಾಗವತೋತ್ತಮರು = ಶ್ರೀ ವಾಯುದೇವರು ”

” ಪ್ರಾತಃಸ್ಮರಣೀಯ ಪರಮಪೂಜ್ಯ ಶ್ರೀ ರಾಮದುರ್ಗ ಮಾಧವೇಶಾಚಾರ್ಯರ ಸಂಕ್ಷಿಪ್ತ ಮಾಹಿತಿ ”

ಹೆಸರು :

ಶ್ರೀ ಮಾಧವೇಶಾಚಾರ್ಯರು

ತಂದೆ :

ಪೂಜ್ಯ ಶ್ರೀ ಶ್ರೀನಿವಾಸಾಚಾರ್ಯರು

ತಾಯಿ :

ಸಾಧ್ವೀ ರಮಾಬಾಯಿ

ಕಾಲ :

ಕ್ರಿ ಶ 1883 – 1984

ಅವತಾರ :

ಶಾಲಿವಾಹನ ಶಕೆ 1805 ಭಾದ್ರಪದ ಋಷಿ ಪಂಚಮೀ ( 1883 )

” ವಿದ್ಯಾಭ್ಯಾಸ ”

ಶ್ರೀ ಮಾಧವೇಶಾಚಾರ್ಯರು ಅವರ ತಂದೆಯವರಲ್ಲಿಯೇ ವ್ಯಾಕರಣ ಮತ್ತು ಸಮಗ್ರ ದ್ವೈತ ವೇದಾಂತವನ್ನು ಅಭ್ಯಾಸ ಮಾಡಿದರು.

” ಸಂಗೀತದ ವಿದ್ಯಾ ಗುರುಗಳು ”

ಸ್ವರಸಾಮ್ರಾಟ್ ಶ್ರೀ ಬಾಳಕೃಷ್ಣ ಬುವಾ., ಈಚಲಕರಂಜಿ

ಶ್ರೀ ಶ್ಯಾಮಸುಂದರದಾಸರು……

ಸಾಧಕರನು ಕರೆದು ಸಾದರದಲಿ ಮುಕ್ತಿ ।
ಹಾದಿಯಿದೆಂದು ಬೋಧಿಸಿ ಕೋಲೆ ।
ಹಾದಿಯಿದೆಂದು ಬೋಧಿಸದಂಥ ನಮ್ಮ ।
ಮಾಧವೇಶಾಚಾರ್ಯರ ಬಲಗೊಂಬೆ ಕೋಲೆ ।।

ನಿರ್ದೋಷ ಭಕ್ತಿಯಿಂದ ಮನಸ್ಸು ಶುದ್ಧಿ.

ಭಕ್ತಿ ದ್ವಾರ ಮುಕ್ತಿ.

ಮುಕ್ತಿ ಸಾಧ್ಯ.

ಭಕ್ತಿಯಿಂದ ಸದ್ಗತಿ ಎಂಬುದು ಶ್ರುತಿ ಸಿದ್ಧ.

ಭಕ್ತಿಯಿಂದ ಶ್ರೀ ಹರಿ ಪರಮಾತ್ಮನನ್ನು ಸರ್ವ ಕಾಲದಲ್ಲಿ ಪೂಜಿಸುವುದರಿಂದ ಜನನ – ಮರಣಾದಿ ದುಃಖ ಭಯಗಳ ಪರಿಹಾರ.

ಇದೇ ವಿಷಯವನ್ನು ಶ್ರೀ ಶ್ಯಾಮಸುಂದರದಾಸರು….

” ಮುಕ್ತಿ ಸಾಧನೆಗೆ ಭಕ್ತಿಯೇ ಹಾದಿ ”

ಎಂದು ಹೇಳುತ್ತಾ, ಈ ಹಾದಿಗೆ ಮಾರ್ಗದರ್ಶಕರಾದ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಮಾಧವೇಶಾಚಾರ್ಯರನ್ನು ಸ್ಮರಿಸಿ ನಮಸ್ಕರಿಸಿದ್ದಾರೆ.

ಶ್ರೀ ವಾಯುದೇವರನ್ನು ಉಪಾಸಿಸಿ ಅವರ ಅನುಜ್ಞೆಯಿಂದ ಅಲ್ಲಲ್ಲೇ ಇರತಕ್ಕ ಶ್ರೀ ಹರಿ ಸರ್ವೋತ್ತಮನನ್ನು ಸ್ಮರಿಸಬೇಕು.

ಕಾಲ ಕಾಲದಲ್ಲಿಯೂ ಸ್ಮರಣೆ ಮಾಡಬೇಕು.

ಹೀಗೆ ಅನುಸರಿಸಿದಲ್ಲಿ ಅನಿಷ್ಟ ನಿವೃತ್ತಿ, ಇಷ್ಟ ಪ್ರಾಪ್ತಿಯಾಗುವುದಲ್ಲದೆ ಸಂತತ ಶ್ರೀ ಹರಿ ಪರಮಾತ್ಮನ ಸ್ಮರಣೆಯಿಂದ ” ಮೋಕ್ಷ ಪಥ ” ಪಿಡಿದು, ” ಮುಕುಂದನ ದರ್ಶನ ” ಪಡೆಯುತ್ತಾನೆ.

ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಮಾಧವೇಶಾಚಾರ್ಯರು ಭಾಗವತೋತ್ತಮರು.

ಶ್ರೀ ಹರಿಯ ಪ್ರೀತಿ ಪಾತ್ರರು.

ಜ್ಞಾನ – ಭಕ್ತಿ – ವೈರಾಗ್ಯದ ಸಾಕಾರ ಮೂರ್ತಿಗಳು.

ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಮಾಧವೇಶಾಚಾರ್ಯರ ನಡೆ ನುಡಿಗಳಲ್ಲಿ ಭಾಗವತ ಧರ್ಮ ಅಡಿಗಡಿಗೆ ಕಾಣುತ್ತೇವೆ.

” ವೈರಾಗ್ಯ ನಿಧಿಗಳು ”

ಒಮ್ಮೆ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಮಾಧವೇಶಾಚಾರ್ಯರು ಶ್ರೀ ಸತ್ಯಧ್ಯಾನತೀರ್ಥರ ಸನ್ನಿಧಿಯಲ್ಲಿದ್ದಾಗ ನಡೆದ ಘಟನೆ ಹೀಗಿದೆ….

ಸ್ಥಳ :

ಕಾಶಿ ಕ್ಷೇತ್ರದ ಶ್ರೀ ಮಧ್ವಾಶ್ರಮ

ದಿನ :

ಕಾರ್ತೀಕ ಶುದ್ಧ ಏಕಾದಶೀ

ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಮಾಧವೇಶಾಚಾರ್ಯರು ರಾಗಮಾಲಿಕೆಯಿಂದ ದ್ವಾದಶ ಸ್ತೋತ್ರ ರಾಗ ಆಲಾಪನೆ ಮಾಡಿದರು.

ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಮಾಧವೇಶಾಚಾರ್ಯರ ಸಂಗೀತ ಮಾಧುರ್ಯಕ್ಕೆ – ಸಂಗೀತದ ಕಲೆಗೆ ಶ್ಯಾನುಭೋಗ ಮಠದ ಸತ್ಯಧ್ಯಾನತೀರ್ಥರು ಪರಮ ಸಂತುಷ್ಟರಾಗಿ ಶ್ರೀ ಆಚಾರ್ಯರಿಗೆ ಬಂಗಾರದ ಕಡಗ ಹಾಕಿ ಆಶೀರ್ವದಿಸಿದರು.

ಮರುದಿನ ಪ್ರಾತಃ ಕಾಲದಲ್ಲಿ ಸತ್ಯಾಧ್ಯಾನರ ಸಮಕ್ಷಮದಲ್ಲಿ ಶ್ರೀ ಮಾಧವೇಶಾಚಾರ್ಯರು ಆ ಬಂಗಾರದ ಕಂಕಣವನ್ನು ಸತ್ಪಾತ್ರನಾದ ಬ್ರಾಹ್ಮಣನಿಗೆ ಕೃಷ್ಣಾರ್ಪಣ ಬುದ್ಧಿಯಿಂದ ದಾನ ಮಾಡಿದರು.

ಶ್ರೀ ಮಾಧವೇಶಾಚಾರ್ಯರು ಎಂಥಾ ವೈರಾಗ್ಯ ನಿಧಿಗಳು ಎನ್ನುವುದಕ್ಕೆ ಇದು ಜ್ವಲಂತ ನಿದರ್ಶನ!

” ಶ್ರೀ ಆಚಾರ್ಯರ ಉಪದೇಶಾಮೃತವನ್ನು ಭಕ್ತರಿಗಾಗಿ “…….

” ಪರಮಪೂಜ್ಯ ಶ್ರೀ ಮಾಧೇವೇಶಾಚಾರ್ಯರ ವದನಾರವಿಂದದಲ್ಲಿ ಹೊರ ಹೊಮ್ಮಿದ ಏಕಾದಶೀ ಮಹಾತ್ಮೆ…..

” ಹನ್ನೊಂದು ಇಂದ್ರಿಯ ನಿಗ್ರಾಕ್ಕಾಗಿ ಹನ್ನೊಂದನೇ ದಿನದ ವ್ರತವನ್ನು ಶ್ರೀ ಸರ್ವಜ್ಞಾಚಾರ್ಯರು ನಿರೂಪಿಸಿದ್ದಾರೆ.

ಅಂಬರೀಷ ಕಾರ್ತೀಕ ಶುದ್ಧದಿಂದ ಏಕಾದಶೀ ವ್ರತವನ್ನು ಪ್ರಾರಂಭಿಸಿ 24 ಏಕಾದಶಿಯಲ್ಲಿ ಅಪರೋಕ್ಷ ಹೊಂದಿದನು.

ದಶಮೀ ದಿವಸ ಸಾತ್ವಿಕ ಆಹಾರ ಸ್ವೀಕರಿಸಬೇಕು.

ಏಕಾದಶೀ ದಿವಸ ಲೌಕಿಕ ಕಾರ್ಯ ಮಾಡಬಾರದು.

ಏಕಾದಶ ಇಂದ್ರಿಯಗಳಿಂದ ಭಗವತ್ಕಾರ್ಯವನ್ನೇ ಮಾಡಬೇಕು.

ಪರೀಕ್ಷಾರ್ಥ ದೂರ್ವಾಸರು ಅಂಬರೀಷನಲ್ಲಿ ಅತಿಥಿಗಳಾಗಿ ಬಂದು ಪಾರಣಿಗೆ ವ್ಯಾಳೆ ಮೀರಿಸಿದರು.

ಶಾಸ್ತ್ರದಲ್ಲಿ ಹೇಳಿದ್ದು ದೇವರ ಆಜ್ಞಾಯೆಂದು ಸರಿಯಾದ ವ್ಯಾಳೆಗೆ ತೀರ್ಥ ತೆಗೆದುಕೊಂಡು ಪಾರಣಿ ಮುಗಿಸಿದನು.

ದೂರ್ವಾಸರು ಶ್ಯಾಪ ಕೊಡಲು ಶ್ರೀ ವಿಷ್ಣುವಿನ ಸುದರ್ಶನವು ದೂರ್ವಾಸರ ಬೆನ್ನು ಹತ್ತಿತು.

” ಸುದರ್ಶನ ” ಯೆಂದರೆ …..

” ಸಚ್ಛಾಸ್ತ್ರ ಜ್ಞಾನ ಅಥವಾ ಅಪರೋಕ್ಷ “.

ಇದರಂತೆ ಸರ್ವರೂ 24 ತಾಸು ಈದಿನ ಭಗವನ್ಮಹಾತ್ಮೆಯಲ್ಲೇ ಕಾಲ ಕಳೀಬೇಕು.

ಲೌಕಿಕ ಕಾರ್ಯಕ್ಕೆ ಆಸ್ಪದ ಕೊಡಬಾರದು.

ರಾತ್ರಿ 12 ಘಂಟೆ ನಂತರ ಹರಿವಾಣ ಸೇವಾ.

1. ರಾತ್ರಿ ನಿದ್ರೆ ಬ್ಯಾಡಾ

2. ಹಗಲು ಅನ್ನ ಬ್ಯಾಡಾ

ಏಕಾದಶೀ ದಿನ ಬಿಟ್ಟು ಉಳಿದ ದಿನಗಳಲ್ಲಿ ಈ ಪ್ರಕಾರ ನಿಯಮದಿಂದ ಇರತಕ್ಕದ್ದು, ನಡೆಯತಕ್ಕದ್ದು.

1. ಆಹಾರದ ವೇಳೆ 3 ತಾಸು
2. ನಿದ್ರಾ 5 ತಾಸು
3. ಉದ್ಯೋಗ 8 ತಾಸು
4. ದೇವರ ಕೆಲಸ 8 ತಾಸು

ಹೀಗೆ ನಡೆದರೆ ಶ್ರೀ ಹರಿ ಪರಮಾತ್ಮನ ಸಮೀಪದಲ್ಲಿ ವಾಸಕ್ಕೆ ಆಸ್ಪದವಾಗುವದು.

” ಉಪಾಸನಾಧಿಕಾರ ” ಬರುವುದು ಎಂದರ್ಥ!!

” ಮಹತ್ವದ ಘಟನೆಗಳು ”

1. ಆದವಾನಿ, ಧಾರವಾಡ ( ಶ್ರೀ ರಾಯರಿಗೆ ಮತ್ತು ಶ್ರೀ ಪ್ರಾಣದೇವರಿಗೆ ), ಬೆಳಗಾವಿ, ಶ್ರೀ ಕ್ಷೇತ್ರ ಗಯಾ ( ವಿಷ್ಣು ಪಾದಕ್ಕೆ ), ಗದಗ ಮುಂತಾದ ಕಡೆ ಶ್ರೀ ಹರಿಗೆ ಕೋಟಿ ತುಳಸೀ ಅರ್ಚನೆ ಮಾಡಿದರು.

2. ವಾಸ ಪ್ರಸ್ಥಾಶ್ರಮಿಗಳಿಗಾಗಿ ” ಮುಮುಕ್ಷುಮ್ ” ಯೆಂಬ ಆಶ್ರಮವನ್ನು ರಾಯಚೂರಿನ ಹತ್ತಿರ ಇರುವ ಕೃಷ್ಣಾ ಸ್ಟೇಷನ್ ಹತ್ತಿರ ಸ್ಥಾಪಿಸಿದರು.

3. ಬೆಳಗಾವಿಯಲ್ಲಿ ಸಂಸಾರದಲ್ಲಿ ವಿರಕ್ತರಾದ ಜನರ ಮನಸ್ಸಿಗೆ ಶಾಂತಿ ಉಂಟು ಮಾಡುವುದಕ್ಕಾಗಿ ” ಹರೇ ರಾಮಾಶ್ರಮ ” ಸ್ಥಾಪಿಸಿದರು.

4. ಶ್ರೀ ವರದೇಂದ್ರತೀರ್ಥರ ಸನ್ನಿಧಾನದಲ್ಲಿ ” ಸಾರೋದ್ಧಾರ ಪ್ರವಚನ ”

5. ಶಿರವಾರ, ಕುರುಕುಂದಿಯಲ್ಲಿ ” ಸಂಕ್ಷಿಪ್ತ ಶಾಸ್ತ್ರಾರ್ಥ ಪ್ರಕರಣ ” ಪ್ರವಚನ

6. ಶಿರವಾರ ಮತ್ತು ದೇವದುರ್ಗದಲ್ಲಿ ” ವೈರಾಗ್ಯ ಪ್ರಕರಣ ಗುಣ ನಿವೃತ್ತಿ ” ಕುರಿತು ಪ್ರವಚನ

7. ಪೂಜ್ಯ ಸುಳಾದಿ ಕುಪ್ಪೆರಾಯರು ಶ್ರೀ ಆಚಾರ್ಯರ ” ಸಾರೋದ್ಧಾರದ ಸಾರ ” ವನ್ನು ಬರೆದು ಶ್ರೀ ಆಚಾರ್ಯರಿಗೆ ಕ್ರಿ ಶ 1950 – 51 ರಲ್ಲಿ ತೋರಿಸಿದರು.

8. ಶ್ರೀ ಕ್ಷೇತ್ರ ಕುಸಮೂರ್ತಿಯ ಶ್ರೀ ಕೃಷ್ಣ ದ್ವೈಪಾಯನರ ಮೂಲ ಬೃಂದಾವನ ಸನ್ನಿಧಾನದಲ್ಲಿ ” ಸಂಕ್ಷೇಪ ಶಾಸ್ತ್ರಾರ್ಥ ಪ್ರಕರಣ ಮತ್ತು ಧರ್ಮೋಪದೇಶ ಪ್ರಕರಣವನ್ನು ಹೇಳಿದರು.

9. ಕ್ರಿ ಶ 1951 – 52 ರಲ್ಲಿ ಕೃಷ್ಣಾದಲ್ಲಿ ” ಸಾರೋದ್ಧಾರದ ಗುರು ವಿಚಾರಣ ಪ್ರಕರಣ, ಅಪರೋಕ್ಷ ಗುಣ ನಿವೃತ್ತಿ ಪ್ರಕರಣವನ್ನು ಮತ್ತು ಬಿಂಬೋಪಾಸನ ಪ್ರಕರಣವನ್ನು ಹೇಳಿದರು.

10. ಛಾವಣಿ ಮುಕ್ಕಾಮಿಯಲ್ಲಿ ” ಇಂದ್ರಿಯ ಜಯ ಪ್ರಕರಣ ” ವನ್ನು ಹೇಳಿದರು.

11. ಕ್ರಿ ಶ 1958 ರಲ್ಲಿ ಶ್ರೀ ಅಥಣಿ ಭೀಮದಾಸರೊಂದಿಗೆ ಕಾಶಿ ಯಾತ್ರೆ

12. ಕ್ರಿ ಶ 1960 – 61 ರಲ್ಲಿ ಅಥಣಿ ಶ್ರೀ ರಾಯರ ಮಠವನ್ನು ಸ್ವೀಕರಿಸದ್ದಾರೆ

13. ಕ್ರಿ ಶ 1972 ರಲ್ಲಿ ಅಥಣಿ ಶ್ರೀ ರಾಯರ ಮಠವನ್ನು ಶ್ರೀ ಚಚಡಿಯವರಿಗೆ ಒಪ್ಪಿಸಿ ಕಾಶಿಗೆ ಪ್ರಯಾಣ.

14. ಕ್ರಿ ಶ 1983 ರಲ್ಲಿ ಗಂಗಾ ನದಿಗೆ ಮಹಾಪುರ ಬಂದು ಊರಲ್ಲಿ ನೀರು ಹೊಕ್ಕಿದ್ದರಿಂದ ಹನುಮಾನ್ ಘಾಟಿನ ಶ್ರೀ ಕೃಷ್ಣ ಮಂದಿರದಲ್ಲಿ ವಾಸಿಸುತ್ತಿದ್ದ ಪೂಜ್ಯ ಆಚಾರ್ಯರ ಪಲ್ಲಂಗದ ಬುಡಕ್ಕೆ ಗಂಗಾ ಪ್ರವಾಹ ಉಕ್ಕೇರಿ ಬಂತು.

ಅವರು ಅಲ್ಲಿಯೇ ಗಂಗಾದೇವಿಯನ್ನು ಪೂಜಿಸಿ, ಪ್ರಾರ್ಥಿಸಿ ಸ್ನಾನ ಮಾಡಿದರು.

ಪರಮ ವಿರಕ್ತರೂ, ಜ್ಞಾನಿಗಳೂ, ಶ್ರೀ ಪರಮಾತ್ಮನಾದ ಬಿಂದೂ ಮಾಧವನ ಏಕಾಂತ ಭಕ್ತರಾದ ಶ್ರೀ ಮಾಧವೇಶಾಚಾರ್ಯರ ದರ್ಶನಕ್ಕಾಗಿ ಭಾಗೀರಥಿ ತಾನೇ ಬಹು ಸಂಭಮದಿಂದ ಉಕ್ಕೇರಿ ಬಂದಳು.

ಕಾರಣ ಶ್ರೀ ಮಾಧವೇಶಾಚಾರ್ಯರು ” ಶ್ರೀ ರುದ್ರದೇವರ ಅಂಶ ಸಂಭೂತ ” ರೆಂದು ಹಿರಿಯರ ಅಭಿಪ್ರಾಯವಿದೆ!!

” ಸಮಕಾಲೀನರು ”

ಶ್ರೀ ಶ್ಯಾಮಸುಂದರದಾಸರು, ಶ್ರೀ ಸುಳಾದಿ ಕುಪ್ಪೆರಾಯರು, ಶ್ರೀ ಉಪ್ಪಲಿ ಗುರುಮಧ್ವರಾಯರು, ಶ್ರೀ ಕಾಶಿದಾಸರು ಮತ್ತು ನಮ್ಮೇಳರ ಚಿರ ಪರಿಚಿತರಾದ ವಿದ್ವಾನ್ ಗಯಾ ರಾಮಾಚಾರ್ಯ ಮಂತ್ರಾಲಯ.

” ನಿರ್ಯಾಣ ”

ಶಾಲಿವಾಹನ ಶಕೆ 1906 ಶ್ರಾವಣ ಬಹುಳ ನವಮಿ ಮೇಲೆ ದಶಮಿ ಬಂದಾಗ ಮಧ್ಯಾಹ್ನ 4 ಗಂಟೆಗೆ ಕಾಶಿಯ ಹನುಮಾನ್ ಘಾಟಿನಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ ಹರಿ ನಾಮ ಸ್ಮರಣೆ ಮಾಡುತ್ತಾ ತಮ್ಮ ಇಹಲೋಕ ಯಾತ್ರೆ ಮುಗಿಸಿ ” ವೈಕುಂಠಕ್ಕೆ ಪ್ರಯಾಣ ” ಬೆಳೆಸಿದರು ( ಕ್ರಿ ಶ 1984 ).

ಶ್ರೀ ಆಚಾರ್ಯರ ಉತ್ತರ ಕ್ರಿಯೆಗಳನ್ನು ಅವರ ಶಿಷ್ಯರಾದ ಶ್ರೀ ಟೋಣಪಿ ಗೋಪಾಲಾಚಾರ್ಯರು ನೆರವೇರಿಸಿದರು.

ಆಚಾರ್ಯ ನಾಗರಾಜು ಹಾವೇರಿ …

ಮಾಧವೇಶರು ಮಾಧವಾoಘ್ರಿ ಭಜಕರು !
ಮಾಧವೇಶರ ಭಕ್ತಿಯಿಂ ನೆನೆದರೆ !
ಮಾಧವ ವೆಂಕಟನಾಥ ಒಲಿವಾ !!

ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";