ಬೆಂಗಳೂರು : ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ (ಜುಲೈ 24ರಂದು) ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವಪ್ರತಿಭೆ ಶ್ರೀ ಶಿಶಿರ ಕೆ.ಪಿ. ಅವರು ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಅಪರೂಪದ ಹರಿದಾಸರ ಪದಗಳ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶ್ರೀ ಪುರಂದರದಾಸರ “ಗಜವದನ ಬೇಡುವೆ” ಎಂಬ ವಿಘ್ನನಿವಾರಕನ ಕೃತಿಯೊಂದಿಗೆ ಗಾಯನ ಆರಂಭಿಸಿದ ಶಿಶಿರ “ಗುರು ರಾಘವೇಂದ್ರರ ಚರಣ ಕಮಲವನ್ನು” (ಗೋಪಾಲದಾಸರು),
“ವಾಸುದೇವನ ಚರಣ” (ಪುರಂದರದಾಸರು), “ಶಿವನೇ ನಾ ನಿನ್ನ ಸೇವಕನಯ್ಯ (ಶ್ರೀಧವಿಠ್ಠಲದಾಸರು), “ನಂಬಿದೆ ನಿನ್ನ ಪಾದವ” (ಗುರು ವಿಜಯವಿಠ್ಠಲದಾಸರು), “ಬಾರೆ ಭಾಗ್ಯದ ನಿಧಿಯೇ” (ಅನಂತಾದ್ರೀಶದಾಸರು),
“ಸ್ಮರಣೆ ಒಂದೇ ಸಾಲದೆ ಗೋವಿಂದನ” (ಪುರಂದರದಾಸರು), “ಬನ್ನಿ ಮುರಳಿಯ ನಾದವ ಕೇಳಿ” (ಶ್ರೀ ವಿದ್ಯಾಪ್ರಸನ್ನತೀರ್ಥರು), “ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ” (ಪುರಂದರದಾಸರು), “ನಾರಸಿಂಹ ಶ್ರೀ ನಾರಸಿಂಹ” (ಶ್ರೀ ಸಂಕರ್ಷಣ ಒಡೆಯರು),:”ಶ್ರೀಪತಿಯ ಕಟಾಕ್ಷ ವೀಕ್ಷಣ” (ಪುರಂದರದಾಸರು),
“ಆಡಿದನೋ ರಂಗ”(ಪುರಂದರದಾಸರು)
“ಕರೆದು ತಾರೆಲೆ ರಂಗನ”(ಶ್ರೀ ವ್ಯಾಸರಾಜರು), “ಕರುಣಿಸೋ ರಂಗ ಕರುಣಿಸೋ” (ಪುರಂದರದಾಸರು), “ಶ್ರೀನಿಕೇತಾನ ಪಾಲಯಮಾಂ” (ಜಗನ್ನಾಥದಾಸರು), “ಕರಿಯ ಕಾಯ್ದವನ” (ಶ್ರೀ ವಾದಿರಾಜರು), “ನೀ ಕರುಣಿಸೋ ವಿಠ್ಠಲ” (ಪ್ರಸನ್ನ ವೆಂಕಟದಾಸರು), “ಹರೇ ವಿಠ್ಠಲ ಪಾಂಡುರಂಗ” (ವಿಜಯದಾಸರು) ಕೃತಿಗಳನ್ನು ಪ್ರಸ್ತುತ ಪಡಿಸಿ, ಸಂದರ್ಭಕ್ಕೆ ತಕ್ಕಂತೆ ಕೆಲವು ಉಗಾಭೋಗಗಳನ್ನೂ ಹಾಡಿದ್ದು ಅಂದಿನ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟಿತು. ಇವರ ಗಾಯನಕ್ಕೆ ಕು|| ಸಂಸ್ಕೃತಿ ಎಸ್. ಬಾಣಾವರ್ (ಹಾರ್ಮೋನಿಯಂ), ಶ್ರೀ ಅವೀಕ್ಷಿತ್ ಶ್ರೀನಿವಾಸನ್ (ತಬಲಾ) ಮತ್ತು ಕು|| ಇಂಚರ ಎಸ್.ಆರ್ (ತಾಳ) ಸಾಥ್ ನೀಡಿದರು. ಎಲ್ಲಾ ಕಲಾವಿದರೂ ಭಕ್ತಿಭಾವಪರವಶರಾಗಿ ಕಾರ್ಯಕ್ರಮವನ್ನು ಗುರುಗಳಿಗೆ ಸಮರ್ಪಣೆ ಮಾಡಿದರು.
ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ಯರು ಕಲಾವಿದರನ್ನು ಸನ್ಮಾನಿಸಿ, ಗುರುಗಳ ಪ್ರಸಾದವನ್ನು ನೀಡಿ. ಶುಭಕೋರಿದರು.
Veekay News > Feature Article > Cultural > ಸಂಗೀತ ಪ್ರಿಯರ ಮನಸೂರೆಗೊಂಡ ಶಿಶಿರ ಗಾಯನ
ಸಂಗೀತ ಪ್ರಿಯರ ಮನಸೂರೆಗೊಂಡ ಶಿಶಿರ ಗಾಯನ
ವೀ ಕೇ ನ್ಯೂಸ್26/07/2025
posted on

the authorವೀ ಕೇ ನ್ಯೂಸ್
All posts byವೀ ಕೇ ನ್ಯೂಸ್
Leave a reply