Live Stream

[ytplayer id=’22727′]

| Latest Version 8.0.1 |

National News

*ವಾರಣಾಸಿ – ದೆಹಲಿ ಸರ್ವೋದಯ ಪಾದಯಾತ್ರೆ* 

*ವಾರಣಾಸಿ – ದೆಹಲಿ ಸರ್ವೋದಯ ಪಾದಯಾತ್ರೆ* 
ವಾರಣಾಸಿ ಯಲ್ಲಿನ ಸರ್ವೋದಯ ಸಂಸ್ಥೆಯ ಆಸ್ತಿಯ ಅತಿಕ್ರಮಣ, ಗುಜರಾತಿನ ಸಬರಮತಿ ಹಾಗೂ ಗುಜರಾತ್ ವಿದ್ಯಾಪೀಠದಲ್ಲಿನ ಸರಕಾರಿ ಹಸ್ತಕ್ಷೇಪ,ಕೇಂದ್ರದ ಕೆಲವು ಜನ ವಿರೋಧಿ ನೀತಿ – ಇವುಗಳನ್ನು ಪ್ರತಿಭಟಿಸಿ ವಾರ್ಧಾ ದಲ್ಲಿನ ಸರ್ವ ಸೇವಾ ಸಂಘ , ಇತರ ಸಮಾನ ಮನಸ್ಕ ಸಂಸ್ಥೆಗಳ ಸಹಯೋಗದಲ್ಲಿ ಬರುವ ಅಕ್ಟೋಬರ್ 2 ರಿಂದ ನವೆಂಬರ್  26 ರ ಅವಧಿಯಲ್ಲಿ 1000 ಕಿ. ಮೀ. ಪಾದಯಾತ್ರೆಯ ನ್ನು ಹಮ್ಮಿಕೊಂಡಿದೆ.
ವಾರಣಾಸಿಯ ರಾಜಘಾಟ್ ನಿಂದ ಪ್ರಾರಂಭವಾಗುವ ಯಾತ್ರೆ  ಅಲಹಾಬಾದ್, ರಾಯ್ ಬರೇಲಿ, ಲಕ್ನೋ, ಕಾನ್ಪುರ್, ಷಹಜಹಾನ್ ಪುರ, ಮಥುರಾ  , ಗಾಜಿಯಾಬಾದ್ ಸೇರಿದಂತೆ 110 ಗ್ರಾಮಗಳ ಮೂಲಕ ಸಾಗುತ್ತದೆ.
ಗಾಂಧಿ – ಸರ್ವೋದಯ – ಲೋಕ ಶಕ್ತಿ ಕುರಿತಂತೆ ಪ್ರಚಾರ ಕೈಗೊಳ್ಳಲಾಗುವುದು. ಉಚಿತ ಊಟ ವಸತಿ ವ್ಯವಸ್ಥೆ ಮಾಡಲಾಗುವುದು. ಸರಾಸರಿ ಪ್ರತಿದಿನ 20 ಕಿ. ಮೀ. ನಂತೆ 55 ದಿವಸಗಳಲ್ಲಿ ಈ ದೂರವನ್ನು ಕ್ರಮಿಸಲು ಯೋಜಿಸಲಾಗಿದೆ. ಮೇಲ್ಕಂಡ ಎಂಟು ನಗರಗಳಲ್ಲಿ ಯಾತ್ರೆಯನ್ನು ಸೇರಿಕೊಳ್ಳುವ – ನಿರ್ಗಮಿಸುವ ಅವಕಾಶವಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ  ಮೊಬೈಲ್ ಸಂಖ್ಯೆ 8874719992( ಅರವಿಂದ್ ಅಂಜುಮ್)  9415300520 ( ನಂದಲಾಲ್ ಮಾಸ್ಟರ್)
9453047097 ( ರಾಮ್ ಧೀರಜ್ ) 9880140640 ( ಡಾ. ವಿ.ಪ್ರಶಾಂತ್ ಬೆಂಗಳೂರು ) ಇವರುಗಳನ್ನು ಸಂಪರ್ಕಿಸಬಹುದು ಎಂದು ರಾಜ್ಯ ಸರ್ವೋದಯ ಮಂಡಳಿ ಅಧ್ಯಕ್ಷ ಡಾ. ಹೆಚ್ ಎಸ್ ಸುರೇಶ್ ತಿಳಿಸಿದ್ದಾರೆ.
VK NEWS DIGITAL :
ಜ್ಯೋತಿರ್ಭೀಮೇಶ್ವರ ವ್ರತ (ಭೀಮನ ಅಮಾವಾಸ್ಯೆ) ಆಚರಣೆ ಮತ್ತು ಮಹತ್ವ

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";