ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ಭಿನ್ನಮತೀಯರ ಗುಂಪು ಪಟ್ಟು ಹಿಡಿದಿರುವ ಭಾರೀ ಗೊಂದಲ ಸೃಷ್ಟಿಯಾಗಿದೆ, ಹೈಕಮಾಂಡ್ ಗೂ ಸಹ ಮಣಿಯದ ನಾಯಕರು ಬಿ.ವೈ.ವಿಜಯೇಂದ್ರ ಪದಜ್ಯುತಿಗೆ ಒತ್ತಾಯಿಸಿದ್ದಾರೆನ್ನಲಾಗಿದ್ದು, ರಾಜ್ಯಾಧ್ಯಕ್ಷರ ಘೋಷಣೆ ವಿಳಂಬವಾಗುವ ಸಾಧ್ಯತೆಯಿದೆ,
ಬಿಜೆಪಿಯ ಎಲ್ಲ ಬಣಗಳಿಗೆ ಸೇರಿದ ನಾಯಕರಿಂದಲೂ ಸಹ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ರಮೇಶ್ ಜಾರಕಿಹೊಳ್ಳಿ, ಅರವಿಂದ್ ಲಿಂಬಾವಳಿ, ಅರವಿಂದ್ ಬೆಲ್ಲದ್, ಕುಮಾರ್ ಬಂಗಾರಪ್ಪ ಸೇರಿದಂತೆ ಹಲವರು ವಿಜಯೇಂದ್ರ ಸಾರಥ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ,
ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಸೋತು 60 ಸ್ಧಾನಕ್ಕೆ ಇಳಿದಿರುವ ಬಿಜೆಪಿಯನ್ನು ರಾಜ್ಯದಲ್ಲಿ ಸಂಘಟಿಸಬೇಕಿರುವ ಸಮಯದಲ್ಲಿ ಪಕ್ಷದಲ್ಲೇ ನಡೆಯುತ್ತಿರುವ ಒಳಜಗಳಗಳು ಹೈಕಮ್ಯಾಂಡ್ ಗೂ ಕೂಡ ತಲೆನೋವಾಗಿ ಪರಿಣಮಿಸಿದೆ,