ಕುರುಹಿನಶೆಟ್ಟಿ ಸಮುದಾಯ ಸಂಘಟನೆ, ನೂತನ ಕಟ್ಟಡ ನಿರ್ಮಾಣ, ಸಮುದಾಯವನ್ನು ಮುಖ್ಯವಾಹಿನಿಗೆ ತರಲು ನನ್ನ ಹೋರಾಟ-ಬಿ.ಲಿಂಗೇಶ್ವರ್
ವಿ.ವಿ.ಪುರಂ: ಕುರುಹಿನಶೆಟ್ಟಿ ಕೇಂದ್ರ ಸಂಘ(ರಿ)2025ನೇ ಚುನಾವಣೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಶ್ರೀ ಬಿ.ಲಿಂಗೇಶ್ವರ್ ರವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ.
ಅಧ್ಯಕ್ಷೀಯ ಅಭ್ಯರ್ಥಿಯಾದ ಬಿ.ಲಿಂಗೇಶ್ವರರವರು ಚನಾವಣೆಯಾಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದರು, ಸಮಾಜದ ಮುಖಂಡರಾದ ಜಿ.ಸೋಮಣ್ಣರವರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀಮತಿ ರೂಪಲಿಂಗೇಶ್ವರ್ ಮತ್ತು ರಾಜ್ಯಾದ್ಯಂತ ಕುರುಹಿನಶೆಟ್ಟಿ ಸಮುದಾಯದವರು, ಕಾರ್ಯಕರ್ತರು, ಅಭಿಮಾನಿಗಳು ಶ್ರೀ ಬಿ.ಲಿಂಗೇಶ್ವರರವರ ಅಭಿಮಾನಿಗಳು, ಸ್ನೇಹಿತರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷೀಯ ಅಭ್ಯರ್ಥಿ ಬಿ.ಲಿಂಗೇಶ್ವರ್ ರವರು ಮಾತನಾಡಿ ರಾಜ್ಯದಲ್ಲಿ ಕುರುಹಿನಶೆಟ್ಟಿ ಸಮಾಜದವರು 15ಲಕ್ಷಕ್ಕೂ ಹೆಚ್ಚು ಜನರು ಇದ್ದಾರೆ ಹಂಚಿಹೋಗಿರುವ ನಮ್ಮ ಸಮಾಜವನ್ನು ಒಗ್ಗೂಡಿಸುವ ಸಂಘಟನೆ ಮಾಡಲಾಗುತ್ತದೆ.
ಪಾರದರ್ಶಕ ಆಡಳಿತ ಮತ್ತು ಸಮಾಜದ ಏಳಿಗೆಗಾಗಿ ಮತ್ತು ನೂತನ ಕಟ್ಟಡ ನಿರ್ಮಾಣ ಮಾಡಲು ಕಾರ್ಯಯೋಜನೆ ರೂಪಿಸಲಾಗುವುದು.
ನೇಕಾರ ಕುಲಕಸಬು ಆಗಿದೆ, ನೇಕಾರ ಉದ್ಯಮ ನಶಿಸಿ ಹೋಗುತ್ತಿದೆ, ನೇಕಾರಿಕೆಗೆ ಪ್ರೋತ್ಸಹ, ಸಹಕಾರ ನೀಡಬೇಕು ಈ ಉದ್ಯಮದಲ್ಲಿ ನಮ್ಮ ಸಮಾಜ ಯುವಕರು ಮುಂದೆ ಬರಬೇಕು ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜೊತೆಯಲ್ಲಿ ಸಮನ್ವಯ ಸಾಧಿಸಿ ಕುರುಹಿನ ಶೆಟ್ಟಿ ಸಮುದಾಯ ಅಭಿವೃದ್ದಿಗೆ ಶ್ರಮವಹಿಸಲಾಗುವುದು.
ಶಿಕ್ಷಣ ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಕುರುಹಿನ ಶೆಟ್ಟಿ ಸಮುದಾಯಕ್ಕೆ ಹೆಚ್ಚಿನ ಅವಕಾಶಕ್ಕೆ ಕೊಡಿಸಲು ಹೋರಾಟ ಮಾಡಲಾಗುವುದು.
ಹೋರಾಟ ನಿತ್ಯ ನಿರಂತರ ಕುರುಹಿನಶೆಟ್ಟಿ ಸಮಾಜ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶ ನನ್ನದು.
ರಾಜ್ಯಾದ್ಯಂತ ನಮ್ಮ ತಂಡಕ್ಕೆ ಉತ್ತಮ ಬೆಂಬಲವಿದೆ ಮತ್ತು ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಹೇಳಿದರು.