ಬೆಂಗಳೂರು: ಬೆಂಗಳುರು ನಗರ ಕಟ್ಟಿದ ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದ ಅದ್ಭುತ ಆಡಳಿತಗಾರರಾಗಿದ್ದರು, ಅವರು ನಮ್ಮ ಆಧುನಿಕ ಬೆಂಗಳೂರಿನ ನಿರ್ಮಾತೃ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ,
ಕೆಂಪೇಗೌಡರ 516 ನೇ ಜಯಂತಿ
ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ನಾಡಪ್ರಭು ಕೆಂಪೇಗೌಡ ರವರ 516 ನೇ ಜಯಂತಿ ಯ ಅಂಗವಾಗಿ ಅವರು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಿಎಂ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಸರ್ಕಾರ ನಿರ್ಮಲಾನಂದ ಸ್ವಾಮೀಜಿ ಅವರೊಂದಿಗೆ ಚರ್ಚೆ ಮಾಡಿ ಜನ್ಮದಿನಾಂಕವನ್ನು ತಿಳಿದುಕೊಂಡಿದೆ, ಅಂದಿನಿಂದ ನಿರಂತರವಾಗಿ ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ, ಬೆಂಗಳೂರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದ ಅದಕ್ಕೆ ಅಡಿಪಾಯ ಹಾಕಿದ್ದು ಕೆಂಪೇಗೌಡರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ,
ಕೆಂಪೇಗೌಡರ ಆಡಳಿತ ನಮಗೆ ಮಾದರಿ
ಇನ್ನು ಬೆಂಗಳೂರಿನ ನಾಲ್ಕು ಭಾಗದಲ್ಲಿ ಗೋಪುರಗಳನ್ನು ಕಟ್ಟಿಸಿದ ಅವರು ಆಡಳಿತದ ಬಗ್ಗೆ ಬಹಳ ಉತ್ತಮವಾದ ತಿಳುವಳಿಕೆ ಇದ್ದ ವ್ಯಕ್ತಿ, ಹೀಗಾಗಿಯೇ ಚಿಕ್ಕಪೇಟೆ,ಬಳೆಪೇಟೆ ಸೇರಿದಂತೆ ಅನೇಕ ಪೇಟೆಗಳನ್ನು ತಮ್ಮ ಆಡಳಿತದ ಸಮಯದಲ್ಲಿ ನಿರ್ಮಿಸಿದ್ದು, ಅವರ ಆಡಳಿತ ನಮಗೆ ಮಾದರಿಯಾಗಿದೆ, ಬೆಂಗಳೂರನ್ನು ಅಭಿವೃದ್ಧಿ ಮಾಡುವ ಅವರ ಕನಸನ್ನು ನಮ್ಮ ಸರ್ಕಾರ ನನಸು ಮಾಡುತ್ತಿದೆ ಎಂದಿದ್ದಾರೆ.
Veekay News > Feature Article > ಕೆಂಪೇಗೌಡರ ಆಡಳಿತವೇ ನಮಗೆ ಮಾದರಿ-ಸಿಎಂ
ಕೆಂಪೇಗೌಡರ ಆಡಳಿತವೇ ನಮಗೆ ಮಾದರಿ-ಸಿಎಂ
ವೀ ಕೇ ನ್ಯೂಸ್27/06/2025
posted on
