ಶಿಕಾರಿಪುರ: ಶ್ಯಾಮಪ್ರಸಾದ ಮುಖರ್ಜಿ ಮತ್ತು ಕರ್ನಾಟಕ ಕೇಸರಿ ಎಂದೇ ಪ್ರಸಿದ್ಧರಾಗಿದ್ದ ಜಗನ್ನಾಥ ರಾವ್ ಜೋಷಿಯವರು ನಮಗೆ ಪ್ರೇರಣಾದಾಯಕರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಶಿಕಾರಿಪುರ ಮಂಡಲದಲ್ಲಿ ಈ ದಿನ ನಡೆದ ಡಾ. ಶ್ಯಾಮಪ್ರಸಾದ ಮುಖರ್ಜಿಯವರ ಸ್ಮøತಿ ದಿನ ಹಾಗೂ ಜಗನ್ನಾಥ ಜೋಷಿಯವರ ಹುಟ್ಟುಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 1951 ರಲ್ಲಿ ಜನಸಂಘದ ಸ್ಥಾಪನೆಯಲ್ಲಿ ಇವರು ಸಹ ಪ್ರಮುಖರು. ಮುಖರ್ಜಿಯವರು ದೇಶಕ್ಕಾಗಿ ಹೋರಾಡಿದ ನಾಯಕರು. ಕರ್ನಾಟಕ ಕೇಸರಿ ಎಂದೇ ಪ್ರಸಿದ್ಧರಾಗಿದ್ದ ಜೋಷಿಯವರು ಸಹ ದೇಶಕ್ಕಾಗಿ ಸಮರ್ಪಿಸಿಕೊಂಡವರು. ಈ ಇಬ್ಬರು ಮಹಾನ್ ಚೇತನಗಳಿಗೆ ಈ ದಿನ ಗೌರವ ಸಲ್ಲಿಸುವ ವಿಶೇಷ ಸಂದರ್ಭದಲ್ಲಿ ಅವರನ್ನು ಸ್ಮರಿಸುತ್ತ ಮುಂದಿನ ದಿನಗಳಲ್ಲಿ ಇವರ ಹೋರಾಟಗಳು ನಮಗೆ ಪ್ರೇರಣಾದಾಯಕ ಎಂದು ತಿಳಿಸಿದರು.
ತಾಲ್ಲೂಕಿನ ಬಿಜೆಪಿಯ ಅಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ, ಸಂಘಟನೆಯ ಹಿರಿಯರಾದ ಕೆ.ಎಸ್. ಗುರುಮೂರ್ತಿ, ಟಿ.ರಾಮನಾಯ್ಕ, ವಸಂತ ಗೌಡ, ಚೆನ್ನವೀರಪ್ಪ, ಶಿವಪ್ಪ ಬಿಎಸ್ಎನ್ಎಲ್, ಗಿರೀಶ್ ಧಾರವಾಡ, ಸುಧೀರ ಮಾರವಳ್ಳಿ, ಯುವ ಮೋರ್ಚಾದ ಅಧ್ಯಕ್ಷ ವೀರಣ್ಣ ಗೌಡ, ಬೆಣ್ಣೆ ಪ್ರವೀಣ್ ಉಪಸ್ಥಿತರಿದ್ದರು.