Live Stream

[ytplayer id=’22727′]

| Latest Version 8.0.1 |

State News

ಯಾರ್ಯಾರಿಗೆ ಸಿಗೋಲ್ಲ ರೇಷನ್ ಕಾರ್ಡ್?

ಯಾರ್ಯಾರಿಗೆ ಸಿಗೋಲ್ಲ ರೇಷನ್ ಕಾರ್ಡ್?

 

ಬೆಂಗಳೂರು: ಅಕ್ರಮವಾಗಿ ಪಡಿತರ ಕಾರ್ಡ್ ಹೊಂದಿರೋ ಜನರಿಗೆ ಸರ್ಕಾರ ಶಾಕ್ ಕೊಟ್ಟಿದ್ದು ರಾಷ್ಟ್ರೀಯ ಆಹಾರ ಕಾಯ್ದೆ ಉಲ್ಲಂಘಿಸಿರುವ ಮತ್ತು ಅನರ್ಹ ಪಡಿತರ ಚೀಟಿ ಪತ್ತೆ ಸಲುವಾಗಿ ಖಾಸಗಿ ಸಮೀಕ್ಷೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ,
ರಾಜ್ಯದಲ್ಲಿ ಹೆಚ್ಚುಕ್ಕಮ್ಮಿ 44 ಲಕ್ಷ ಅನರ್ಹ ಪಡಿತರ ಫಲಾನುಭವಿಗಳು ಇದ್ದಾರೆ ಎಂಬ ಅಂಶ ಗೊತ್ತಾಗಿದ್ದು, ಇವುಗಳನ್ನು ರದ್ದುಪಡಿಸಲು ರಾಜ್ಯ ಸರ್ಕಾರ ಥರ್ಡ್ ಪಾರ್ಟಿ ಸರ್ವೇಗೆ ನಿರ್ಧರಿಸಿದೆ,
2011 ಜನಸಂಖ್ಯೆ ದತ್ತಾಂಶದ ಪ್ರಕಾರ 4,01,93,130 ಸ್ವೀಕೃತದಾರರ ಮಿತಿ ನಿಗದಿ ಮಾಡಲಾಗಿದೆ, ಆದರೆ 44 ಲಕ್ಷ ಹೆಚ್ಚುವರಿ ಕಾರ್ಡ್ ಇರುವುದಾಗಿ ಹೇಳುತ್ತಿದೆ, ಹೀಗಾಗಿ ಕಠಿಣ ಕ್ರಮ ಜರುಗಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ, ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆ ಬಿದ್ದಿದೆ, ಕರ್ನಾಟಕ ತೆರಿಗೆ ಸಂಗ್ರಹಣೆಯಲ್ಲಿ 2ನೇ ಸ್ಧಾನದಲ್ಲಿದ್ರೂ, ವೆಚ್ಚವನ್ನು ಸರಿದೂಗಿಸಲಾಗುತ್ತಿಲ್ಲ ಹೀಗಾಗಿ ಸರ್ವೇ ಗೆ ಸರ್ಕಾರ ಮುಂದಾಗಿದೆ,
ವ್ಯಕ್ತಿಯ ವಾರ್ಷಿಕ ಆದಾಯ 1.20 ಲಕ್ಷಗಿಂತ ಹೆಚ್ಚಿರುವ ಕುಟುಂಬ, 3 ಹೆಕ್ಟೇರ್ಗಿಂತ ಹೆಚ್ಚಿನ ಭೂಮಿ ಹೊಂದಿದವರು ಸರ್ಕಾರಿ, ಅನುದಾನಿತ, ಸರ್ಕಾರಿ ಸಂಯೋಜಿತ ಸಂಸ್ಧೆಗಳಲ್ಲಿ ನೌಕರರು ಬಿಪಿಎಲ್ ರೇಷನ್ ಕಾರ್ಡ್ ಹೊಂದಲು ಅನರ್ಹವಾಗುತ್ತಾರೆ, ಇದಲ್ಲದೆ 1 ಸಾವಿರ ಚದರಡಿ ಪಕ್ಕಾ ಮನೆ ಹೊಂದಿದ್ದರೆ ಆದಾಯ, ವೃತ್ತಿ ತೆರಿಗೆ, ಜಿಎಸ್ ಟಿ ಪಾವತಿದಾರರು ವಾಣಿಜ್ಯ ವಾಹನ ಹೊಂದಿದವರು ಕಾರ್ಡ್ ಹೊಂದಿದ್ದರೆ, ಅಂಥವರನ್ನು ಪತ್ತೆ ಹಚ್ಚಿ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ,

ವೀ ಕೇ ನ್ಯೂಸ್
";