Live Stream

[ytplayer id=’22727′]

| Latest Version 8.0.1 |

National News

ನ್ಯಾಯಮೂರ್ತಿ ದಿ. ಎಸ್. ಆರ್.ನಾಯಕ್ ಅವರಿಗೆ ನುಡಿನಮನ

ನ್ಯಾಯಮೂರ್ತಿ ದಿ. ಎಸ್. ಆರ್.ನಾಯಕ್ ಅವರಿಗೆ ನುಡಿನಮನ

ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ನ್ಯಾಯಾಂಗದ ಘನತೆಯನ್ನು ಎತ್ತಿಹಿಡಿದ ಪ್ರಮುಖರಲ್ಲಿ ದಿ. ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಆರ್. ನಾಯಕ್ ಸಹ ಒಬ್ಬರು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ತಿಳಿಸಿದರು.

ಇಂದು ಕರ್ನಾಟಕ ಉಚ್ಚ ನ್ಯಾಯಾಲಯದ ಕೋರ್ಟ್ ಹಾಲ್ 1 ರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಿ. ನ್ಯಾಯಮೂರ್ತಿಗಳಾದ ಎಸ್.ಆರ್.ನಾಯಕ್ ಅವರು ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾಗಿ, ಛತ್ತೀಸ್‍ಘÀಡ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಎಲ್ಲಾ ವರ್ಗದ ಜನರಿಗೆ ನ್ಯಾಯ ಕೊಡುವಲ್ಲಿ ಶ್ರಮಿಸಿದರು. ಅವರ ನ್ಯಾಯದಾನ ಆದರ್ಶಗಳನ್ನು ನಾವು ನಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಗೌರವಾನ್ವಿತ ನ್ಯಾಯಮೂರ್ತಿಗಳಾದ ದಿವಂಗತ ಎಸ್.ಆರ್.ನಾಯಕ್ ಅವರು ಉತ್ತರ ಕನ್ನಡ ಜಿಲ್ಲೆಯ ನಾಡುಮಕ್ಕೇರಿ ಗ್ರಾಮದಲ್ಲಿ ಕೃಷಿಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಕುಟುಂಬದಲ್ಲಿ 1945 ರ ಜನವರಿ 1 ರಲ್ಲಿ ಜನಿಸಿದರು. ಇವರ ತಾಯಿ ನಾಗಮ್ಮ ರಾಮ ನಾಯಕ್ ಮತ್ತು ತಂದೆ ರಾಮ ರಂಗ ನಾಯಕ್. ಇವರು ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಬ್ರಿಟಿμï ಸರ್ಕಾರವು ಜೈಲಿಗೆ ಹಾಕಿದ್ದರು.

ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣವನ್ನು ದಾಂಡೇಲಿಯ ಜನತಾ ವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಮೈಸೂರಿನ ಯುವರಾಜ ಕಾಲೇಜಿನಿಂದ ಬಿ.ಎಸ್ಸಿ. ಪದವಿಯನ್ನು ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ. ಹಾಗೂ ಎಲ್.ಎಲ್.ಎಂ. ಪದವಿಗಳನ್ನು ಪಡೆದಿದ್ದರು. ಎಲ್.ಎಲ್.ಬಿ. ಪದವಿಯ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಶ್ರೇಣಿ ಗಳಿಸಿದ್ದರು.

ಇವರು 1974 ರ ಮಾರ್ಚ್ 1 ರಂದು ರಾಜ್ಯ ವಕೀಲರ ಪರಿಷತ್ತಿನಲ್ಲಿ ವಕೀಲರಾಗಿ ನೊಂದಾಯಿಸಿದರು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರಾದ ದಿವಂಗತ ಗೋಪಾಲಕೃಷ್ಣ ಶೆಟ್ಟಿಯವರ ಕಚೇರಿಯಲ್ಲಿ ತಮ್ಮ ವಕೀಲ ವೃತ್ತಿ ಆರಂಭಿಸಿದ ಇವರು ನಂತರ ಹಿರಿಯ ವಕೀಲರಾದ ಎಲ್. ಜಿ. ಹಾವನೂರ್ ಅವರ ಮಾರ್ಗದರ್ಶನದಲ್ಲಿ ತಮ್ಮ ವಕೀಲ ವೃತ್ತಿಯನ್ನು ಮುಂದುವರೆಸಿ ತದನಂತರ ಸ್ವತಂತ್ರವಾಗಿ ವಕೀಲ ವೃತ್ತಿಯನ್ನು ಕೈಗೊಂಡರು.

ಶ್ರೀಯುತರು ವೃತ್ತಿಯಲ್ಲಿನ ಶ್ರದ್ಧೆ ಹಾಗೂ ಕಾನೂನಿನ ವಿಷಯಗಳಲ್ಲಿ ನಿಪುಣರಾಗಿದ್ದ ಕಾರಣ ಇವರನ್ನು 1979 ನೇ ಇಸವಿಯಿಂದ 1984 ನೇ ಇಸವಿಯವರಿಗೂ ಇವರನ್ನು ಭೂ ಸುಧಾರಣಾ ಪ್ರಕರಣಗಳ ಉಸ್ತುವಾರಿ ಸರ್ಕಾರಿ ವಕೀಲರಾಗಿ ನೇಮಿಸಲಾಯಿತು. 1992 ರ ಡಿಸೆಂಬರ್ 9 ರಂದು ಖಾಯಂ ಸರ್ಕಾರಿ ವಕೀಲರಾಗಿ ಸೇರಿ, ನಿμÁ್ಠವಂತ ಸೇವೆಗಳನ್ನು ಯಶಸ್ವಿಯಾಗಿ ಸಲ್ಲಿಸಿದ ಕೀರ್ತಿಗೆ ಪಾತ್ರರಾಗಿದ್ದರು.

ಶ್ರೀಯುತರು ಅರೆಕಾಲಿಕ ಕಾನೂನು ಪ್ರಾಧ್ಯಾಪಕರಾಗಿ ಬಿ.ಎಂ.ಎಸ್. ಹಾಗೂ ಎಸ್.ಆರ್. ಎಸ್. ಹಾವನೂರ್ ಕಾಲೇಜುಗಳಲ್ಲಿ ತಮ್ಮ ಕಾರ್ಯ ನಿರ್ವಹಿಸಿದ್ದರು. ಇವರು ಎಲ್ಲಾ ಕಾನೂನಿನ ವಿಷಯಗಳನ್ನು ಬೋಧಿಸುವ ಕಲೆಯನ್ನು ರೂಢಿಸಿಕೊಂಡು ಕಾನೂನಿನ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿದ್ದರು. ಕಠಿಣ ಪರಿಶ್ರಮ, ವೃತ್ತಿಯಲ್ಲಿನ ಪ್ರಾಮಾಣಿಕತೆ ಹಾಗೂ ಶ್ರದ್ಧೆಯನ್ನು ಪರಿಗಣಿಸಿ ಅವರನ್ನು 1994 ನೇ ಫೆಬ್ರವರಿ 24 ರಂದು ಗೌರವಾನ್ವಿತ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಯಿತು. ಅಲ್ಪ ಅವಧಿಯಲ್ಲಿಯೇ  1994 ನೇ ಮಾರ್ಚ್ 21 ರಂದು ಇವರನ್ನು ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯಕ್ಕೆ  ವರ್ಗಾಯಿಸಲಾಯಿತು.

ಗೌರವಾನ್ವಿತ ದಿವಂಗತ ನ್ಯಾಯಮೂರ್ತಿಗಳು 1997 ರಲ್ಲಿ ಅಂಧ್ರ ಪ್ರದೇಶ ನ್ಯಾಯಾಂಗ ಅಕಾಡೆಮಿಯ ಗವರ್ನರ್ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ನ್ಯಾಯಾಧಿಕಾರಿಗಳ ತರಬೇತಿ ಮತ್ತು ನಿರಂತರ ಶಿಕ್ಷಣಕ್ಕಾಗಿ ಈ ಸಂಸ್ಥೆಯನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯ ಸಂಸ್ಥೆಯಾಗಿ ರೂಪಿಸುವಲ್ಲಿ ಅವರ ಕೊಡುಗೆ ಗಣನೀಯ.

2003 ರ ಜನವರಿ 2 ರಂದು ಪುನ: ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ವರ್ಗಾವಣೆಗೊಂಡರು. 2004 ರ ಅಕ್ಟೋಬರ್ 20 ರಿಂದ ನವೆಂಬರ್ 18 ರವರೆಗೆ ಕರ್ನಾಟಕ ಉಚ್ಚ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾಗಿ ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದಲ್ಲದೆ, ಡಿ.ಎಲ್. ಜಗದೀಶ್ ರವರು ವಕೀಲರ ಸಂಘದ ಅಧ್ಯಕ್ಷರಾಗಿದ್ದಾಗ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಅವಧಿಯಲ್ಲಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ವಕೀಲರ ವಾಹನಗಳ ನಿಲುಗಡೆಗಾಗಿ ಕಟ್ಟಡದ ನವೀಕರಣ ಮತ್ತು ನ್ಯಾಯಾಲಯದ ರಸ್ತೆಯ ವ್ಯವಸ್ಥೆಯನ್ನು ಮಾಡಿದಂತಹ ಕೀರ್ತಿ ಇವರದ್ದಾಗಿರುತ್ತದೆ.

ಇವರು 2005 ರ ನವೆಂಬರ್ 14 ರಂದು ಛತ್ತಿಸ್‍ಗಡ್ ಜಿಲ್ಲೆಯ ಮುಖ್ಯ ನ್ಯಾಯಾಮೂರ್ತಿಗಳಾಗಿ ನೇಮಕಗೊಂಡು, 2007 ಜನವರಿ 1 ರಂದು ನಿವೃತ್ತಿ ಹೊಂದಿದರು.

ಗೌರವಾನ್ವಿತ ದಿವಂಗತ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದ ನಂತರ, ವಿಶ್ರಮಿಸದೇ ಸಕ್ರಿಯರಾಗಿ ಹೊಸದಾಗಿ ರೂಪುಗೊಂಡ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಮೊದಲ ಅಧ್ಯಕ್ಷರಾಗಿ 2007ನೇ ಇಸವಿಯಿಂದ 2012ನೇ ಇಸವಿಯವರೆಗೆ ಪರಿಣಾಮಾಕಾರಿಯಾಗಿ ಸಲ್ಲಿಸಿದ ಸೇವೆ ಶ್ಲಾಘನೀಯ. ಇದಲ್ಲದೇ. ಜೂನ್, 2014 ನೇ ಇಸವಿಯಿಂದ ಜೂನ್ 2019ನೇ ಇಸವಿಯವರೆಗೆ ಕರ್ನಾಟಕದ ಕಾನೂನು ಆಯೋಗದ ಅಧ್ಯಕ್ಷರಾಗಿ ಸಹ ತಮ್ಮ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿದ್ದಾರೆ.

ಗೌರವಾನ್ವಿತ ದಿವಂಗತ ನ್ಯಾಯಮೂರ್ತಿಗಳು ಅಧ್ಯಕ್ಷರಾಗಿ, ಧಾರವಾಡ ಮತ್ತು ಕಲಬುರ್ಗಿ ಉಚ್ಚ ನ್ಯಾಯಾಲಯಗಳ ಸಂಚಾರಿ ಪೀಠಗಳನ್ನು ಸ್ಥಾಪನೆ ಮಾಡಲು ಸ್ಥಳ ಪರಿಶೀಲನೆ ಸಲ್ಲಿಸಿದ ವರದಿಯ ಆಧಾರದ ಮೇರೆಗೆ ಉತ್ತರ ಕರ್ನಾಟಕದ ಜನರ ಬಹುಕಾಲದ ಕನಸನ್ನು ನನಸಾಗಿಸಿದ ಹಾಗೂ ಈ ಕೊಡುಗೆ ಅತ್ಯಂತ ಪ್ರಶಂಸನೀಯ ಮತ್ತು ಚಿರಸ್ಮರಣೀಯ ಎಂದು ತಿಳಿಸಿದರು.

ಗೌರವಾನ್ವಿತ ದಿವಂಗತ ನ್ಯಾಯಮೂರ್ತಿಗಳಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಜನವರಿ 2008 ರಲ್ಲಿ “ನಾಡೋಜ” ಪ್ರಶಸ್ತಿಯನ್ನು ನೀಡಿತ್ತು ಮತ್ತು ಬೆಂಗಳೂರು ವಿಶ್ವವಿದ್ಯಾಲಯವು ಮೇ 2009 ರಲ್ಲಿ ಅವರಿಗೆ ‘ಗೌರವ ಡಾಕ್ಟರೇಟ್’ (ಕಾನೂನುಗಳು) ನೀಡಿ ಗೌರವಿಸಲಾಗಿತ್ತು.

ಇವರ ನ್ಯಾಯಾಂಗ ಸೇವೆ ಹಾಗೂ ಸಾರ್ವಜನಿಕ ಸೇವೆ ಮುಂಬರುವ ಯುವ ವಕೀಲರಿಗೆ ದಾರಿದೀಪವಾಗಿದೆ. ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ವೀ ಕೇ ನ್ಯೂಸ್
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";