Live Stream

[ytplayer id=’22727′]

| Latest Version 8.0.1 |

State News

 ವಸಂತ ನವರಾತ್ರಿ ಶ್ರೀರಾಮೋತ್ಸವ 

 ವಸಂತ ನವರಾತ್ರಿ ಶ್ರೀರಾಮೋತ್ಸವ 
ಬೆಂಗಳೂರು : ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಮಾರ್ಚ್ 19 ರಿಂದ 29ರ ವರೆಗೆ ಶ್ರೀರಾಮೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಮುಖ್ಯ ಅತಿಥಿಗಳಾಗಿ ಮಲ್ಲೇಶ್ವರದ ಶಾಸಕರಾದ ಡಾ|| ಸಿ.ಎನ್. ಅಶ್ವತ್ಥ ನಾರಾಯಣ ಆಗಮಿಸಲಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳು :
ಮಾರ್ಚ್ 19, ಬೆಳಗ್ಗೆ 7 ಗಂಟೆಯಿಂದ ರಾಮಾಯಣ ಪಾರಾಯಣ, ಶ್ರೀರಾಮ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು, ಸಂಜೆ 5-30 ಪಂಚಾಂಗ ಶ್ರವಣ. ಮಾರ್ಚ್ 27, ಬೆಳಗ್ಗೆ 7-30 ರಿಂದ ರಾಮನವಮಿ ಪ್ರಯುಕ್ತ ವಿಶೇಷ ಪಂಚಾಮೃತ ಅಭಿಷೇಕ, ಶ್ರೀರಾಮದೇವರಿಗೆ ತೊಟ್ಟಿಲು ಸೇವೆ, ಪಾನಕ ಸೇವೆ. ಮಾರ್ಚ್ 29, ಬೆಳಗ್ಗೆ ಶ್ರೀರಾಮ ಪಟ್ಟಾಭಿಷೇಕದ ಪ್ರಯುಕ್ತ ಅನ್ನದಾನ ಸೇವೆ.
ಸಾಂಸ್ಕೃತಿಕ ಕಾರ್ಯಕ್ರಮಗಳು  (ಪ್ರತಿದಿನ ಸಂಜೆ 6-30ಕ್ಕೆ) :
ಮಾರ್ಚ್ 19– ಭರತನಾಟ್ಯ ಪ್ರದರ್ಶನ : ಕು|| ಸುರಭಿ ಶ್ರೀಧರ್ ಕೈಪೆ,
ಮಾರ್ಚ್ 20-ದ್ವಂದ್ವ ಪಿಟೀಲು ವಾದನ : ವಿ|| ಜಯಶ್ರೀ, ವಿ|| ಆದಿತ್ಯ ಮತ್ತು ಸಂಗಡಿಗರು,
ಮಾರ್ಚ್ 21-ಭರತನಾಟ್ಯ ಪ್ರದರ್ಶನ : ನೃತ್ಯ ದಿಶಾ ಟ್ರಸ್ಟಿನ  ವಿದ್ಯಾರ್ಥಿಗಳಿಂದ. ಗುರುಗಳು : ಡಾ|| ದರ್ಶಿನಿ ಮಂಜುನಾಥ್.
ಮಾರ್ಚ್ 22-ಶಾಸ್ತ್ರೀಯ ಸಂಗೀತ : ವಿ|| ಅಕ್ಷಯ ರುದ್ರಪಟ್ಟಣಂ ಮತ್ತು ಸಂಗಡಿಗರು,
ಮಾರ್ಚ್ 23-ಸಮೂಹ ಗಾಯನ : ವಿದುಷಿಯರಾದ ಶ್ರೀದೇವಿ ಗರ್ತಿಕೆರೆ, ಇಂದಿರಾ ಶರ್ಮಾ, ಎಂ.ಕೆ. ಶ್ರೀದೇವಿ, ಚಾಂದಿನಿ ಗರ್ತಿಕೆರೆ.
ಮಾರ್ಚ್ 24-ನೃತ್ಯ ವೈಭವ : ಮೈಸೂರಿನ ಶ್ರೀ ಗಣೇಶ ಸಂಗೀತ ನೃತ್ಯಾಲಯ ಚಾರಿಟಿಯಟಬಲ್ ಟ್ರಸ್ಟಿನ ಕಲಾವಿದರಿಂದ, ನಿರ್ದೇಶನ : ವಿ|| ಆರತಿ ಅರುಣ್,
ಮಾರ್ಚ್ 25-ಹರಿದಾಸ ಮಂಜರಿ : ಕು|| ಅನನ್ಯ ಬೆಳವಾಡಿ (ಗಾಯನ), ವಿ|| ಅಮಿತ್ ಶರ್ಮಾ (ಕೀಬೋರ್ಡ್), ವಿ|| ಸರ್ವೋತ್ತಮ (ತಬಲಾ).
ಮಾರ್ಚ್ 26-ಶಾಸ್ತ್ರೀಯ ಸಂಗೀತ : ವಿ|| ಆರ್.ಕೆ. ಪ್ರಸನ್ನಕುಮಾರ್ ಮತ್ತು ಸಂಗಡಿಗರು,
ಮಾರ್ಚ್ 27-ಸಂಜೆ 5-30ಕ್ಕೆ ಸ್ತುತಿ ವಾಹಿನಿ ತಂಡದವರಿಂದ ಭಜನಾಮೃತ. ನಂತರ ಭಗವದ್ಗೀತ ಶ್ಲೋಕಗಳ ಪಠಣ : ಕು|| ವೈನವಿ.
ಮಾರ್ಚ್ 28-ಹರಿದಾಸ ವೈಭವ : ಕು|| ಅವನಿ ಭಟ್ (ಗಾಯನ), ವಿ|| ಟಿ.ಎಸ್. ರಮೇಶ್ (ಕೀಬೋರ್ಡ್), ವಿ|| ಪ್ರಮಥ್ ವಿಠಲ್ (ತಬಲಾ),
ಮಾರ್ಚ್ 29-ಸಂಜೆ 7-30ಕ್ಕೆ ಶ್ರೀರಾಮದೇವರ ಪ್ರಾಕಾರೋತ್ಸವ ನಂತರ ಶ್ರೀ ಶಾರದಾ ಶಂಕರ ಭಜನಾ ಮಂಡಳಿಯ ಸದಸ್ಯರಿಂದ ದೇವರನಾಮ ಮತ್ತು ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀರಾಮಮಂದಿರದ ಗೌರವ ಕಾರ್ಯದರ್ಶಿ ಶ್ರೀ ಸಿ. ಚಂದ್ರಶೇಖರ್ ತಿಳಿಸಿದ್ದಾರೆ.
ವೀ ಕೇ ನ್ಯೂಸ್
";